ದಸರಾ ಕ್ರೀಡಾಕೂಟದಲ್ಲಿ ಹಲವಾರು ಪ್ರಶಸ್ತಿ ಕೈಗೆತ್ತಿಕೊಂಡ ವಿದ್ಯಾರ್ಥಿಗಳು…
(SHIVAMOGA): ಆನಂದಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕರಾದ ನಟರಾಜ್ ಕೆ ಆರ್ ಅವರಿಂದ ತರಬೇತಿಗೊಂಡು ಸಾಗರದಲ್ಲಿ ನಡೆದಂತಹ ವಯಸ್ಸಿನ ಮಿತಿ ಇಲ್ಲದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮದೇ ಆದ ಚಾಪನ್ನು ಮೂಡಿಸಿ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಕೈಗೆತ್ತಿಕೊಂಡಿದ್ದಾರೆ.
ಬಾಲಕರ ವಿಭಾಗದಲ್ಲಿ ಜೀವನ್ 200, 400 ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಜೀವನ್, ಅಶ್ವಿನ್ ಮತ್ತು ಮನೋಜ್ ಇವರ ತಂಡ 4×100 ಮತ್ತು 4× 400 ರಿಲೇ ಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಾಲಕಿಯ ವಿಭಾಗದಲ್ಲಿ ಜಯಲಕ್ಷ್ಮಿ, ಚೈತ್ರ, ಬೃಂದಾ, ಐಶ್ವರ್ಯ, ದೀಪಿಕಾ ಇವರೆಲ್ಲರೂ ಅಥ್ಲೆಟಿಕ್ ವಿಭಾಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮತ್ತು ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ವಯಸ್ಸಿನ ಮಿತಿ ಇಲ್ಲದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಮ್ಮ ಹೆಸರು ಹಾಗೂ ಶಾಲೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವರದಿ: ಅಮಿತ್ ಆರ್ ಆನಂದಪುರ