ಚಿತ್ರದುರ್ಗನ್ಯೂಸ್

ಅಂತರ್ ಜಿಲ್ಲಾ ಕುರಿ ಕಳ್ಳರನ್ನು ಸೆರೆಹಿಡಿದ  ಸಬ್ ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ್.

ಅಂತರ್ ಜಿಲ್ಲಾ ಕುರಿ ಕಳ್ಳರನ್ನು ಸೆರೆಹಿಡಿದ  ಸಬ್ ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ್.

(CHITRADURGA): ಮೊಳಕಾಲ್ಮುರು: ಅಂತರ್ ಜಿಲ್ಲಾ ಕುರಿ ಕಳ್ಳರನ್ನು  ಸೆರೆಹಿಡಿದ ರಾಂಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ್ ಹೊಸಪೇಟೆ. ಕುರಿಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದ ಕುರಿಗಳರನ್ನು ವಾಹನ ಸಮೇತವಾಗಿ ಬಂಧಿಸಿದ ರಾಂಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ ಹೊಸಪೇಟೆ.


ತಾಲೂಕಿನ ರಾಮಸಾಗರ ಗ್ರಾಮದ ಸಣ್ಣ ಗಂಗಪ್ಪನವರು ಕಳೆದ ತಿಂಗಳ 25/09/2024ರಂದು ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ಅನ್ವಯ ಚಿತ್ರದುರ್ಗ ಜಿಲ್ಲೆಯ ಮಾನ್ಯ ಪೋಲಿಸ್ ಅಧಿಕ್ಷಕರು  ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ, ಕುಮಾರಸ್ವಾಮಿ, ಪೊಲೀಸ್ ಉಪಾಧೀಕ್ಷರಾದ, ಟಿ.ಬಿ ರಾಜಣ್ಣ , ಹಾಗೂ ಮೊಳಕಾಲ್ಮೂರು ವೃತ ನಿರೀಕ್ಷಕರದ ವಸಂತ ವಿ ಅಸೋದೆ, ರವರ ಮಾರ್ಗದರ್ಶನದಲ್ಲಿ ಶೀಘ್ರವಾಗಿ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಲು ರಾಂಪುರ ಠಾಣೆಯ  ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ, ಎ ಎಸ್ ಐ,ಎಸ್ ಲೋಕೇಶ್, ಹೆಚ್ ಸಿ ಇಮಾಮ್ ಹುಸೇನ್-1317, ಶಶಿಕುಮಾರ್ pc-2320, ಕುಬೇರ್ pc-2638, ದಾವಲ ಮಾಲಿಕ್ pc-2252, ತಿಮ್ಮಾರೆಡ್ಡಿ pc-2712,

ಒಟ್ಟು 7 ಜನರನ್ನು ಒಳಗೊಂಡ ತಂಡವನ್ನು ರಚಿಸಿ ಸದರಿ ತಂಡದವರನ್ನು ಭಾತ್ಮಿದಾರರ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಬುಧವಾರ ತಡೆರಾತ್ರಿ ಸುಮಾರು 2ಗಂಟೆಯ ಸಮಯದಲ್ಲಿ.

ರಾಂಪುರ  ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅವರು ರೌಂಡ್ಸ್ ಗೆಂದು ತೆರಳಿದಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ದೇವಸಮುದ್ರ ಕ್ರಾಸ್ ಬಳಿ ಓಮಿನಿ ವಾಹನದಲ್ಲಿ12 ಕುರಿಗಳ ಸಾಗಾಣಿಕೆ ಕಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆರೋಪದ ಕೃತ್ಯ ಬಯಲಾಗಿದೆ. ದಾವಣಗೆರೆ ಮೂಲದ ಮೂರು ಆರೋಪಿಗಳು ಸ್ವತಃ ತಾವೇ ಕುರಿಗಳನ್ನು ಕದ್ದಿರುವುದು ಎಂದು ಒಪ್ಪಿಕೊಂಡಿದ್ದಾರೆ.

ಸಣ್ಣಗಂಗಪ್ಪ ರವರ ಬಾಬುತ ಅಂದಾಜು 80,000 ಬೆಲೆ ಬಾಳುವ 12 ಕುರಿಗಳನ್ನು ಕಳ್ಳತನ ಮಾಡಿಕೊಂಡು KA -22-Z-5173 ನಂಬರ್ ನ ಓಮಿನಿ ವಾಹನದಲ್ಲಿ ಸಾಗಿಸುತ್ತಿದ್ದನು ಕಂಡು. ರಾಂಪುರ ಠಾಣೆಯ ಮೊಕದ್ದಮೆ ನಂಬರ್118/2024 ಕಲಂ:303(2)BNS -2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ರಾಂಪುರ ಪೊಲೀಸ್ ಠಾಣೆ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಇವರ ಕಾರ್ಯ ವೈಖರಿಯಕ್ಕೆ ರಾಂಪುರ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ, ಹಾಗೆಯೇ ಇವರು ಬಂದಾಗಿನಿಂದ ರಾಂಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಾಂತಿ ಸ್ವಹಾರ್ದತೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.


ವರದಿ: ಸಿದ್ದೇಶ ಜಿ ವೆಂಕಟಪುರ ಮೊಳಕಾಲ್ಮೂರು.

Leave a Reply

Your email address will not be published. Required fields are marked *

Scan the code