ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವಿವಿಧ ಇಲಾಖೆಗಳಿಂದ ನಾಮಪತ್ರ ಸಲ್ಲಿಕೆ.
(KOLARA): ಬಂಗಾರಪೇಟೆ: ರಾಜ್ಯ ಸರ್ಕಾರಿ ನೌಕರರ ಸಂಘದ 2024- 2029ನೇ ಅವದಿಗೆ ತಾಲ್ಲೂಕು ಶಾಖೆಯ ನಿರ್ದೆಶಕರು ಮತ್ತು ಪದಾಧಿಕಾರಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಇಂದು ಪ್ರಾಥಮಿಕ ಶಿಕ್ಷಣ ಇಲಾಖೆ ವತಿಯಿಂದ ಸಿ.ಅಪ್ಪಯ್ಯ ಗೌಡ,ಕಾಂತರಾಜ್, ನಾರಾಯಣಸ್ವಾಮಿ,ರುಕ್ಮಿಣಿಯಮ್ಮ, ಶ್ರೀನಿವಾಸ್ ಎನ್, ಶ್ಯಾಮೂರ್ತಿ, ನಾಗರಾಜಪ್ಪ ಹಾಗೂ ಅರಣ್ಯ ಇಲಾಖೆಯಿಂದ ಸಂತೋಷ್, ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಬೋಡಿ ರೆಡ್ಡಿ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಮಂಜುನಾಥಚಾರಿ ರವರು ತಿಳಿಸಿದರು.
ಪಟ್ಟಣದ ಬಿ ಆರ್ ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಆರಂಭವಾಗಿದ್ದು,18-10-2024 ಸಂಜೆ 5 ಗಂಟೆಯವರೆಗೆ, ನಾಮಪತ್ರ ಪರಿಶೀಲನೆ 19-10-2024, ಬೆಳಗ್ಗೆ 10 ಗಂಟೆಯಿಂದ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಣೆ, ಉಮೇದುವಾರಿಕೆ ವಾಪಸ್ಸು ಪಡೆಯಲು 21-10-2024, 4.30 ಗಂಟೆಯವರೆಗೆ, ನಂತರ ಚುಣಾವಣಾ ಕಣದಲ್ಲಿ ಉಳಿಯಬಹುದಾದ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಣೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
28-10-2024 ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ಬಿಆರ್ಸಿ ಕಚೇರಿಯಲ್ಲಿ ಚುನಾವಣೆ ನಡೆಯಲಿದೆ,ನಂತರ ಮತ ಏಣಿಕೆ, ಚುನಾವಣಾ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಜನಾರ್ದನ್, ಹಾಗೂ ಶಿಕ್ಷಕರು ಇದ್ದರು.
ವರದಿ: ವಿಷ್ಣು ಕೋಲಾರ