ಕೋಲಾರನ್ಯೂಸ್

ಡ್ಯಾಮ್ ಗೆ ಅಂಬೇಡ್ಕರ್ ಹೆಸರು ಇಡಬೇಕೆಂದು ಸೂಲಿಕುಂಟೆ ಆನಂದ್ ಒತ್ತಾಯ

ಡ್ಯಾಮ್ ಗೆ ಅಂಬೇಡ್ಕರ್ ಹೆಸರು ಇಡಬೇಕೆಂದು ಸೂಲಿಕುಂಟೆ ಆನಂದ್ ಒತ್ತಾಯ

(KOLARA): ಬಂಗಾರಪೇಟೆ: ಇದೇ ತಿಂಗಳು ತಾಲೂಕಿನ ಯರಗೋಳ ಡ್ಯಾಮ್ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನೆಲೆ ಯರಗೋಳ ಡ್ಯಾಮ್ ಗೆ ಅಂಬೇಡ್ಕರ್ ಹೆಸರು ಇಡಬೇಕೆಂದು ಪಟ್ಟಣದಲ್ಲಿ ಕೇಡಿಎಸ್ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯ ಮಾಡಿದರು.



ಅಂಬೇಡ್ಕರ್ ಪುತ್ತಳಿ ಬಳಿ ಸುದ್ದಿಗಾರರೊಂದಿಗೆ ಸೂಲಿಕುಂಟೆ ಆನಂದ್ ಮಾತನಾಡಿ, ಎಲ್ಲಾ ದಲಿತ ಸಂಘಟನೆಗಳ ಪರವಾಗಿ ಎರಗೋಲ ಡ್ಯಾಮ್ ಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂದು ನಾವು ಈ ಸಂದರ್ಭದಲ್ಲಿ ಒತ್ತಾಯ ಮಾಡುತ್ತಿದ್ದೇವೆ.



ಬಂಗಾರಪೇಟೆ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ,ಕೆಜಿಎಫ್ ಸಹ ಮೀಸಲು ಕ್ಷೇತ್ರವಾಗಿದೆ, ಮುಳುಬಾಗಿಲು ಸಹ ಮೀಸಲು ಕ್ಷೇತ್ರವಾಗಿದೆ, ಕೋಲಾರ ಲೋಕಸಭಾ ಸಹ ಮೀಸಲು ಕ್ಷೇತ್ರ ಶೇಕಡ 35 ರಷ್ಟು ಕೋಲಾರದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸ ಮಾಡುತ್ತಿರುವ ಹಿನ್ನೆಲೆ ಯಾವುದೇ ಪ್ರಮುಖ ಉದ್ಯಾನವನಕ್ಕಾಗಲಿ, ಪ್ರಮುಖ ರಸ್ತೆಗಳಿಗಾಗಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಇಲ್ಲ, ಅದಕ್ಕಾಗಿ ಕರ್ನಾಟಕ ದಲಿತ ಸಮಾಜ ಸೇವೆ ವತಿಯಿಂದ ಬಂಗಾರಪೇಟೆ ಶಾಸಕರು,ಮುಳುಬಾಗಿಲು ಶಾಸಕರು,ಕೆ ಜಿ ಎಫ್ ಶಾಸಕರು ಹಾಗೂ ಎಂಪಿ ರವರು ಮೀಸಲಾತಿಯಲ್ಲಿ ಆಯ್ಕೆಯಾಗಿರುವಂತಹ ಅಂತಹ ಜನಪ್ರತಿನಿಧಿಗಳು ಮಾನ್ಯ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿ ಯರಗೋಲ ಡ್ಯಾಮ್ ಗೆ ಅಂಬೇಡ್ಕರ್ ಅವರ ಹೆಸರು ಇಡಲು ಒತ್ತಾಯ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಮಾಜ ಸೇನೆಯ ಪದಾಧಿಕಾರಿಗಳು ಇದ್ದರು.

ವರದಿ ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code