ಕೋಲಾರನ್ಯೂಸ್

ಶಾಸಕ ಮುನಿರತ್ನಂ ವಿರುದ್ಧ ಕಾನೂನು ಕ್ರಮಕ್ಕಾಗಿ ಸೂಲಿಕುಂಟೆ ರಮೇಶ್ ಆಗ್ರಹ

ಶಾಸಕ ಮುನಿರತ್ನಂ ವಿರುದ್ಧ ಕಾನೂನು ಕ್ರಮಕ್ಕಾಗಿ ಸೂಲಿಕುಂಟೆ ರಮೇಶ್ ಆಗ್ರಹ


(CHIKKAMAGALURU): ಬಂಗಾರಪೇಟೆ: ಆರ್.ಆರ್ ನಗರದ ಶಾಸಕ ಮುನಿರತ್ನಂ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಶಾಸಕರ ವಿರುದ್ಧ ಈ ಕೂಡಲೇ ಅಟ್ರಾಸಿಟಿ ದೂರು ದಾಖಲು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಶಾಸಕರು ಬಿಬಿಎಂಪಿಯಲ್ಲಿ ಗುತ್ತಿಗೆದಾರರ ಜೊತೆ ಮಾತನಾಡಿರುವ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿದ್ದೇವೆ ಒಬ್ಬ ಶಾಸಕನಾಗಿ ಜಾತಿಯ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾನೆ, ಅದನ್ನು ಶಾಸಕನಾಗಲು ಸಹ ಯೋಗ್ಯತೆ ಇಲ್ಲ, ಆತನ ವಿರುದ್ಧ ಕೂಡಲೇ ಅಟ್ರಾಸಿಟಿ ದೂರು ದಾಖಲು ಮಾಡಬೇಕು, ಬೆಂಗಳೂರು ನಗರದಿಂದ ಗಡಿಪಾರು ಮಾಡಬೇಕು, ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಬೇಕು, ಹಾಗೂ ಆತರ ಮಾಡಿರುವ ಆಡಿಯೋದಲ್ಲಿ ದುಡ್ಡನ್ನು ಕೊಡಿ ಎಂದು ಪ್ರಸ್ತಾಪಿಸಿದ್ದಾರೆ ಅದನ್ನು ಕೂಡ ತನಿಖೆ ಮಾಡಬೇಕು, ಹಾಗೂ ಮಹಿಳೆಯರನ್ನು ಸಹ ಏಕವಚನದಲ್ಲಿ ಮಾತನಾಡಿದ್ದಾರೆ, ಎಲ್ಲಾ ವಿಷಯಗಳನ್ನು ಸಹ ತೆಗೆದುಕೊಂಡು ಯಾವ ವಿಚಾರಕ್ಕಾಗಿ ಅವರು ಈ ರೀತಿ ಮಾತಾಡಿದ್ದಾರೆ ಎಂಬುವುದು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಒಂದು ಸಮುದಾಯವನ್ನು ಇಡೀ ರಾಜ್ಯದಲ್ಲಿ ಸ್ವಾಭಿಮಾನವನ್ನು ಕೆದಕಿ ಈ ಸಂದೇಶವನ್ನು ರವಾನೆ ಮಾಡಿದವರ ವಿರುದ್ಧ ಸಹ ಗೃಹ ಇಲಾಖೆಯವರು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು, ಹಾಗೂ ಅವರ ಶಾಸಕರ ಸ್ಥಾನವನ್ನು ಅನರ್ಹ ಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸುತ್ತೇವೆ ಎಂದರು.

ಪದೇ ಪದೇ ಅಸ್ಪೃಶ್ಯತೆ ಮನೋಭಾವದಿಂದ ನಮ್ಮನ್ನು ಹಾಡಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಮಂಜಸವಲ್ಲ, ಇದಕ್ಕೆ ಸಮಗ್ರವಾದ ಪರಿಹಾರವನ್ನು ಕಂಡು ಹಿಡಿಯಬೇಕು ಮುನಿರತ್ನಂ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು ಇಲ್ಲವಾದ ಪಕ್ಷದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ದೇಶಿಹಳ್ಳಿ ಶ್ರೀನಿವಾಸ್, ಮುಖಂಡರಾದ ಶಿವಕುಮಾರ್, ಶ್ರೀನಿವಾಸ್ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

Scan the code