ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಆಯವ್ಯಯ
(CHIKKAMAGALURU): ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಮಂಡಿಸಿರುವ ಕೇಂದ್ರದ ಆಯವ್ಯಯವು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ ಹೇಳಿದ್ದಾರೆ.
ರಾಷ್ಟçದ ಅಭಿವೃದ್ಧಿಯನ್ನು ಎಲ್ಲಾ ಆಯಾಮಗಳನ್ನು ನಿಜವಾದ ರೂಪದಲ್ಲಿ ಪ್ರಸ್ತುತಪಡಿಸಿರುವ ವಿಶೇಷ ಆಯವ್ಯಯ ಇದಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ತಳ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಅವರು ವಿವಿಧ ಚಟುವಟಿಕೆಗಳನ್ನು ನಡೆಸಲು ಆಯವ್ಯಯದಲ್ಲಿ ರೂ.2 ಕೋಟಿವರೆಗೂ ಸಾಲ ನೀಡಲು ಪ್ರಸ್ತಾವನೆ ರೂಪಿಸಿರುವುದು ಆ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ ಬಹಳ ದೊಡ್ಡಮಟ್ಟದಲ್ಲಿ ಹರಡಿ, ಬೀದಿ ಬದಿಯ ವ್ಯಾಪಾರಿಗಳ ಜೀವನಕ್ಕೆ ಕುತ್ತು ತರುತಿತ್ತು. ಈ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ರೂ.30 ಸಾವಿರದ ಕ್ರೆಡಿಟ್ ಕಾರ್ಡ್ ಅನ್ನು ನೀಡುವ ಯೋಜನೆ ಅವರ ಬದುಕಿಗೆ ಆಶಾಕಿರಣವಾಗಿ ಗೋಚರಿಸಿದೆ.
ವ್ಯಾಪಾರಿಗಳು, ಉದ್ಯೋಗಸ್ಥರು, ಉದ್ಯೋಗಿಗಳಿಗೆ ವಾರ್ಷಿಕ ರೂ.12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಮದ್ಯಮ ವರ್ಗಕ್ಕೆ ಅನುಕೂಲಕರವಾಗಿದೆ.
ಮಹಿಳೆ ಮತ್ತು ರೈತರ ಅಭಿವೃದ್ಧಿಗೆ ಉತ್ತೇಜನ ನೀಡುವ ಹಲವಾರು ಯೋಜನೆಗಳನ್ನು ಈ ಆಯವ್ಯಯದಲ್ಲಿ ಪ್ರಸ್ತಾಪಿಸಿರುವುದು ಶ್ಲಾಘನೀಯವಾಗಿದ್ದು, ವಿಜ್ಞಾನ, ತಂತ್ರಜ್ಞಾನ ಸಂಶೋಧನೆಗೆ ಉತ್ತೇಜನ ನೀಡುವ ಭರವಸೆ ಉತ್ತಮವಾಗಿದೆ. ಯುವಜನರಿಗೆ ಕೌಶಲ್ಯ, ಮರು ಕೌಶಲ್ಯೀಕರಣವನ್ನು ಜಾರಿಗೊಳಿಸುವ ನೆಲೆಯಲ್ಲಿ ಈ ಬಾರಿಯ ಆಯವ್ಯಯ ಅತ್ಯುತ್ತಮ ಪ್ರಯೋಗವಾಗಿದೆ. ಕೇಂದ್ರ ಸರ್ಕಾರ ರೈತರ ಕಿಸಾನ್ ಕಾರ್ಡ್ನ ಮಿತಿಯನ್ನು ಹೆಚ್ಚಿಸಿರುವುದು ರೈತರಿಗೆ ಬಂಪರ್ ಕೊಡುಗೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.