ನ್ಯೂಸ್ಶಿವಮೊಗ್ಗ

ಸ್ವತಂತ್ರ ಸೂರ್ಯ ಗಾಂಧಿ, ಜಾತಿ, ಬಣ್ಣ ಮತ್ತು ಧರ್ಮದ ತಾರತಮ್ಯದ ವಿರುದ್ಧ ಧ್ವನಿ ಎತ್ತಿ ಸರಳ ವ್ಯಕ್ತಿತ್ವ

ಸ್ವತಂತ್ರ ಸೂರ್ಯ ಗಾಂಧಿ, ಜಾತಿ, ಬಣ್ಣ ಮತ್ತು ಧರ್ಮದ ತಾರತಮ್ಯದ ವಿರುದ್ಧ ಧ್ವನಿ ಎತ್ತಿ ಸರಳ ವ್ಯಕ್ತಿತ್ವ

(SHIVAMOGA): ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯವರ  ಕೊಡುಗೆ ಅವಿಸ್ಮರಣೀಯಾದದ್ದು ಎಂದು ಆನಂದಪುರದ  ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿಶಂಕರ್ .ಎನ್ ತಿಳಿಸಿದರು.

ಅವರು ಕಾಲೇಜಿನಲ್ಲಿ ಏರ್ಪಡಿಸಿದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯ ಕುರಿತು ಮಾತನಾಡಿದರು.

ಭಾರತ ಸ್ವತಂತ್ರ ಹೋರಾಟದಲ್ಲಿ ಗಾಂಧೀಜಿಯವರು 1920 ರ ಅಸಹಕಾರ ಚಳುವಳಿಯ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ವತಂತ್ರ ಹೋರಾಟಕ್ಕೆ ಕಾಲಿಟ್ಟರು ಅಂದಿನಿಂದ ಇವರು ನ್ಯಾಯಯುತವಾಗಿ ಪರಕೀಯ ವಿರುದ್ಧ ಸತ್ಯಾಗ್ರಹವೆಂಬ ಅಸ್ತ್ರವ ಹಿಡಿದು ಶಾಂತಿಯೆಂಬ ಮಂತ್ರದ ಜಪಿಸುತ ಹೋರಾಟ ನಡೆಸಿ ಭಾರತಕ್ಕೆ ಸ್ವತಂತ್ರ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೂ ಇವರು ಜಾತಿ, ಬಣ್ಣ ಮತ್ತು ಧರ್ಮದ ತಾರತಮ್ಯದ ವಿರುದ್ಧ ಧ್ವನಿ ಎತ್ತಿ ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಮನ ಗೆದ್ದವರು ಇವರನ್ನು ಎಲ್ಲರೂ ಪ್ರೀತಿಯಿಂದ ಮಹಾತ್ಮ, ರಾಷ್ಟ್ರಪಿತ, ಬಾಪೂಜಿ ಎಂತಲೂ ಕರೆಯುತ್ತಾರೆ.

ಹಾಗೆ ಮತ್ತೊಬ್ಬ ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರಿ ಇವರು ಎಂತಹ ಪ್ರಾಮಾಣಿಕರು ಮತ್ತು ನಿಸ್ವಾರ್ಥರೆಂದರೆ ಇವರು ಭಾರತದ ಅತ್ಯುನ್ನತವಾದ ಪ್ರಧಾನ ಮಂತ್ರಿ ಹುದ್ದೆಯನ್ನು ಸ್ವೀಕರಿಸಿದಾಗಲೂ  ಇವರ ಮನೆಯಲ್ಲಿ ಬಡತನವು ನಿರ್ಮೂಲನೆ ಯಾಗಿರಲಿಲ್ಲ ಅಂತಹ ನಿಸ್ವಾರ್ಥ ಮನುಷ್ಯ ಶಾಸ್ತ್ರ ಜೀ ಎಂದರು.

ಮುಖ್ಯ ಅತಿಥಿಯಾಗಿ ಆಹ್ವಾನಿಸಿದಂತಹ ಪತ್ರಕರ್ತರು ಮತ್ತು ಹಳೆಯ ವಿದ್ಯಾರ್ಥಿಯಾದ  ಬಿ.ಡಿ  ರವಿಕುಮಾರ್ ಮಾತನಾಡಿ  ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಹಾಗೂ ಇತರ ಸಾವಿರಾರು ನಾಯಕರುಗಳ ಬೆವರಿನ ಮತ್ತು ರಕ್ತದ ಹನಿಗಳ ಫಲವೇ ನಮಗೆ ದೊರಕಿರುವ ಸ್ವಾತಂತ್ರ ಹಾಗೂ ಗಾಂಧೀಜಿಯವರ ರಾಮ ರಾಜ್ಯದ ಕನಸು ಕನಸಾಗಿಯೇ ಉಳಿದುಬಿಟ್ಟಿದೆ ಅದನ್ನು ನನಸು ಮಾಡಲು ಯುವಜನರ ಪಾತ್ರ ಹಿರಿದಾದದ್ದು ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕರಾದ ಭಾಸ್ಕರ್ ರವರು ಮಾತನಾಡಿ  ಗಾಂಧೀಜಿಯವರ ಸತ್ಯ ,ಅಹಿಂಸೆ ,ಸತ್ಯಾಗ್ರಹ ಹೋರಾಟ ಹಾಗೂ ಸರ್ವೋದಯ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಕುರಿತು ಮತ್ತು ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಮಹಾನ್ ವ್ಯಕ್ತಿಗಳು ಗ್ರಂಥಗಳು, ಕಥೆಗಳನ್ನು ಕುರಿತು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಳ್ಳುವಂತೆ
ಕರೆ ನೀಡಿದರು. ಹಾಗೆ 17 ತಿಂಗಳು ಆಡಳಿತ ನಡೆಸಿದ ಲಾಲ್ ಬಹುದ್ದೂರ್ ಶಾಸ್ತ್ರೀಜಿಯವರ ತತ್ವ ಮತ್ತು ಆದರ್ಶಗಳು ವಿದ್ಯಾರ್ಥಿಗಳಿಗೆ ತಿಳಿಸಿದರು.

ಹಾಗೆ ವಿದ್ಯಾರ್ಥಿಗಳು ಕಾಲೇಜು ಸುತ್ತಮುತ್ತಲಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ರಾಮಚಂದ್ರ, ಶ್ರೀಕಾಂತ್ ಆಡೆಮನೆ , ಲಕ್ಷಪ್ಪ, ಮಮತಾ, ಗುರು, ಚರಣ್ , ಗಜಾನನ್ ಪಂಡಿತ್ ಮತ್ತು ಸರ್ವೇಶ್ವರ್ ಹಾಗೂ ಸಿಬ್ಬಂದಿಗಳಾದ ಮಧುಚಂದ್ರ ಮತ್ತು ಶಶಿ ಇತರರು ಇದ್ದರು.

ವರದಿ: ಅಮಿತ್ .ಆರ್

Leave a Reply

Your email address will not be published. Required fields are marked *

Scan the code