ಪ್ರತಿಭೆ ಪ್ರತಿಯೊಬ್ಬರ ಸ್ವತ್ತು .. ಖಂಡಿಕಾ ಗ್ರಾ.ಪಂ ಅಧ್ಯಕ್ಷೆ ಅನುಪಮ
( ಸಾಗರ- ಸೆ-02 ) ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದು ಖಂಡಿಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಪಮ ಹೇಳಿದರು ಅವರು ಇಲ್ಲಿಗೆ ಸಮೀಪದ ಕುಗ್ವೆ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಸಿರಿವಂತೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸೃಜನಶೀಲತೆಯನ್ನು ಹೆಚ್ಚಿಸಲು ಮುಂದಾಗಬೇಕು ಎಂದರು. ಬಿಇಓ ಇ.ಪರಶುರಾಮಪ್ಪ ಮಾತನಾಡಿ ಪ್ರತಿಯೊಬ್ಬ ಮಗುವಿನಲ್ಲಿರುವ ವಿಭಿನ್ನವಾದ ಪ್ರತಿಭೆಗಳನ್ನು ಹೊರತರುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪೋಷಕರು ಹೆಚ್ಚಿನ ಶ್ರಮ ವಹಿಸಬೇಕಾಗಿದೆ, ನಿರಂತರ ಪರಿಶ್ರಮದಿಂದ ಮಾತ್ರ ಗುರಿಯನ್ನು ಸಾಧಿಸಲು ಸಾಧ್ಯ ಎಂದವರು ಹೇಳಿದರು, ಸಿರಿವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್ ಗೌಡ್ರು ಮಾತನಾಡಿ ಪ್ರತಿಭಾಕಾರಂಜಿಯಲ್ಲಿ ಗ್ರಾಮೀಣ ಸೊಗಡಿನ ಕಲೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಇದೊಂದು ಮಕ್ಕಳ ಹಬ್ಬವಾಗಿದೆ ಸಂಭ್ರಮದ ಪರಿಸರವನ್ನು ಉಂಟು ಮಾಡುವಂತಾಗಬೇಕು ಎಂದರು. ಕುಗ್ವೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ನಾಗರಾಜ್ ಗೌಡ, ಪ್ರೇಮನಾಥ, ಚೈತ್ರ ರಮೇಶ್, ಶಾರದಾ ನಾಗರಾಜ್, ಪಿಡಿಓ ರೂಪ, ಶಿಕ್ಷಣ ಸಂಯೋಜಕರಾದ ವಿ.ಟಿ.ಸ್ವಾಮಿ, ಪ್ರಮುಖರಾದ ಎಂ.ವೈ.ಮೂರ್ತಿ, ಪಾರ್ವತಿ, ಈಶ್ವರ ನಾಯ್ಕ ಕುಗ್ವೆ, ಕರುಣಾಕರ್, ಈಶ್ವರ, ಸೋಮರಾಜ್,ಅರುಣ್ ಕುಗ್ವೆ, ಮೊಹಮ್ಮದ್ ಜಾಹಿದ್, ತೆರೆಸಿನಾ, ಅನುರಾಧ, ರೇವತಿ ಮೊದಲಾದವರು ಉಪಸ್ಥಿತರಿದ್ದರು
ವರದಿ – ರಾಘವೇಂದ್ರ ತಾಳಗುಪ್ಪ