ಪಿಎಂ ಶ್ರೀ ಕರ್ನಾಟಕ ಮಾದರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
(KOLARA): ಬಂಗಾರಪೇಟೆ:ಪಿಎಂ ಶ್ರೀ ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಬ್ಯಾಂಕ್ ಮೇನೇಜರ್ ರಾಜೇಶ್ ಮಾತನಾಡಿ,ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲ ಶಿಕ್ಷಕ ವೃಂದದವರಿಗೆ ಶುಭಾಶಯಗಳನ್ನು ಕೋರಿ,ಶಾಲೆಯಲ್ಲಿ ಸುಮಾರು 530 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು.
ಈ ವಿದ್ಯಾರ್ಥಿಗಳು ಎಲ್ಲಾ ಶೈಕ್ಷಣಿಕ ರಂಗದಲ್ಲಿ ಉತ್ತಮವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವುದು ತುಂಬಾ ಸಂತೋಷದ ವಿಷಯ,ಅಲ್ಲದೆ ಇಲ್ಲಿನ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಪ್ರೋತ್ಸಾಹಿ ಪ್ರೋತ್ಸಾಹಿಸುತ್ತಿದ್ದಾರೆ.ಬ್ಯಾಂಕ್ ನಲ್ಲಿ ದೊರೆಯುವಂತಹ ಶೈಕ್ಷಣಿಕ ಸೌಲಭ್ಯಗಳನ್ನು ಕುರಿತು ತಿಳಿಸಿದರು.
ಸಾಕ್ಷರತಾ ಅಧಿಕಾರಿಯಾದಂತಹ ರೇಣುಕಾ ಮಾತನಾಡಿ, ಶಿಕ್ಷಕರ ದಿನಾಚರಣೆಯ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಇದೆ ಸಂದರ್ಭದಲ್ಲಿ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೃಷ್ಣಪ್ಪ,ಇಸಿಓ ಲೀಲಾ ಶಿಕ್ಷಕರಾದ ಗಜೇಂದ್ರ,ಜಗದೀಶ್ವರಿ,ರಾಜಲಕ್ಷ್ಮಿ,ವಿಜಯಲಕ್ಷ್ಮಿ, ಪದ್ಮಾವತಮ್ಮ,ನಾರಾಯಣಸ್ವಾಮಿ,ಕನಕಮ್ಮ,ಆಶಾಲತಾ, ಮಂಜುಳ,ಲಲಿತಾಂಬ,ಕವಿತಾ ರಾಣಿ,ಯಶೋದಮ್ಮ,ಶ್ವೇತ, ಸುಧಾರಾಣಿ ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ