ನ್ಯೂಸ್ಶಿವಮೊಗ್ಗ

“ಜೈನ ಮಂದಿರದಲ್ಲಿ ದೇವಿಯ ಚಿನ್ನದ ಸರವನ್ನು ಕಳ್ಳತನ ಮಾಡಿದ ಆರೋಪಿಯ ಬಂಧನ”

“ಜೈನ ಮಂದಿರದಲ್ಲಿ ದೇವಿಯ ಚಿನ್ನದ ಸರವನ್ನು ಕಳ್ಳತನ ಮಾಡಿದ ಆರೋಪಿಯ ಬಂಧನ”

(SHIVAMOGA): ಜೈನ ಮಂದಿರದಲ್ಲಿ ದೇವಿಯ ಚಿನ್ನದ ಸರವನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆರೋಪಿತನಿಂದ ಸುಮಾರು 21,000/ರೂಮೌಲ್ಯದ ಚಿನ್ನದ ಸರ ಹಾಗೂ ಕಳ್ಳತನವಾದ ಸುಮಾರು 15,000/ರೂ ಮೌಲ್ಯದ ಬೈಕ್ ಜಪ್ತಿ.

ಸಾಗರ ಪೇಟೆಯ ನೆಹರು ಮೈದಾನದ ಬಳಿ ಇರು ಜೈನ ಸಮಾಜದ ಬಸದಿಯಲ್ಲಿನ ಮಾಲಿನಿ ದೇವಿಯ ಮೂರ್ತಿಯ ಮೇಲೆ ಇದ್ದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ:69/2024 ಕಲಂ 454,457,380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ ಮತ್ತು ದಿನಾಂಕ:27/07/2023 ರಂದು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ ಸಂಗಮೇಶ್ವರ ರಸ್ತೆಯಲ್ಲಿನ ಇರುವ ಮನೆಯೊಂದರ ಪಕ್ಕದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ:179/2023 ಕಲಂ 379 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.



ಪ್ರಕರಣಗಳಲ್ಲಿ ಆರೋಪಿತರು ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ಶ್ರೀ ಅನಿಲ್ ಕುಮಾರ್ ಭೂಮ್ ರೆಡ್ಡಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ತಿ ನಾಯಕ ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಜೆ ಬಿ ಸೀತಾರಾಂ ಪಿಐ ಸಾಗರ ಪೇಟೆ ಠಾಣೆ ರವರ ನೇತೃತ್ವದಲ್ಲಿ ಪಿ ಎಸ್ ಐ ರವರುಗಳಾದ ಶ್ರೀ ಮಹೇಶ ಕುಮಾರ್, ಸಂತೋಷ್ ಬಾಗೋಜಿ ಮತ್ತು ಸಿಬ್ಬಂದಿಗಳಾದ ಹೆಚ್‌ಸಿ ರತ್ನಾಕರ,ಪಿಸಿ ವಿಕಾಶ್‌,ವಿಶ್ವನಾಥ ಡಿಕೆ,ಕೃಷ್ಣಮೂರ್ತಿ,ಮೆಹಬೂಬ್ ಮತ್ತು ಶ್ರೀಮತಿ ಶಿಲ್ಪಾರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿ ಶಿವಕುಮಾರ ತಂದೆ ಮಂಜಪ್ಪ,31 ವರ್ಷ,ದುರ್ಗಿಗುಡಿ ಕಾಲೋನಿ ಶಿರವಂತೆ ಸಾಗರ ತಾಲೂಕು ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು 21,000/ ರೂ ಮೌಲ್ಯದ ಚಿನ್ನದ ಸರ ಹಾಗೂ ಕಳ್ಳತನವಾದ ದ್ವೀಚಕ್ರ ವಾಹನ ಅಂದಾಜು ಮೌಲ್ಯ 15,000/ ಅಮಾನತು ಪಡಿಸಿಕೊಳ್ಳಲಾಗಿರುತ್ತದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code