ಜಿಲ್ಲೆನ್ಯೂಸ್

ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಪಟ್ಟಣದ ಪೊಲೀಸ್ ಠಾಣೆಯಿಂದ ಪರಾರಿ

ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಪಟ್ಟಣದ ಪೊಲೀಸ್ ಠಾಣೆಯಿಂದ ಪರಾರಿ

(KOLARA): ಬಂಗಾರಪೇಟೆ:ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿರುವ ಬಗ್ಗೆ ವರಧಿಯಾಗಿದೆ.

ತಾಲ್ಲೂಕಿನ ಬ್ಯಾಡಬೆಲೆ ಗ್ರಾಮದ ಸುರೆಶ್ ಎಂಬುವವರ ಬಳಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮುಳಬಾಗಿಲು ಮೂಲದ ಚಂದನ್ ಕುಮಾ‌ರ್ ಎಂಬರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದರು ಎನ್ನಲಾಗಿದೆ.

ಬಂಧನದಲ್ಲಿದ್ದ ಆರೋಪಿ ಚಂದನ್ ಕುಮಾ‌ರ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಶುಕ್ರವಾರ ಪರಾರಿಯಾಗಿರುವ ಬಗ್ಗೆ ವರಧಿಯಾಗಿದ್ದು, ನ್ಯಾಯಾದೀಶರ ಮುಂದೆ ಹಾಜರುಪಡಿಸುವ ಮುನ್ನ ಆರೋಪಿ ಪರಾರಿಯಾಗಿದ್ದಾನೆಂದು ವರಧಿಯಾಗಿದೆ.

ದರೋಡೆ ಪ್ರಕರಣದಲ್ಲಿ ಆರೋಪಿ ಚಂದನ್ ಕುಮಾರ್ ಅವರನ್ನು ಕರೆತರುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಆತನ ಪತ್ತೆಗೆ ಶೋಧ ನಡೆದಿದೆ. ಆದಷ್ಟು ಶೀಘ್ರದಲ್ಲಿ ಬಂಧಿಸುತ್ತೇವೆ ಎಂದು ಸಿಪಿಐ ನಂಜಪ್ಪ ತಿಳಿಸಿರುವುದಾಗಿ ವರಧಿಯಾಗಿದೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code