ನ್ಯೂಸ್ಶಿವಮೊಗ್ಗ

ತಾಲೂಕು ಕಚೇರಿಯಲ್ಲಿ ಕೈ ಬರಹದ ಪಹಣಿ ಯನ್ನು ಕೇಳಿದಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಅಟೆಂಡರ್..!

ತಾಲೂಕು ಕಚೇರಿಯಲ್ಲಿ ಕೈ ಬರಹದ ಪಹಣಿ ಯನ್ನು ಕೇಳಿದಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಅಟೆಂಡರ್..!

(SHIVAMOGA): ಸಾಗರ ತಾಲ್ಲೂಕ್ ಕಛೇರಿಯಲ್ಲಿ  ಪಹಣಿಪತ್ರಿಕೆ ಕೇಳಿದಕ್ಕೆ ಅಲ್ಲಿನ ಅಟೆಂಡರ್ ಪದೇ ಪದೇ ಲಂಚಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ಎಸ್.ಎನ್ ನಗರ, ಸಾಗರ ಟೌನ್ ವಾಸಿ ಲಂಚಾ  ಪಿರ್ಯಾದುದಾರರಾದ ಶ್ರೀ ಅಸೀಖ್ ಬಿನ್ ಬಸೀರ್(32)  ರವರ ಸ್ನೇಹಿತರಾದ ತೋಹಿದ್ ಅಬ್ದುಲ್ ರವರಿಗೆ ಸೇರಿದ ಸಾಗರ ತಾಲ್ಲೂಕ್ ಕಸಬಾ ಹೋಬಳಿ ಬಳಸಗೋಡು ಗ್ರಾಮದ ಜಮೀನಿನ ಆರ್.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಗರ ತಾಲ್ಲೂಕ್ ಕಛೇರಿಯ ಭೂಮಿ ಕೇಂದ್ರಕ್ಕೆ ಹೋಗಿ 1999 ರಿಂದ 2001 ರ ವರೆಗೆ ಕೈ ಬರಹದ ಪಹಣೆಯನ್ನು ತೆಗೆಸಿಕೊಂಡು ಬರಲು ಪಿರ್ಯಾದಿಗೆ ತಿಳಿಸಿದ್ದರಿಂದ ಪಿರ್ಯಾದಿ ಅವರ ಸ್ನೇಹಿತರಾದ ನವೀನ.ಜೆ ರವರೊಂದಿಗೆ ದಿನಾಂಕ: 05/06/2024 ರಂದು ಸಾಗರ ತಾಲ್ಲೂಕ್ ಕಛೇರಿಯ ದಾಖಲಾತಿ ವಿಭಾಗಕ್ಕೆ ಹೋಗಿ ಅಟೆಂಡರ್ ಬಸವರಾಜ್ ರವರಿಗೆ ದಾಖಲಾತಿಗಳನ್ನು ನೀಡಲು ಅರ್ಜಿಯನ್ನು ಸಲ್ಲಿಸಿದ್ದು ಅಟೆಂಡರ್ ಎಲ್ಲಾ ದಾಖಲಾತಿಗಳನ್ನು ಜೆರಾಕ್ಸ್ ಮಾಡಿಸಬೇಕು, ಚಲನ್ ಕಟ್ಟಬೇಕು ಖರ್ಚು ಇದೆ ಎಂದು ಪಿದ್ಯಾದಿಯಿಂದ ಒಟ್ಟು 1500/- ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಅದೇ ದಿವಸ ಮದ್ಯಾಹ್ನ 1,500/-ಗಳನ್ನು ಪಿದ್ಯಾದಿಯಿಂದ ಲಂಚದ ಹಣವನ್ನು ಪಡೆದಿರುತ್ತಾರೆ.


ಪುನಃ ಅಟೆಂಡರ್ ಬಸವರಾಜ್ ಪಿರ್ಯಾದಿ ಬಳಿ ನೀನು ಕೊಟ್ಟಿದ್ದು ಶೀರಸ್ತೇದಾರರಿಗೆ ಕೊಟ್ಟು ಪಹಣಿಗೆ ಸಹಿ ಮಾಡಿಸ್ತೀನಿ ನನಗೆ ನೀನು 2000/- ರೂಗಳನ್ನು ಕೊಡಬೇಕು ಅಂತ ಮತ್ತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾನೆ.
ಈ ಎರಡೂ ಘಟನೆಗಳನ್ನು ಪಿರ್ಯಾದಿ ಸ್ನೇಹಿತ ನವೀನ್ ಜೆ ರವರು ಅವರ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತಾರೆ.  ಈ ವಿಷಯಕ್ಕೆ ಸಂಬಂದಿಸಿದಂತೆ ಸಾಗರ ತಾಲ್ಲೂಕ್ ಕಛೇರಿಯ ದಾಖಲಾತಿ ವಿಭಾಗದ ಅಟೆಂಡರ್ ಬಸವರಾಜ್ ರವರ ವಿರುದ್ಧ  ದಿನಾಂಕ:06/06/2024 ರಂದು ಪ್ರಕರಣ ದಾಖಲಾಗಿರುತ್ತದೆ.

ಅದರಂತೆ 06/06/2024 ರ ಸಂಜೆ 4 ಗಂಟೆಗೆ ಅಪಾದಿತ ಬಸವರಾಜ್ ಜಿ ಬಿನ್ ಲೇಟ್ ಗುತ್ಯಪ್ಪ( 57 ) ಅಟೆಂಡರ್, ಆರ್.ಆರ್.ಟಿ ಶಾಖೆ, ದಾಖಲಾತಿ ವಿಭಾಗ, ಸಾಗರ ತಾಲ್ಲೂಕ್ ಕಛೇರಿ, ಸಾಗರ ಇವರು ಅವರ ಕಛೇರಿಯಲ್ಲಿ ಪಿರ್ಯಾದುದಾರರಿಂದ ಲಂಚದ ಹಣ ರೂ 2000/- ಪಡೆದ  ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿದ್ದು,ಅಪರಾಧಿಯನ್ನು ಬಂದಿಸಲಾಗಿದೆ.
ಟ್ರ್ಯಾಪ್ ಮಾಡುವ ಸಮಯದಲ್ಲಿ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಅಧಿಕಾರಿಗಳಾದ ಶ್ರೀ ಉಮೇಶ್ ಈಶ್ವರ  ನಾಯ್ಕ ಪೊಲೀಸ್ ಉಪಾಧೀಕ್ಷಕರು, ಕ.ಲೋ ಶಿವಮೊಗ್ಗ. ಸಿಬ್ಬಂದಿಗಳಾದ ಶ್ರೀ ಯೋಗೇಶ್ ಸಿ.ಹೆಚ್.ಸಿ. ಶ್ರೀ ಸುರೇಂದ್ರ ಹೆಚ್.ಜಿ .ಸಿ.ಹೆಚ್.ಸಿ. ಶ್ರೀ ಬಿ.ಟಿ ಚನ್ನೇಶ, ಸಿ.ಪಿ.ಸಿ ಶ್ರೀ ರಘುನಾಯ್ಕ ಸಿ.ಪಿ.ಸಿ. ಶ್ರೀಮತಿ ಪುಟ್ಟಮ್ಮ ಮ.ಪಿ.ಸಿ ಶ್ರೀ ಗಂಗಾಧರ ಎ.ಪಿ.ಸಿ ಶ್ರೀ ಪ್ರದೀಪ್ ಎ.ಪಿ.ಸಿ. ಶ್ರೀ ಜಯಂತ್ ಎ.ಪಿ.ಸಿ ಇವರುಗಳು ಹಾಜರಿದ್ದರು.

ಮುಂದಿನ ತನಿಖೆಯನ್ನು ಶ್ರೀ ಹೆಚ್.ಎಸ್ ಸುರೇಶ್ ಪೊಲೀಸ್ ನಿರೀಕ್ಷಕರು, ಕ.ಲೋ ಶಿವಮೊಗ್ಗ ಇವರು ಕೈಗೊಂಡಿದ್ದು . ಕರ್ನಾಟಕ ಲೋಕಾಯುಕ್ತ ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಶ್ರೀ ಮಂಜುನಾಥ್ ಚೌದರಿ ಎಂ.ಹೆಚ್. ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಅವಾದಿತನನ್ನು ಬಂದಿಸಲಾಗಿರುತ್ತದೆ.

ವರದಿ:ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code