ಬೆಸ್ಕಾಂ ಇಲಾಖೆ ಗುತ್ತಿಗೆದಾರರಿಗೆ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ.
(KOLARA): ಬಂಗಾರಪೇಟೆ: ಕೃಷಿ ಪಂಪ್ಸೆಟ್ಗಳಿಗೆ ಗುಣಮಟ್ಟದ 10 ತಾಸು ವಿದ್ಯುತ್ ನೀಡಿ ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆ ಮಾಡಿ ಬೆಸ್ಕಾಂ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಇಂಧನ ಸಚಿವರಿಗೆ ಒತ್ತಾಯಿಸಿ ಮಾರ್ಚ್ 18 ರ ಸೋಮವಾರ ನಷ್ಟ ಬೆಳೆ ಸಮೇತ ಬೆಸ್ಕಂ ಇಲಾಖೆ ಮುತ್ತಿಗೆ ಹಾಕಲು ಮರಗಲ್ ಗ್ರಾಮ ಪ್ರಗತಿ ಪರ ರೈತ ರಾಜ್ಯ ಮುಖಂಡ ಶ್ರೀನಿವಾಸ್ ರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದಿರುವಂತಹ ಬೆಳೆ ಕೈಗೆ ಬರುವ ಸಮಯದಲ್ಲಿ ಬೆಸ್ಕಂ ಅಧಿಕಾರಿಗಳ ಗುಣಮಟ್ಟದ ವಿದ್ಯುತ್ ನಿಡದೆ ಕಡಿಮೆ ವೊಲ್ಟೇಜ್ ನಿಂದ ಪಂಪ್ಸೆಟ್ಗಳು ಸಂಪೂರ್ಣವಾಗಿ ಸುಡುತ್ತಿದ್ದು, ಇದರಿಂದ ಬೆಳೆಯು ನಷ್ಟವಾಗಿ ಪಂಪ್ಸೆಟ್ಗಳನ್ನು ರಿಪೇರಿ ಮಾಡಲು ಹಣವಿಲ್ಲದೆ ಖಾಸಗಿ ಸಾಲಕ್ಕೆ ಸಿಲುಕುತ್ತಿರುವ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆಂದು ಅವ್ಯವಸ್ಥೆ ವಿರುದ್ದ ರಾಜ್ಯ ಸಂಚಾಲಕರು ಮರಗಲ್ ಶ್ರೀನಿವಾಸ್ ಆಕ್ರೋಷ ವ್ಯಕ್ತಪಡಿಸಿದರು.
ಒಂದು ಎಕರೆ ಕೃಷಿ ಭೂಮಿಗೆ ನೀರು ಹಾಯಿಸಬೇಕಾದರೆ ಸಂಸಾರವನ್ನು ಬಿಟ್ಟು ಕೃಷಿ ಪಂಪ್ಸೆಟ್ಗಳ ಬಳಿ ರಾತ್ರಿಯ ವೇಳೆ ಕಾಡು ಪ್ರಾಣಿಗಳ ಜೊತೆ ಜೀವಿಸಬೇಕಾದ ಪರಿಸ್ತಿತಿ ಜೊತೆಗೆ ಗಡಿಭಾಗದ ಕಾಡಾನೆಗಳ ಹಾವಳಿ ಇರುವ ಹಳ್ಳಿಗಳಲ್ಲಿ ರೈತರು ಕೃಷಿಯನ್ನೇ ಬಿಟ್ಟು ಕೂಲಿ ಹುಡುಕಿಕೊಂಡು ಹೊರ ಜಿಲ್ಲೆಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ಇದ್ದರೂ ಸಮಸ್ಯೆಯನ್ನು ಗಂಬೀರವಾಗಿ ಬೆಸ್ಕಾಂ ಅಧಿಕಾರಿಗಳು ಏಕೆ ಪರಿಗಣಿಸುತ್ತಿಲ್ಲವೆಂದು ಪ್ರಶ್ನೆ ಮಾಡಿದರು.
ಇಂಧನ ಸಚಿವರು ಮಾದ್ಯಮಗಳ ಮುಂದೆ ರೈತರಿಗೆ ತೊಂದರೆಯಾಗದAತೆ 10 ತಾವು ವಿದ್ಯುತ್ ನೀಡುತ್ತೇವೆಂದು ಹರಿಕಥೆ ಹೇಳುವ ಸಚಿವರು ಹಳ್ಳಿಗಳಲ್ಲಿ ರೈತರ ಪರಿಸ್ಥಿತಿ ಬಂದು ನೋಡಿ 10 ತಾಸಲ್ಲ ಕನಿಷ್ಠ 3 ತಾಸು ಗುಣಮಟ್ಟದ ವಿದ್ಯುತ್ ನೀಡದೇ ಪ್ರತಿಯೊಂದಕ್ಕೂ ಲೋಡ್ ಷೆಡ್ಡಿಂಗ್ ಹೆಸರಿನಲ್ಲಿ ಕೊಡುವ ವಿದ್ಯುತ್ನ್ನು ಸಾವಿರ ಬಾರಿ ತೆಗೆದು ರೈತರ ಬಾಳಿನ ಜೊತೆ ಚಲ್ಲಾಟವಾಡುತ್ತಿದ್ದಾರೆಂದು ದೂರು ನೀಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ನಾರಾಯಣಗೌಡ ಮಾತನಾಡಿ ಬೇಕಾಬಿಟ್ಟಿ ವಿದ್ಯುತ್ ಪೂರೈಕೆ ಆಸರ್ಮಪಕ ವಿದ್ಯುತ್ ಪೂರೈಕೆಯಿಂದ ಪಂಪ್ಸೆಟ್ಗಳು ಹಾಳಾಗುತ್ತಿದ್ದು, ರಿಪೇರಿಗಾಗಿ ಸಾವಿರಾರು ರೂ ಖರ್ಚು ಮಾಡುವಂತಹ ಪರಿಸ್ಥಿತಿ ಬಂದಿದೆ. ತಿಂಗಳಿಗೆ ಕನಿಷ್ಠ 4ಬಾರಿ ಯಾದರೂ ಕೃಷಿ ಪಂಪ್ ಸೆಟ್ಗಳು ಕೈ ಕೊಡುತ್ತಿವೆ. ಇದರಿಂದ ರೈತರ ಬೆಳೆಯೂ ನಷ್ಟ ಮತ್ತೊಂದಡೆ ಸಾಲಗಾರರ ಕಾಟಕ್ಕೆ ತಾಳಲಾರದೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾದ ಪರಿಸ್ಥಿತಿಯನ್ನು ಬೆಸ್ಕಾಂ ಅಧಿಕಾರಿಗಳು ರೈತರಿಗೆ ಉಚಿತವಾಗಿ ಸರ್ಕಾರ 6ನೇ ಗ್ಯಾರೆಂಟಿಯಾಗಿ ನೀಡಿದೆ ಎಂದು ಇಂದನ ಸಚಿವರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ವೊಲ್ಟೇಜ್ ಸಮಸ್ಯೆಯಿಂದ 1000 ರಿಂದ 1200 ಅಡಿ ಬೋರ್ವೇಲ್ಗಳಿಂದ ನೀರನ್ನು ಹೊರೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಒಂದು ಕಡೆ ವಿದ್ಯುತ್ ಸಮಸ್ಯೆ ಮತ್ತೊಂದು ಕಡೆ ಬೆಳೆಗಳಿಗೆ ಬಾದಿಸುತ್ತಿರುವ ರೋಗ ಮತ್ತೊಂದು ಕಡೆ ಟಿ.ಸಿ. ಸುಟ್ಟರೆ 24 ಗಂಟೆಯಲ್ಲಿ ಯಾವುದೇ ರೈತರಿಂದ ಹಣ ಪಡೆಯದೆ ಸರಿಪಡಿಸಬೇಕಾದ ಬೆಸ್ಕಂ ಅಧಿಕಾರಿಗಳು ನೂರೊಂದು ನೆಪ ಹೇಳಿ ರೈತರಿಂದ 10 ಸಾವಿರದಿಂದ 30 ಸಾವಿರ ರೂಗಳನ್ನು ಸುಳಿಗೆ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಬೆಸ್ಕಾಂ ಇಲಾಖೆ ಗುತ್ತಿಗೆದಾರರಿಗೆ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಹಳೆಯ ಟಿ.ಸಿ. ಕಂಬ, ವೈರುಗಳನ್ನು ರಾಜಾರೋಷವಾಗಿ ಅಧಿಕಾರಿಗಳ ಗಮನಕ್ಕೆ ತಾರದೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಜೊತೆಗೆ ಹೊಸ ಟಿ.ಸಿ. ಅಳವಡಿಸುವ ಜಾಗದಲ್ಲಿ ಹಳೆ ಟಿ.ಸಿ.ಗಳಿಗೆ ಬಣ್ಣ ಬಳಿದು ಗುತ್ತಿಗೆದಾರರ ಜೊತೆ ಶಾಮೀಲಾಗಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿರುವ ಭ್ರಷ್ಠ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕಾದ ತಾಕ್ಕತ್ತು ಹಿರಿಯ ಅಧಿಕಾರಿಗಳಿಗೆ ಇಲ್ಲದಾಗಿದೆ. ಜೊತೆಗೆ ಸರ್ಕಾರ ಲೈನ್ ಮ್ಯಾನ್ಗಳ ರಕ್ಷಣೆಗೆ ವಿವಿಧ ರಕ್ಷಾ ಕೌಚಗಳು ನೀಡಿದ್ದರೂ ಉಪಯೋಗಿಸದೇ ಅಮಾಯಕರು ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕೃಷಿ ಪಂಪ್ ಸೆಟ್ಗಳಿಗೆ 10 ತಾಸು ವಿದ್ಯುತ್ ನೀಡಬೇಕೆಂದು ಇಂಧನ ಸಚಿವರನ್ನು ಒತ್ಥಾಯಿಸಿ ಮಾ-18 ರ ಸೋಮವಾರ ನಷ್ಟ ಬೆಳೆ ಸಮೇತ ಬೆಸ್ಕಂ ಇಲಾಖೆ ಮುತ್ತಿಗೆ ಹಾಕಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್ಪಾಷ, ಮುನಿಕೃಷ್ಣ, ವಿಶ್ವ, ಮುನಿರಾಜು, ರಾಮಸಾಗರ ವೇಣು, ಯಲ್ಲಣ್ಣ, ಹರೀಶ್, ರತ್ನಮ್ಮ, ಶೈಲಜ, ವೆಂಕಟಮ್ಮ, ಗೌರಮ್ಮ, ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸoದ್ರ ತಿಮ್ಮಣ್ಣ, ಗಿರೀಶ್, ಮುಂತಾದವರು ಇದ್ದರು.