ಕುರುಬರ ದೊಡ್ಡ ದ್ಯಾವರ ಜಾತ್ರೆ ವಿಜೃಂಭಣೆಯಿಂದ ಆಚರಣೆ.
(KOLARA): ಬಂಗಾರಪೇಟೆ: ತಾಲ್ಲೂಕಿನ ತ್ಯಾರನಹಳ್ಳಿ ಸಮೀಪ ಗುರುವಾರ ಕುರುಬರ ದೊಡ್ಡ ದ್ಯಾವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ತ್ಯಾರನಹಳ್ಳಿ ಸಿದ್ದೇಶ್ವರ ಸ್ವಾಮಿ, ಬೀರೇಶ್ವರ ಸ್ವಾಮಿ, ಈರಮುದ್ದಮ್ಮ ದೇಗುಲ ಹಾಗೂ ಕಾರಮಂಗಳ ಬಳಿ ಇರುವ ಬತ್ತೇಶ್ವರ ದೇಗುಲಗಳಲ್ಲಿ ಗಂಗಾಪೂಜೆ, ಗೋಪೂಜೆ, ಗಣಪತಿ ಪೂಜೆ, ಪ್ರಧಾನ ವಾಸ್ತು ಕಳಶ ಪೂಜೆ, ಚಂಡಿ ಹೋಮ, ಸುವಾಸಿನಿ ಪೂಜೆ, ಕನ್ಯಾಪೂಜೆ, ಲಘು ಪೂರ್ಣಾಹುತಿ, ಮಹಾ ಮಂಗಳಾರತಿ ನಡೆಯಿತು.
ಜಾತ್ರೆಯಲ್ಲಿ ತೆಂಗಿನ ಕಾಯಿ ಪವಾಡ ಕಳೆ ಕಟ್ಟಿತು.
ಕಾಲಾಟಗಾರರಿಂದ ತಲೆ ಮೇಲೆ ತೆಂಗಿನ ಕಾಯಿ ಒಡೆದದ್ದು ವಿಶೇಷವಾಗಿತ್ತು. ಕುರುಬ ಸಮಾಜದ ವಿವಿಧ ಕುಟುಂಬಗಳ ದೇಗುಲದ ಸಮೀಪ ಬಿಡಾರ ಹಾಕಿ, ತೀರ್ಥ ಪ್ರಸಾದ ಸ್ವೀಕರಿಸಿದರು.ಸಂಜೆ ದೀಪೋತ್ಸವ ನಡೆಯಿತು. ಸುಮಂಗಲಿಯರು ತಂಬಿಟ್ಟು ದೀಪ ಹೊತ್ತು ಮೆರವಣಿಗೆ ನಡೆಸಿದರು.ಸಿದ್ದೇಶ್ವರ, ಬೀರೇಶ್ವರ, ಈರಮುದ್ದಮ್ಮ ದೇವಾಲಯ ಟ್ರಸ್ಟ್ ವತಿಯಿಂದ ಜಾತ್ರೆ, ವಿಶೇಷ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿಶಾಸಕ ಎಸ್ ಎನ್ ನಾರಾಯಣಸ್ವಾಮಿ,ಕೊತ್ತೂರು ಮಂಜುನಾಥ,ನಂಜೇಗೌಡ , ಮಾಜಿ ಸಚಿವರಾದ ವರ್ತೂರ್ ಪ್ರಕಾಶ್,ಮಾಜಿ ಎಂ.ನಾರಾಯಣಸ್ವಾಮಿ,ವೆಂಕಟಮುನಿಯಪ್ಪ,
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಅಪ್ಪಯ್ಯಗೌಡ,ಸರಸ್ವತಮ್ಮ,ಪ್ರಧಾನ ಕಾರ್ಯದರ್ಶಿ ಅಂಜಲಿ ಸೋಮಣ್ಣ,ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಲ್ ರಾಮಕೃಷ್ಣಪ್ಪ ,ಮುಖಂಡರಾದ ತಂಬಿಹಳ್ಳಿ ಮುನಿಯಪ್ಪ, ಚಿಕ್ಕವಲಗಮಾದಿ ಮುನಿರಾಜು ,ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ಶಂಕರ್ ,ಮಲ್ಲೇಶ್ ,ದೇವಗಾನಹಳ್ಳಿ ರವಿ ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದೊಡ್ಡಪ್ಪ ,ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ವಿ ನಾಗರಾಜ ,ಕನಮನಹಳ್ಳಿ ಕೆ ಎಂ ಮಂಜುನಾಥ ಹಾಗೂ ಮೊದಲಾದವರು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ