ಮಹಾನ್ ಸಂತ ಆದರ್ಶ ಪುರುಷರ ಜಯಂತಿ ನಮ್ಮೆಲ್ಲರಿಗೂ ಸದಾ ಸ್ಪೂರ್ತಿ
(SHIVAMOGA): ಸೊರಬ: ಸ್ವಾಮಿ ವಿವೇಕಾನಂದರ ಆದರ್ಶಗಳು ಸರ್ವಕಾಲಿಕ, ಯುವಕರಿಗಂತೂ ಅದು ಸ್ಪೂರ್ತಿಯ ಸೆಲೆ ಎಂದು ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸಿಡಿಲ ಸಂತ, ಅಪ್ರತಿಮ ದೇಶಭಕ್ತ ಸ್ವಾಮಿ ವಿವೇಕಾನಂದರ 161 ನೇ ಜಯಂತಿಯನ್ನು ಆಚರಿಸಿ, ಯುವಜನತೆಯಿಂದ ದೇಶದ ದಿಕ್ಕನ್ನೇ ಬದಲಾಯಿಸುವ ಸಾಮಥ್ಯ ವಿವೇಕಾನಂದರ ಆದರ್ಶತೆಯಲ್ಲಿ ಅಡಗಿದೆ. ವಿಶ್ವವೇ ಒಮ್ಮೆ ಭಾರತದತ್ತ ತಿರುಗಿ ನೋಡುವಂತೆ ಚಿಕಾಗೋ ಸಮ್ಮೇಳನದಲ್ಲಿ ಅವರು ಆಡಿದ ಮಾತುಗಳು ಅದು ದೇಶದ ಗೌರವವನ್ನು ಹೆಚ್ಚಿಸಿದೆ. ಇಂತಹ ಮಹಾನ್ ಸಂತ ಆದರ್ಶ ಪುರುಷರ ಜಯಂತಿ ನಮ್ಮೆಲ್ಲರಿಗೂ ಸದಾ ಸ್ಪೂರ್ತಿಯನ್ನು ನೀಡುವುದಾಗಿದೆ. ಅವರ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ತಾಲ್ಲೂಕು ಸಂಚಾಲಕ ರಂಗನಾಥ ಮೊಗವೀರ್, ರಾಘವೇಂದ್ರ ಆಚಾರ್ಯ, ಕೃಷ್ಣ, ಮೊಗವೀರ, ಅರುಣ್ ಆಚಾರ್, ಭೂಪಾಲಪ್ಪ, ಬಸವರಾಜ್ ಪಾಟೀಲ್, ಚಂದ್ರಶೇಖರ್ ಜೈನ್, ಚಂದ್ರಕಾoತ ಆಚಾರ್, ಯಶೋದಮ್ಮ, ವೀಣ, ಕವಿತಾ, ಶಾಂತಿ, ಯಶೋದಮ್ಮ, ರಮಾ ಮೇಸ್ತ, ಪಂಚಾಕ್ಷರಿ, ಸತ್ತರ್ ಸಾಬ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ಸಂದೀಪ ಯು.ಎಲ್, ವೆಸ್ಟರ್ನ್ ಘಾಟ್ ನ್ಯೂಸ್, ಸೊರಬ