ನ್ಯೂಸ್ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳಿಗಾಗಿ ಇಲ್ಲಿ ಕಿತ್ತುಕೊಂಡು ಅಲ್ಲಿ ಕೊಡುತ್ತಿದೆ ಅಷ್ಟೇ ಎಂದು ಕಿಡಿ ಕಾರಿದ ಬಿಜೆಪಿ ಮುಖಂಡರು…!

ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳಿಗಾಗಿ ಇಲ್ಲಿ ಕಿತ್ತುಕೊಂಡು ಅಲ್ಲಿ ಕೊಡುತ್ತಿದೆ ಅಷ್ಟೇ ಎಂದು ಕಿಡಿ ಕಾರಿದ ಬಿಜೆಪಿ ಮುಖಂಡರು…!

(SHIVAMOGA): ಸೊರಬ: ಪಟ್ಟಣದ ರಂಗನಾಥ ಸ್ವಾಮಿ ದೇವಾಲಯದ ಎದುರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾಗ್ಯಗಳ ಹೆಸರಿನಲ್ಲಿ ಮೋಸ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರೂ ಸೇರಿದಂತೆ ಎಲ್ಲ ವರ್ಗದ ಜನರ ಬದುಕು ದುಸ್ಥರವಾಗಿದ್ದು, ಹಿಂದೆ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ರೈತರ ಹೊಲಕ್ಕೆ ಟಿಸಿ ಹಾಕಲು 25 ಸಾವಿರ ರೂ. ಸಾಕಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಈಗ ಇದೇ ಕೆಲಸಕ್ಕೆ 2 ಲಕ್ಷ ರೂ. ಕೊಡಬೇಕಾದ ದುಃಸ್ಥಿತಿ ಎದುರಾಗಿದೆ ಎಂದು ಟೀಕಿಸಿದರು.

ಯಡಿಯೂರಪ್ಪನವರು ಸೊರಬಕ್ಕೆ ನೀರಾವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದ್ದರೇ ಎಂದು ಯಡಿಯೂರಪ್ಪರವರನ್ನು ಹೋಗಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ ಕೊಂಗ್ರೆಸ್ ಪಕ್ಷದವರು ಕೈಲಾಗದವರು ಎಂದು ಟೀಕಿಸಿದ್ದಾರೆ.

ಮೋದಿಯವರ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಬಿ ಜೆ ಪಿ ಸರ್ಕಾರವನ್ನು ಹೋಗುತ್ತಾ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ಅಭಿವೃದ್ಧಿ ವಿಚಾರದಲ್ಲಿ ಯಡಿಯೂರಪ್ಪ ರವರಿಗಿಂಥ ಬಿ.ವೈ. ರಾಘವೇಂದ್ರ ಹೆಚ್ಚು ಅಭಿರುದ್ದಿ ನಡಿಸಿರುವುದರಿಂದಾ  ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲು ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಮನವಿಮಡಿಕೊಂಡಿದ್ದರು. ಪ್ರಚಾರದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸಲಾಗಿದ್ದು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದುದರಿಂದ ಕಳೆದ 10 ವರ್ಷಗಳಲ್ಲಿ ದೇಶದ ಸಮಗ್ರವಾಗಿ ಅಭಿವೃದ್ಧಿಯ ಉತ್ತುಂಗದೆಡೆಗೆ ಸಾಗುತ್ತಿದೆ ಎಂದು ತಿಳಿದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಸೊರಬ ಬಿಜೆಪಿ ಅಧ್ಯಕ್ಷ ಪ್ರಕಾಶ್, ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್, ಪ್ರಮುಖರಾದ ವಿ.ಜಿ. ಪರಶುರಾಮ್, ರಾಜು, ಶಿವಕುಮಾರ್

ವರದಿ: ಮಧು ರಾಮ್

Leave a Reply

Your email address will not be published. Required fields are marked *

Scan the code