ಚಿಕ್ಕಮಗಳೂರುನ್ಯೂಸ್

ಈಜಲು ಹೋಗಿ ನೀರಲ್ಲಿ ಮುಳುಗಿ ಸಾಯನ್ನಪ್ಪಿರುವ ಬಾಲಕ ..!

ಈಜಲು ಹೋಗಿ ನೀರಲ್ಲಿ ಮುಳುಗಿ ಸಾಯನ್ನಪ್ಪಿರುವ ಬಾಲಕ ..!

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನಗರದ ಕೋಟೆ ಕೆರೆಯಲ್ಲಿ ಈಜಲು ಹೋದ ಐವರಲ್ಲಿ ಒಬ್ಬ ಬಾಲಕ ಮುಳುಗಿ ಸವನ್ನಪ್ಪಿರುವ ಘಟನೆ ನಡೆದಿದೆ. ಕೋಟೆ ಕೆರೆಯಲ್ಲಿ ಕೆಲವು ದಿನಗಳ ಹಿಂದೆ ಕೋಟೆ ವೈಜ್ಞಾನಿಕವಾಗಿ ಹೂಳು ತೆಗೆದಿದ್ದುದರಿಂದ ಅಲ್ಲಲ್ಲಿ ಗುಂಡಿಗಳು ಇದ್ದವು , ಮಳೆ ಬಂದ ಕಾರಣ ಕೆರೆಯ ಗುಂಡಿಗಳು ತುಂಬಿದ್ದು. ಈ ವೇಳೆಯಲ್ಲೀ ಚಿಕ್ಕಮಗಳೂರಿನ ದೋಣಿಖಣದ ಐದು ಹುಡುಗರು ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಯಾರಿಗೂ ಈಜು ಬಾರದ ಕಾರಣ ಐವರಲ್ಲಿ ಶಶಾಂಕ್ (13) ವರ್ಷದ ಹುಡುಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದಾನೆ.

ಮಿಕ್ಕಿದವರಿಗೆ ಈಜು ಬಾರದ ಕಾರಣ ಏನು ಮಾಡಲಾಗದೆ ಅಸಹಾಯಕರಾಗಿ ನಿಂತು ಗೆಳಯ ಪ್ರಾಣ ಬಿಡುವುದನ್ನೂ ನೋಡಬೇಕಾಯ್ತು ಹೊರತು ಶಶಾಂಕ್ ನನ್ನು ಉಳಿಸಲು ಸಾಧ್ಯವಾಗಲಿಲ್ಲ. ನೋಡ ನೋಡುತ್ತಿದ್ದಂತೆ ಶಶಾಂಕ್ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.  ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಸಿಬ್ಬಂದಿಯೊಂದಿಗೆ ಮೃತದೇಹ ಹೊರ ತೆಗೆಯಲಾಯಿತು. ಕೋಟೆಕೆರೆಯಲ್ಲಿ ಅವೈಜ್ಞಾನಿಕವಾಗಿ ಕೆರೆಯ ಹೂಳೆತ್ತುವ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದು ಹಾಗು ಯಾವುದೇ ರೀತಿಯ ರಕ್ಷಣೆ ಇರದೆ ಮುಗ್ಧ ಯುವಕನ ಮೊದಲ ಬಲಿಯಾಗಿದೆ . ಒಂದು ರೀತಿಯಲ್ಲಿ  ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹೊಣೆಗೇಡಿತನವು ಈ ಘಟನೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

Scan the code