ಜಿಲ್ಲೆನ್ಯೂಸ್

ಮನೆ ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ದಾಖಲಾಗುತ್ತಿದೆ.

ಮನೆ ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ದಾಖಲಾಗುತ್ತಿದೆ.

(SHIVAMOGA): ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಮನೆ ಕಳ್ಳತನ ಪ್ರಕರಣಗಳು ಮೇಲಿಂದ ಮೇಲಿಗೆ ದಾಖಲಾಗಿದ್ದು ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ಕಾರಿಯಪ್ಪ ವಿ.ಜಿ 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ ವಿಶೇಷ ತಂಡವನ್ನು ಶ್ರೀ ಗೋಪಾಲಕೃಷ್ಣ ನಾಯ್ಕ ಟಿ. ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಸಾರಥ್ಯದಲ್ಲಿ ರಚಿಸಿ, ಆ ವಿಶೇಷ ತಂಡದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಮಹಾಬಲೇಶ್ವರ ಎಸ್.ಎನ್, ಪಿಎಸ್‌ಐ ಶ್ರೀ ನಾರಾಯಣ ಮಧುಗಿರಿ, ಪಿ.ಎಸ್,ಐ ಶ್ರೀಮತಿ ಸುಜಾತ ಆರ್. ಪಿ.ಎಸ್.ಐ ಶ್ರೀ ಸಿದ್ದರಾಮಪ್ಪ ಹೆಚ್. ಹಾಗೂ ಸಾಗರ ಗ್ರಾಮಾಂತರ ಪೊಲೀಸ್ ರಾಣಾ ಸಿಬ್ಬಂದಿಯವರಾದ ಸಿಹೆಚ್ಸಿ, 66 ಶ್ರೀ ಸನಾವುಲ್ಲಾ, ಸಿಹೆಚ್‌ಸಿ 299 ಶೇಕ್ ಫೈಝೂಲ್ ಅಹಮದ್ ಸಿಪಿಸಿ 1361ಶ್ರೀ ರವಿಕುಮಾರ್. ಸೀಪಿಸಿ 1132 ಪ್ರವೀಣ್ ಕುಮಾರ್ ಜೀಪ್ ಚಾಲಕರಾದ ಎ.ಹೆಚ್.ಸಿ 124 ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ಸಿಬ್ಬಂಧಿಗಳಾದ ಶ್ರೀ ಗುರುರಾಜ ಶ್ರೀ ಇಂದ್ರೇಶ್, ಮತ್ತು ಶ್ರೀ ವಿಜಯ್ ಕುಮಾರ್ ರವರು ಈ ಪ್ರಕರಣದ ಜಾಡನ್ನು ಪತ್ತೆ ಹಚ್ಚಿ, ಪ್ರಕರಣದ ಪ್ರಮುಖ ಆರೋಪಿಯಾದ ಷಣ್ಮುಖ ರೆಡ್ಡಿ, ತಂದೆ ಲೇಟ್ ಗಂಗಪ್ಪ, 22 ವರ್ಷ, ಗಂಗಾಮತ ಜಾತಿ, ಜಂಬಗಾರು ಹಾಸ್ಟೇಲ್ ನಲ್ಲಿ ಕ್ಲೀನಿಂಗ್ ಕೆಲಸ, ವಾಸ ಎಕೆ ಕಾಲೋನಿ 2ನೇ ಕ್ರಾಸ್ ಎಸ್.ಎನ್ ನಗರ ಸಾಗರ ಟೌನ್. ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ದಿ:-21-01-2024 ರಂದು ವಶಕ್ಕೆ ಪಡೆದು ದಸ್ತಗಿರಿ ಮಾಡಿರುತ್ತದೆ. ಇವರು

1) ಸಾಗರ ಗ್ರಾಮಾಂತರ ಠಾಣೆಯ ಅಪರಾಧ ಸಂಖ್ಯೆ 232/2023 ಕಲಂ 447,511 ಸಹಿತ 34 ಐಪಿಸಿ ಪ್ರಕರಣದಲ್ಲಿ ಕರ್ಕಿಕೊಪ್ಪ ಗ್ರಾಮದಲ್ಲಿ ದಿನಾಂಕ:06-12-2023 ರಂದು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾರೆ.

2) ಸಾಗರ ಗ್ರಾಮಾಂತರ ಠಾಣೆಯ ಅಪರಾಧ ಸಂಖ್ಯೆ 237/2023, ಕಲಂ 454,380 ಐಪಿಸಿ ಪ್ರಕರಣದಲ್ಲಿ ಉಂಬ್ಳೆಬೈಲು ಗ್ರಾಮದಲ್ಲಿ ದಿ: 15-12-2023 ರಂದು ಕಳ್ಳತನ ಮಾಡಿರುತ್ತಾರೆ.

3) ಸಾಗರ ಗ್ರಾಮಾಂತರ ಠಾಣೆಯ ಅಪರಾಧ ಸಂಖ್ಯೆ 243/2023, ಕಲಂ 454,380 ಐಪಿಸಿ ಪ್ರಕರಣದಲ್ಲಿ ಯಳವರಸೆ ಗ್ರಾಮದಲ್ಲಿ ದಿ: 20-12-2023 ರಂದು ಕಳ್ಳತನ ಮಾಡಿರುತ್ತಾರೆ.

4) ಸಾಗರ ಗ್ರಾಮಾಂತರ ಠಾಣೆಯ ಅಪರಾಧ ಸಂಖ್ಯೆ 251/2023, ಕಲಂ 454,380 ಐಪಿಸಿ ಪ್ರಕರಣದಲ್ಲಿ ಕಾನೆ ಗ್ರಾಮದಲ್ಲಿ ದಿ: 29-12-2023 ರಂದು ಕಳ್ಳತನ ಮಾಡಿರುತ್ತಾರೆ.

5) ಆನಂದಪುರ ಠಾಣೆಯ ಅಪರಾಧ ಸಂಖ್ಯೆ 10/2024, ಕಲಂ 454,380 ಐಪಿಸಿ ಪ್ರಕರಣದಲ್ಲಿ ನೇದರವಳ್ಳಿ ಗ್ರಾಮದಲ್ಲಿ ದಿ: 14-01-2024 ರಂದು ಕಳ್ಳತನ ಮಾಡಿರುತ್ತಾರೆ.

ಸದರಿ ಆರೋಪಿತ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಂದ ಅಂದಾಜು ಸುಮಾರು 5,20.000/- ರೂ ಬೆಲೆ ಬಾಳುವ ಬಂಗಾರ, ಬೆಳ್ಳಿಯ ಆಭರಣ ಮತ್ತು ಕಳ್ಳತನವಾದ ಒಂದು ಸ್ಮಾರ್ಟ ಪೋನ್ ನ್ನು ಹಾಗೂ ಕೃತ್ಯಕ್ಕೆ ಬಳಸಿದ ಹೊಂಡಾ ಕಂಪನಿಯ ಹೊಸದಾದ ಸ್ಕೂಟಿಯನ್ನು ಅಮಾನತ್ತು ಪಡಿಸಿಕೊಳ್ಳಲಾಗಿದ್ದು, ಒಟ್ಟು 05 ಸ್ವತ್ತು ಕಳುವು ಪ್ರಕರಣಗಳನ್ನು ಭೇಧಿಸಲಾಗಿರುತ್ತದೆ. ಈ ಬಗ್ಗೆ ಆರೋಪಿತರ ಪತ್ತೆ ಹಾಗೂ ಕಳುವಾದ ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿರುತ್ತಾರೆ.

ವರದಿ : ರಾಘವೇಂದ್ರ ತಾಳಗುಪ್ಪ.

Leave a Reply

Your email address will not be published. Required fields are marked *

Scan the code