ಕೋಲಾರನ್ಯೂಸ್

ಗ್ರಾಮಗಳ‌ ವಿಕಾಸದಿಂದ ನವರಾಜ್ಯಾ ನಿರ್ಮಾಣದ‌ ಪರಿಕಲ್ಪನೆ : ನಂಜಪ್ಪ

ಗ್ರಾಮಗಳ‌ ವಿಕಾಸದಿಂದ ನವರಾಜ್ಯಾ ನಿರ್ಮಾಣದ‌ ಪರಿಕಲ್ಪನೆ : ನಂಜಪ್ಪ


(KOLARA): ಬಂಗಾರಪೇಟೆ: ಗ್ರಾಮಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ನವ ರಾಜ್ಯಾ‌ನಿರ್ಮಾಣಕ್ಕೆ ಹೊಸ ಭಾಷ್ಯ ಬರೆದು ಲಕ್ಷಾಂತರ ಜನರ‌ ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿ ಶ್ರೀ ಧರ್ಮಸ್ಥಳ‌ ಗ್ರಾಮೀಣ ಅಭಿವೃದ್ಧಿ ಸಹಕಾರಿ ಸಂಘ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ‌ ಎಂದು ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಅಭಿಪ್ರಾಯಪಟ್ಟರು

ಪಟ್ಟಣದ ವಿ,ಬಿ,ಆರ್, ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಅಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಒಕ್ಕೂಟ ಪದಧಾಕಾರಿಗಳ ಸಮಾವೇಶ ಕಾರ್ಯಕ್ರಮನ್ನು ಉಧ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಭ್ಯುದಯ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖೀ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಗಾಂದೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನ್ನು ಸಾಕಾರಗೊಳ್ಳುತ್ತಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಸಾಲ ಮರುಪಾವತಿಸಿ ಅನ್ಯ ಸಂಸ್ಥೆಗಳ ‌ಮೊರೆ ಹೋಗದಿರಿ:
ಶ್ರೀ ಕ್ಷೇತ್ರ ಧರ್ಮಸ್ಥಳ ನಂಬಿಕೆಗೆ ಹೆಸರಾದ ಕ್ಷೇತ್ರವಿದು ಹಲವಾರು ಬಡ ಜನರ ಅಭಿವೃದ್ಧಿಯ ಪಾಲುದಾರರು ಆಗಿದ್ದಾರೆ ತಾವೆಲ್ಲರೂ ಯೋಜನೆಯಲ್ಲಿರುವ ಕಾರ್ಯಕ್ರಮಗಳ ಸದುಪಯೋಗ ಪಡೆಯಿರಿ ಹಾಗೂ ಪಡೆದುಕೊಂಡ ಸಾಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿರಿ ನಿಮ್ಮ ಅಭಿವೃದ್ಧಿಗೆ ಅನ್ಯ ವ್ಯವಸ್ಥೆಗಳ ಮೊರೆ ಹೋಗುವ ಅವಶ್ಯಕತೆಯಿಲ್ಲ ಎಂದರು.

ನೊಂದವರ ಪಾಲಿಗೆ  ಕಲ್ಪವೃಕ್ಷ:
ಜಿಲ್ಲಾ ಜನಜಾಗೃತಿ ವೇದಿಕೆಯ  ಸದಸ್ಯರಾದ ಶ್ರೀ ವಿ ಎಸ್ ಚಂದ್ರಶೇಖರ್ ಮಾತನಾಡಿ ಇಂದು ಈಶ್ವರ ಪಾರ್ವತಿ ರೂಪದಲ್ಲಿ ಪೂಜ್ಯರು ಅಮ್ಮನವರು ನಮ್ಮನ್ನು ಪೊರೆಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯೂ ಸಾಧಿಸಿದ ಪ್ರಗತಿಯ ಅಂಕಿ ಅಂಶಗಳನ್ನು ಗಮನಿಸಿದಾಗ ನಾವುಗಳು ನಮ್ಮ ಸ್ವಂತ ಊರುಗಳಲ್ಲಿ ಅಲ್ಪ ಸ್ವಲ್ಪ ಸೇವೆಗಳನ್ನು ಮಾಡಲು ಕಷ್ಟಪಡುವ ಸಂದರ್ಭಗಳಲ್ಲಿ ಈ ಸಂಸ್ಥೆಯು ಯೊಜನೆ ಗಳನ್ನು  ಜನರ‌ ಮನೆಬಾಗಿಲಿಗೆ ತಲುಪಿಸಿ‌ ನೊಂದ ಜೀವಿಗಳ‌ ಪಾಲಿಗೆ  ಕಲ್ಪವೃಕ್ಷ ದಂತೆ ಆಸರೆಯಾಗಿದೆ ಎಂದರು.

ತಾಲ್ಲೂಕಿನ ಯೋಜನಾಧಿಕಾರಿ ಶ್ರೀ ಚೇತನ್ ಕುಮಾರ್ ಮಾತನಾಡಿ ಹತ್ತು ವರ್ಷದ ತಾಲ್ಲೂಕಿನ ಪ್ರಗತಿಯ ಅಂಕಿ ಅಂಶಗಳನ್ನು ಪ್ರಸ್ತುತ ಪಡಿಸುತ್ತಾ,ನಮ್ಮ‌ ಸಂಸ್ಥಯು ಪ್ರಸಕ್ತ ಸಾಲಿನಲ್ಲಿ 2ಕೋಟಿ 36 ಲಕ್ಷ ಲಾಭಾಂಶ ಗಳಿಸುವುದರೊಂದಿಗೆ ಸುದೀರ್ಘವಾಗಿ ಕೃಷಿ ಮೇಳ‌ ,ತರಬೇತಿ,‌ ಮಾನವ ಸಂಪನ್ಮೂಲ ಬಳಕೆ, ದುರ್ಬಲ ವರ್ಗದ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಬನೆಗಾಗಿ ಸಂಘಟನೆಗೆ ಪ್ರೇರಣೆ ನೀಡಲಾಗಿದ್ದು, ಅನೇಕ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೋಲಾರ‌ ಜಿಲ್ಲಾ ನಿರ್ದೇಶಕರಾದ ಪದ್ಮಯ್ಯ ಸಿ ಎಚ್, ಹಾಗೂ ಬಿ ಎಂ ರವಿ ರೆಡ್ಡಿ , ವಿ ಎಸ್ ಚಂದ್ರಶೇಖರ್, ರಾಜ್ಯಾಶಾಖ ಪ್ರಬಂಧಕ ಶೇಖರ್,ಜನಾರ್ಧನ್, ಮಹದೇವಸ್ವಾಮಿ ಇತರರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code