ಜಿಲ್ಲೆನ್ಯೂಸ್

ಶಿರುವಂತೆ ಗ್ರಾಮ ಪಂಚಾಯತಿ ವತಿಯಿಂದ ಸಂವಿಧಾನ ಜಾಗ್ರತಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು.

ಶಿರುವಂತೆ ಗ್ರಾಮ ಪಂಚಾಯತಿ ವತಿಯಿಂದ ಸಂವಿಧಾನ ಜಾಗ್ರತಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು.

(SHIVAMOGA): ಸಾಗರ: ಭಾರತ ಸಂವಿಧಾನ ಅಂಗೀಕರಿಸಿ 75 ನೇ ವರ್ಷಾಚರಣೆಯ ಪ್ರಯುಕ್ತ ಇಂದು ಬಂದ ರಥವನ್ನು ಸ್ವಾಗತಿಸಿ ಶಿರುವಂತೆಯ ತ್ರೀಪುರಾಂತಕೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆಯನ್ನು‌ನಡೆಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಿಧಾನ ಪೀಠಿಕೆಯನ್ನು ವಾಚಿಸಲಾಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನಿಲ್ ಗೌಡ್ರು ಮಾತಾನಾಡಿ ನಮ್ಮ ಸಂವಿಧಾನವು ಪ್ರಪಂಚದಲ್ಲಿ ಅತ್ತ್ಯುತ್ತಮ ಸಂವಿಧಾನ ಆಗಿದೆ ಇಂದು ನಾವೆಲ್ಲಾ ಎನು ಅಧಿಕಾರ ವಹಿಸಿಕೊಂಡು ಇದಿವಿ ಅದಕ್ಕೆ ಈ ಸಂವಿಧಾನ ರಚನೆ ಕಾರಣ ಅಂಬೇಡ್ಕರ್ ಅವರ ಈ ಸಂವಿಧಾನ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು ಈ ಸಂದರ್ಭದಲ್ಲಿ.
ಗ್ರಾಮ ಪಂಚಾಯತ ಅಧ್ಯಕ್ಷರು ಅನಿಲ್ ಗೌಡ್ರು ಸದಸ್ಯರಾದ ಲೋಕೇಶ್ ಗಾಳಿಪುರ.ಮನೋಜ್ ಸಾವಿತ್ರಿ ‌ಸಮಾಜ ಕಲ್ಯಾಣ ಇಲಾಖೆಯ ಸುರೇಶ್.ಸಿ.ಡಿ.ಪಿ.ಐ.ಸಂತೋಷ ಪಿ.ಡಿ.ಒ.ಶರಾವತಿ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರುಗಳು ಶಿಕ್ಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code