ನಕಲಿ ಖಾತೆಗಳ ಸೃಷ್ಟಿಗೆ ಕರಾಳ ಅಧ್ಯಯಕ್ಕೆ ಕೊನೆ ಎಂದು…? –ಚಿಕ್ಕನಾರಾಯಣ
ಬಂಗಾರಪೇಟೆ :ತಾಲೂಕಿನ ಕಂದಾಯ ಇಲಾಖೆಯ ವಿರುದ್ಧ ಬಹುತೇಕ ಸಂಘ ಸಮಸ್ಯೆಗಳು ಪದೇಪದೇ ನಕಲಿ ಖಾತೆಗಳ ಆರೋಪಗಳನ್ನು ಮಾಡುತ್ತಿರುವುದು ಸತ್ಯವಾಗಿದ್ದು ಅದಕ್ಕೆ ಪುಷ್ಟಿ ನೀಡಿದ್ದು ಕಾಮಸಮುದ್ರ ಹೋಬಳಿ ಕೇತಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಮರಿಹಳ್ಳಿ ಗ್ರಾಮದಲ್ಲಿ ಶ್ಯಾಮಪ್ಪ ಮತ್ತು ಸುಬ್ರಮಣಿ ಹೆಸರಿಗೆ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ಸಮಂಜಸವಲ್ಲ .ಆದ್ದರಿಂದ ನಕಲಿ ಖಾತೆಗಳ ಕರಾಳ ಅಧ್ಯಯಕ್ಕೆ ಕೊನೆ ಎಂಬುದು ತಿಳಿಯದಂತಾಗಿದೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಪ್ರಶ್ನಿಸಿದರು.
ಕಾಮಸಮುದ್ರ ಹೋಬಳಿಯ ದೊಡ್ಡ ಮರಿಹಳ್ಳಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಜುನಾಥ್ ಬಿನ್ ನಾಗರಾಜಪ್ಪ ರವರ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಚಿಕ್ಕಪ್ಪನವರಾದ ಶಾಮಪ್ಪ ಮತ್ತು ಸುಬ್ರಮಣಿ ರವರು ನೀಡದೆ ನಕಲಿ ಖಾತೆಗಳನ್ನು ನಮ್ಮ ಹೆಸರಿಗೆ ಸೃಷ್ಟಿಸಿಕೊಂಡು ಭೂಕಬಳಿಕೆಯನ್ನು ಮಾಡಿಕೊಂಡಿದ್ದಾರೆ .ಘಟನೆಯ ವಿವರ :ಇದೇ ಗ್ರಾಮದ ಗಂಗಪ್ಪ ಎಂಬುವರಿಗೆ ನಾಗರಾಜು ಶಾಮಪ್ಪ ಸುಬ್ರಮಣಿ ಗೋವಿಂದಪ್ಪ ಎಂಬ ನಾಲ್ಕು ಜನ ಮಕ್ಕಳಿದ್ದು ,ಹಿರಿಯ ಮಗನಾದ ಲೇಟ್ ನಾಗರಾಜು ಎಂಬುವರಿಗೆ ಶಾಂತಮ್ಮ ಮತ್ತು ರಾಣಿ ಅಮ್ಮ ಇಬ್ಬರೂ ಹೆಂಡತಿಯರು ಇರುತ್ತಾರೆ ಕಾಲಕ್ರಮೇಣ ಗಂಗಪ್ಪ ಮತ್ತು ಹಿರಿಯ ಮಗ ನಾಗರಾಜಪ್ಪನವರು ನಿಧನರಾದ ನಂತರ ಗಂಗಪ್ಪನ ಹೆಸರಿನಲ್ಲಿ ಇದ್ದ ಸರ್ವೆ ನಂಬರ್ 35 /2, 37/3 ರಲ್ಲಿ ಕ್ರಮವಾಗಿ 1 ಎಕರೆ 7 ಗುಂಟೆ ಹಾಗೂ ಒಂದು ಎಕರೆ ಒಂದು ಗುಂಟೆ ಮತ್ತು ಸರ್ವೇ ನಂಬರ್ ಹೇಳರಲ್ಲಿ ಒಂದು ಎಕರೆ 30ಗುಂಟೆ ಜಮೀನು ಇರುತ್ತದೆ .ಆದರೆ ಶಾಮಪ್ಪ ಮತ್ತು ಸುಬ್ರಮಣಿಯವರು ತನ್ನ ಹಿರಿಯ ಸಹೋದರ ನಾಗರಾಜಪ್ಪನವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡದೆ ತಾವೇ ಕಬಳಿಸಿಕೊಂಡು ನಕಲಿ ಖಾತೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು .
ನಕಲಿ ಖಾತೆ ಸೃಷ್ಟಿಗೆ ಅಧಿಕಾರಿಗಳ ಸಾತ್ :ಈ ವಿವಾದಿತ ಸ್ಥಳಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿ ನಬೀಲ್ ಮತ್ತು ಜಗನ್ನಾಥವರು ವಂಶವೃಕ್ಷ ಮತ್ತು ಅಕ್ಕಪಕ್ಕದ ಮನೆಯವರ ಮಾಜರ್ ಮಾಡದೆ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿರುವುದು .ಲಕ್ಷಾಂತರ ರೂಪಾಯಿ ಹಣ ಅಧಿಕಾರಿಗಳಿಗೆ ವರ್ಗಾವಣೆ ಯಾಗಿರುವ ಸಂಶಯ ಉದ್ಭವಿಸುತ್ತದೆ .ಈ ಕೂಡಲೇ ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಂಡು ನಾಗರಾಜಪ್ಪನವರ ಮಗ ಮಂಜುನಾಥ್ ರವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಇಲ್ಲದೆ ಹೋದಲ್ಲಿ ಕಾಮಸಮುದ್ರದಿಂದ ತಾಲೂಕು ಆಡಳಿತ ಕಚೇರಿಯ ವರೆಗೆ ಕಾಲ್ನಡಿಗೆ ಜಾತ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೂರುದಾರ ಮಂಜುನಾಥರವರು ಮಾತನಾಡಿ ತಮ್ಮ ಚಿಕ್ಕಪ್ಪಂದಿರು ನಮಗೆ ಪಿತ್ರಾರ್ಜಿತ ಆಸ್ತಿಯನ್ನು ನೀಡದೆ ವಂಚಿಸಿದ್ದಾರೆ ಈ ಘಟನೆಗೆ ಸಂಬಂಧಪಟ್ಟಂತೆ ತಾಲೂಕು ದಂಡಾಧಿಕಾರಿ ರಶ್ಮಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷಾ ರವರಿಗೆ ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಸತತ ಒಂದು ತಿಂಗಳಿಂದ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ ಹಾಗೂ ಕಂದಾಯ ಇಲಾಖೆಯ ವತಿಯಿಂದ ನಕಲಿ ಖಾತೆಗಳನ್ನು ಸೂಚಿಸಿ ಪ್ರತಿವಾದಿಗಳಾದ ಶಾಮಪ್ಪ ಮತ್ತು ಸುಬ್ರಮಣಿ ರವರಿಗೆ ಮಾಡಿಕೊಟ್ಟಿರುತ್ತಾರೆ.
ಪ್ರಾಣಬೆದರಿಕೆಯ ಆರೋಪ :ನನ್ನ ಚಿಕ್ಕಪ್ಪಂದಿರಾದ ರಾಮಪ್ಪ ಮತ್ತು ಸುಬ್ರಮಣಿ ರವರು ಗ್ರಾಮಸ್ಥರ ಸಮಕ್ಷಮದಲ್ಲಿ ಜಮೀನಿ ನೀಡುವುದಾಗಿ ತಿಳಿಸಿದರು ಪುನಃ ನಾನು ಜಮೀನನ್ನು ನನ್ನ ಹೆಸರಿಗೆ ನೋಂದಾವಣಿ ಮಾಡಿಕೊಡುವಂತೆ ತಿಳಿಸಿದಾಗ ಮಾರಕಸ್ತ್ರಗಳ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ ಹಾಗೂ ನನ್ನ ಸ್ವಂತ ಹಣದಲ್ಲಿ ನಿರ್ಮಿಸಿರುವ ಮನೆಯನ್ನು ಬಿಟ್ಟು ಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ .ಹೀಗೆ ದೊಡ್ಡ ಅನಾಹುತ ಆಗುವುದಕ್ಕಿಂತ ಮುಂಚಿತವಾಗಿ ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಮನವಿ ಮಾಡಿದರು .
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಚಿಂಟು ರಾಮಚಂದ್ರ , ಕಾರ್ಮಿಕ ಘಟಕದ ಅಧ್ಯಕ್ಷ ಅಮರೇಶ್,ರಾಜ್ಯ ಮುಖಂಡ ಕೃಷ್ಣಮೂರ್ತಿ ,ತಿಪ್ಪಯ್ಯ ಇನ್ನು ಮುಂತಾದವರು ಹಾಜರಿದ್ದರು.
ವರದಿ: ವಿಷ್ಣು ಕೋಲಾರ