ಚಿಕ್ಕಮಗಳೂರಿನಲ್ಲೀ ಒಂಟಿ ಸಲಗದ ಸಾವು ..ಹಲವು ಅನುಮಾನಗಳಿಗೆ ದಾರಿ..!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಕಂಚಿನ ಕಲ್ಲು ದುರ್ಗದ ಖಾಸಗಿ ಕಾಫಿ ತೋಟದಲ್ಲಿ ಒಂಟಿ ಆನೆ ಸಾವನ್ನಪ್ಪಿರುವ ಘಟನೆ ನಡೆದಿದೆ .
ಚಿಕ್ಕಮಗಳೂರಿನ ಅರಣ್ಯ ಇಲಾಖೆ ಆನೆಯನ್ನು ಸೆರೆ ಹಿಡಿಯಲು ಈಗಾಗಲೆ ತಯಾರಿ ನಡೆಸಿದ್ದು. ಆನೆಯು ವಿದ್ಯುತ್ ಪ್ರವಹದಿಂದ ಮೃತಪಟ್ಟಿರುವಂತೆ ತೋರುತ್ತಿದೆ. ಆನೆ ಸಾವನ್ನಪ್ಪಿರುವ ಜಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ವಿದ್ಯುತ್ ಲೈನ್ ಪಕ್ಕದಲ್ಲಿರುವ ಹಲಸಿನ ಮರವು ಇದೆ. ಆನೆ ಹಲಸಿನ ಮರದಿಂದ ಹಲಸಿನ ಹಣ್ಣು ಕೊಯ್ಯುವ ಪ್ರಯತ್ನದಲ್ಲಿ ವಿದ್ಯುತ್ ತಂತಿಗೆ ದೇಹ ತಾಗಿ ಮೃತಪಟ್ಟಿರಬಹುದೇ ಎಂಬ ಊಹೆ ವ್ಯಕ್ತವಾಗಿದೆ.
ಇತ್ತೀಚೆಗೆ ಈ ಭಾಗದಲ್ಲಿ ಆನಂದ ಪೂಜಾರಿ ಎಂಬುವವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಕೆಲ ತಿಂಗಳ ಹಿಂದೆಯೂ ಇದೇ ಭಾಗದಲ್ಲಿ ಕಾರ್ಮಿಕರೊಬ್ಬರನ್ನು ಈ ಭಾಗದಲ್ಲಿ ಕಾಡಾನೆ ತುಳಿದು ಸಾಯಿಸಿತ್ತು. ಹಾಗೆಯೇ ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ಆನೆ ತುಳಿದು ಸಾಯಿಸಿತ್ತು. ಮನುಷ್ಯರ ಮೇಲೆ ದಾಳಿ ಮಾಡಿ ಸಾಯಿಸಿದ್ದು ಈಗ ಮೃತಪಟ್ಟಿರುವ ಆನೆಯೇ ಇರಬಹುದು ಎಂದು ಶಂಕಿಸಲಾಗಿದೆ. ಪಕ್ಕದಲ್ಲಿರುವ ಹಲಸಿನ ಮರದ ಕೊಂಬೆ ಮುರಿದು ಬಿದ್ದಿರುವಂತೆ ತೋರುತ್ತಿದೆ.
ಈ ನಡುವೆ ಆನೆಯನ್ನು ವಿದ್ಯುತ್ ಹರಿಸುವ ಮೂಲಕ ಕೊಲ್ಲಲಾಗಿದೆ ಎನ್ನುವ ಆರೋಪ ತಿಳಿದುಬಂದಿದೆ. ಈ ಆರೋಪಕ್ಕೆ ಸಂಬಂದಿಸಿದಂತೆ ಇಲಾಖೆ ಸಿಬ್ಬಂದಿ ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು. ಈ ವಿಷಯವನ್ನು ಕುರಿತು ತನಿಖೆ ಮಾಡಿ ಪ್ರಕರಣ ದಾಖಲು ಮಾಡಬೇಕು ಎಂದು ಪ್ರಾಣಿ ಪ್ರಿಯರು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಒಂಟಿ ಸಲಗ ಸಾವನ್ನಪ್ಪಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.