ಶಾಲೆಗೆ ಬಣ್ಣದ ಚಿತ್ತಾರ ಮೂಡಿಸಿದ ಸಹೃದಯಿ ಕನ್ನಡಿಗರು ಸಹಕಾರ ನೀಡಿದ ಸ್ವಯಂ ಸೇವಕರು
(CHIKKAMAGALURU): ಚಿಕ್ಕಮಗಳೂರು ತಾಲ್ಲೂಕು ಖಾಂಡ್ಯ ಹೋಬಳಿ ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಖಾಂಡ್ಯದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸಹೃದಯಿ ಕನ್ನಡಿಗರು ಬೆಂಗಳೂರು ಇವರ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕತಾಗಾರು. ಹುಣಸೆಹಳ್ಳಿ ಈ ಶಾಲೆಗೆ ಹದಿನೈದು ವರ್ಷಗಳಿಂದ ಬಣ್ಣವೇ ಕಾಣದ ಏಳು ಕೊಠಡಿಗೆ ಎರಡು ದಿನ ಬಣ್ಣ ಬಳಿಯುವ ಕಾರ್ಯ ನಡೆಯಿತು. ಹಾಗೂ ಗೋಡೆಗಳಿಗೆ ಚಿತ್ತಾರ ಬಿಡಿಸುವ ಕಾರ್ಯ ನಡೆಸಲಾಯಿತು ಶಾಲಾ ಕೊಠಡಿ ಕಂಬಗಳಿಗೆ ಕನ್ನಡ ಬಾವುಟ ಬಣ್ಣ ಬಳಿಯಲಾಯಿತು.
ಹಾಗೂ ಈ ಬಣ್ಣ ಬಳಿಯುವ ಕಾರ್ಯಕ್ಕೆ ಸಹೃದಯಿ ಕನ್ನಡಿಗರು ಸಾಮಾಜಿಕ ಸೇವಾ ತಂಡ ದಾನಿಗಳಿಂದ ಸಹಾಯಧನ ಸಂಗ್ರಹಿಸಿ ಶಾಲೆಯ ಕೊಠಡಿಗೆ ಬಣ್ಣವನ್ನು ಕೊಂಡು ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಮೆಟ್ರೊ ಇಂಜಿನಿಯರ್ ಹಾಗೂ ಬೇರೆ ಬೇರೆ ಇಲಾಖೆ ನೌಕರರು ಹಾಗೂ ಚಿತ್ರ ಕಲಾವಿದರು ಕೊಠಡಿ ಗೋಡೆಗಳಿಗೆ ಚಿತ್ತಾರ ಬಿಡಿಸಿ ಶಾಲೆಯ ಚಿತ್ರಣವನ್ನು ಬದಲಾವಣೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತಿದ್ದೂ ಅ ಮಕ್ಕಳು ಸಹ ಉನ್ನತ ಗುಣಮಟ್ಟದ ಕೊಠಡಿಯಲ್ಲಿ ಕುಳಿತುವಂತಾಗಬೇಕು ಎಂಬ ಅಶಯ. ಈ ಶಾಲೆಗೆ 40 ಸಾವಿರ ಮೌಲ್ಯದ ಬಣ್ಣವನ್ನು ವಿನಿಯೋಗಿಸಲಾಗಿರುತ್ತದೆ. ಈ ಬಣ್ಣ ಉತ್ತಮ ಗುಣಮಟ್ಟದ ಬಣ್ಣವಾಗಿರುತ್ತದೆ. ಹಾಗೂ ಈ ಶಾಲೆಯ 51 ಮಕ್ಕಳಿಗೆ ಬ್ಯಾಗ್ ನೋಟ್ ಪುಸ್ತಕ ಪೆನ್ ಪೆನ್ಸಿಲ್ ಕೊಡಲಾಯಿತು. ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಜೇನುಗದ್ದೆ ಶಾಲೆಯ 18 ಮಕ್ಕಳಿಗೆ ಬ್ಯಾಗ್ ನೋಟ್ ಪುಸ್ತಕ ಪೆನ್ ಪೆನ್ಸಿಲ್ ನೀಡಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕತಗಾರು ಶಾಲೆಯಲ್ಲಿ 51 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಆದರೆ ಈ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ ಆದಷ್ಟೂ ಬೇಗ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ಶೌಚಾಲಯ ನಿರ್ಮಾಣ ಮಾಡಬೇಕಾಗಿ ಮನವಿ. ಈ ಬಣ್ಣ ಬಳಿಯುವ ಕಾರ್ಯಕ್ಕೆ ಸಹೃದಯಿ ಕನ್ನಡಿಗರು ತಂಡದ ಅಧ್ಯಕ್ಷರಾದ ಭಾಸ್ಕರ್, ಜಗದೀಶ್,ನಿತಿನ್,ಚರಣಕುಮಾರ್, ರಾಜೇಶ್, ಅರುಣ್ ಕುಮಾರ್, ಕಾರ್ತಿಕ್ ಚಿತ್ರ ಕಲಾವಿದರು,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖಾಂಡ್ಯ ಮೇಲ್ವಿಚಾರಕರಾದ ಸುರೇಶ್ ಕೃಷಿ ಮೇಲ್ವಿಚಾರಕರಾದ ರವಿಚಂದ್ರ, ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಚಂದ್ರಶೇಖರ್ ರೈ, ಸ್ವಯಂಸೇವಕರಾದ ಸುರೇಶ್ ಕೋಟ್ಯಾನ್, ರಘುಪತಿ ವಿ ಸಿ ಬಿದರೆ, ಸಂಪತ್, ಕುಮಾರ, ಯೋಗೀಶ್ ಆಚಾರ್ಯ, ರೇಖಾ, ಸೇವಾ ಪ್ರತಿನಿಧಿ ಶಾಜಿಯ ಬಾನು,ಶಾಲಾ ಕ್ಲಸ್ಟರ್ ಅಧಿಕಾರಿ ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೇಷಪ್ಪ ಗೌಡ ಮತ್ತು ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ , ಉಪಾಧ್ಯಕ್ಷರಾದ ಶೋಭ, ಸದಸ್ಯರಾದ ಹರೀಶ್, ರಾಜು, ಶಾಲಾ ಮುಖ್ಯ ಶಿಕ್ಷಕರಾದ ಅನುಪಮ ಸಹಶಿಕ್ಷರಾದ ಶೋಭ ಸುಮಲತಾ ಮತ್ತು ಪೋಷಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು.