ಮರ ಗಿಡಗಳನ್ನು ಬೆಳೆಸುವುದರ ಮೂಲಕ ನಾಡನ್ನು ಬೆಳೆಸಬೇಕು.
(SHIVAMOGA ): ಸೊರಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವಾನಂದ್ ಪಾಣಿ ಅವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು, ಮರ ಗಿಡಗಳನ್ನು ಬೆಳೆಸುವುದರ ಮೂಲಕ ನಾಡನ್ನು ಬೆಳೆಸಬೇಕು.
ಹಾಗೂ ನಾವೆಲ್ಲರೂ ಸಹ ನಮ್ಮ ಸುತ್ತಮುತ್ತಲಿನ ಗ್ರಾಮಗಳ ಕಾಡುಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಒಂದಿಷ್ಟು ಪರಿಸರವನ್ನು ಉಳಿಸಿ ಅವರ ಸಂತೋಷದ ಜೀವನ ನಡೆಸಲು ದಾರಿ ಮಾಡಿಕೊಡಬೇಕಾಗಿದೆ ಎಂದರು.
ಜೆಸಿಐ ಭಾರತದ ಹವಾಮಾನ ಮತ್ತು ಪರಿಸರ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ಪ್ರಶಾಂತ್ ದೊಡ್ಡಮನೆ ಇವರು ಈಗಾಗಲೇ ಹತ್ತು ಹಲವಾರು ಶಾಲೆಗಳಿಗೆ ತಮ್ಮ ಹುಟ್ಟು ಹಬ್ಬದ ದಿನ ವನಗಳ ನಿರ್ಮಾಣ ಮಾಡಿ ಮಕ್ಕಳ ಭವಿಷ್ಯಕ್ಕೆ ಮತ್ತು ಶಾಲೆಯ ಸೌಂದರ್ಯವನ್ನು ಹೆಚ್ಚಿಸಲು ದಾರಿದೀಪವಾಗಿದ್ದಾರೆ ,
ವಿದ್ಯಾರ್ಥಿಗಳು ಸಹ ತಮ್ಮ ಹುಟ್ಟುಹಬ್ಬವನ್ನು ಗಿಡ ನೆಡುವುದರ ಮೂಲಕ ಪ್ರಶಾಂತ್ ದೊಡ್ಡ ಮನೆಯವರಂತೆ ಸಮಾಜಕ್ಕೆ ಮಾದರಿಯಾಗಬೇಕು ಎಂದರು,
ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ತಾವು ಜೀವನದಲ್ಲಿ ಉನ್ನತ ಹುದ್ದೆಗೆ ಏರಿದಾಗ ಮತ್ತು ಆರ್ಥಿಕವಾಗಿ ಬಲಶಾಲಿಗಳಾದಾಗ ತಾವು ಓದಿದಂತಹ ಹಾಗೂ ಕಲಿತಂತಹ ಸರ್ಕಾರಿ ಶಾಲೆಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವುದರ ಮೂಲಕ ಸರ್ಕಾರಿ ಶಾಲೆಗಳನ್ನ ಉಳಿಸಬೇಕು ಮತ್ತು ಬೆಳೆಸಬೇಕು ನಮ್ಮ ಸುತ್ತಲಿನ ಪರಿಸರವನ್ನ ನಾವೆಲ್ಲರೂ ಯುವಕರು ಸೇರಿ ಉಳಿಸಿ ಬೆಳೆಸೋಣ ಎಂದು ಜೆಸಿಐ ಭಾರತದ ಹವಾಮಾನ ಮತ್ತು ಪರಿಸರ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ಪ್ರಶಾಂತ್ ದೊಡ್ಡಮನೆ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು, ಜೆಸಿಐ ಭಾರತದ ವತಿಯಿಂದ ಈ ದಿನ ಏಕಕಾಲದಲ್ಲಿ ಭಾರತದ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಜೆಸಿಐನ ಪಾರ್ಕ್ ನ ನಿರ್ಮಾಣ ಮಾಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಜೆಸಿ ಸಂಸ್ಥೆ ಆಚರಣೆ ಮಾಡುತ್ತಿದೆ ಎಂದು ಹೇಳಿದರು,
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಅಂಕರವಳ್ಳಿ ಬಸ್ ನಿಲ್ದಾಣದ ಸ್ವಚ್ಛತೆಯನ್ನು ಮಾಡಿದರು,
ಈ ಸಂದರ್ಭದಲ್ಲಿ ಸ್ನೇಹ ಸುರಭಿ ಸಂಘದ ಅಧ್ಯಕ್ಷರಾದ ಸರಸ್ವತಿ ನಾವಡ , ಜೆಸಿಐ ಸೊರಬ ಸಿಂಧೂರ ಘಟಕದ ಗೌರವ ಅಧ್ಯಕ್ಷರಾದ ಸವಿತಾ ಎಂ ಕೆ ಭಟ್, ಸ್ಥಾಪಕ ಅಧ್ಯಕ್ಷರಾದ ಪೂಜಾ ಪ್ರಶಾಂತ್ , ನಿರ್ದೇಶಕರಾದ ಬಾಲಾಜಿ ಪಾಟೀಲ್, ವನಿತಾ ಪಾಟೀಲ್, ಗಜೇಂದ್ರ, ಶಾಲೆಯ ಎಸ್. ಬಿ .ಎಂ. ಸಿ ಅಧ್ಯಕ್ಷರಾದ ತಿಮ್ಮಪ್ಪ , ಬಿ ವಿ ಚಂದ್ರಶೇಖರ್ ಡಿ .ಮುಖ್ಯ ಶಿಕ್ಷಕರು , ಸಹ ಶಿಕ್ಷಕರಾದ ಶ್ರೀಮತಿ ಚಿತ್ರಮ್ಮ , ರೇಣುಕಾ , ನಾಗರಾಜ್, ರಾಜಶೇಖರ್, ಶ್ರೀಮತಿ ರೀನಾ ಪುಷ್ಪಲತಾ,ಮೌಲಾಸಾಬ್ ಪದ್ಮಾವತಿ ,
ಮುಂತಾದವರು ಉಪಸ್ಥಿತರಿದ್ದರು
ವರದಿ: ರಾಘವೇಂದ್ರ ತಾಳಗುಪ್ಪ