ನ್ಯೂಸ್ಶಿವಮೊಗ್ಗ

ಸೊರಬ ಕಾಂಗ್ರೆಸ್ ಮುಖಂಡರ ಹಸ್ತಕ್ಷೇಪಕ್ಕೆ ಬೇಸತ್ತ ಪುರಸಭೆ ಸದಸ್ಯರು

ಸೊರಬ ಕಾಂಗ್ರೆಸ್ ಮುಖಂಡರ ಹಸ್ತಕ್ಷೇಪಕ್ಕೆ ಬೇಸತ್ತ ಪುರಸಭೆ ಸದಸ್ಯರು

(SHIVAMOGA): ಪ್ರಾಥಮಿಕ ಸದಸ್ಯತ್ವಕ್ಕೆ ಗುಡ್ ಬೈ ಹೇಳಲು ತಯಾರಿ.

ಸೊರಬ: ಕಾಂಗ್ರೆಸ್ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪುರಸಭೆಯ ಅನುದಾನ ಬಿಡುಗಡೆಯಲ್ಲಿಯೂ ಹಸ್ತಕ್ಷೇಪ ನಡೆಸುತ್ತಾ ತಮ್ಮನ್ನು ಕಡೆಗಾಣಿಸುತ್ತಿದ್ದು, ಇದು ಹೀಗೆ ಮುಂದುವರೆದರೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪುರಸಭೆ ಸದಸ್ಯ ಪ್ರಸನ್ನಕುಮಾರ್ ದೊಡ್ಡಮನೆ ಎಚ್ಚರಿಸಿದರು.

ಶುಕ್ರವಾರ ಸಂಜೆ ಪಟ್ಟಣದಲ್ಲಿ ಪುರಸಭೆ ಸದಸ್ಯರಾದ ಸುಲ್ತಾನ ಬಾನು, ಶ್ರೀರಂಜನಿ ಪ್ರವೀಣ ಕುಮಾರ್ ರೊಡನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಮಧು ಬಂಗಾರಪ್ಪನವರಿ0ದ ಶನಿವಾರ ಪಟ್ಟಣದ ವಿವಿಧ ಭಾಗಗಳಲ್ಲಿ ಅಭಿವೃದ್ದಿ ಕಾರ್ಯಗಳ ಶಂಕುಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ. ಆದರೆ ಕಾಮಗಾರಿ ಯಾವ ಅನುದಾನದಲ್ಲಿ ಬಿಡುಗಡೆಯಾಗಿದೆ ಎಂಬ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ. ಕೇವಲ ಔಪಚಾರಿಕವಾಗಿ ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆಯೇ ಹೊರತು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪುರಸಭೆ ಮುಖ್ಯಾಧಿಕಾರಿಗೆ ಈ ಬಗ್ಗೆ ಕೇಳಿದರೆ ತಮಗೂ ಯಾವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಆಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲವೆಂದು ಹೇಳುತ್ತಿದ್ದಾರೆ.

ಪುರಸಭೆಯ ಕಾರ್ಯಕಲಾಪಗಳಲ್ಲಿಯೂ ಇದರ ಪ್ರಸ್ಥಾಪವಾಗಿಲ್ಲ. ಕಾಂಗ್ರೆಸ್‌ನ ನಾಲ್ಕು ಸದಸ್ಯರಿರುವ ನಮಗೆ ಮಾಹಿತೆಯೇ ಇಲ್ಲದೆ ಬೇರೆ ವಾರ್ಡಗಳಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಹಿಂದಿನ ಶಾಸಕ ಕುಮಾರ್ ಬಂಗಾರಪ್ಪ ನಮಗೆ ಆನುದಾನದಲ್ಲಿ ತಾರತಮ್ಯ ಮಾಡುತ್ತಿದ್ದರೇ, ಈಗಿನ ಕಾಂಗ್ರೇಸ್ ಮುಖಂಡರು ಪುರಸಭೆಯ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮ ಗಮನಕ್ಕೂ ತಾರದೆ ಕಾರ್ಯ ನಿರವಹಿಸುತ್ತಿದ್ದು, ಸಾರ್ವಜನಿಕರ ಆಸ್ಪತ್ರೆಯೂ ಸೇರಿದಂತೆ ಯಾವುದೇ ವಿವಿಧ ಸಮಿತಿಗಳ ಸದಸ್ಯರ ಆಯ್ಕೆಯಲ್ಲಿಯೂ ನಮ್ಮ ಅಭಿಪ್ರಾಯವನ್ನು ಪರಿಗಣಿಸುತ್ತಿಲ್ಲ ಎಂದರು.

ಶಿಕ್ಷಣ ಸಚಿವ ಮುಧು ಬಂಗಾರಪ್ಪನವರ ಅಪ್ಪಟ ಅಭಿಮಾನಿಯಾದ ನಾನು ಅವರು ಜೇಡಿಎಸ್‌ನಲ್ಲಿದಾಗಲೂ ಸಹ ನಾನು ಕಾಂಗ್ರೆಸ್ ಸದಸ್ಯನಾಗಿದ್ದರೂ ಕೊರೋನಾ ಸಂದರ್ಭದಲ್ಲಿ ಅವರ ಸೂಚನೆಯಂತೆಯೇ ಕೆಲಸ ಮಾಡಿದ್ದೇನೆ ಆದರೇ ಸ್ಥಳಿಯ ನಾಯಕರು ನಮ್ಮನ್ನು ವಿಶ್ವಾಸಕ್ಕೆ ಪಡೆಯದೆ ಎಲ್ಲ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಈಗಾಗಲೇ ತಾಲೂಕು, ಜಿಲ್ಲಾ ಅಧ್ಯಕ್ಷರುಗಳ ಗಮನಕ್ಕೆ ತರಲಾಗಿದೆ ಎಂದರು. ಈ ನಡೆ ಹೀಗೆ ಮುಂದುವರೆದರೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗುವುದು ಎಂದರು.

ಸುಲ್ತಾನ ಬೇಗಂ, ಶ್ರೀರಂಜಿನಿ ಪ್ರವೀಣ್ ಕುಮಾರ್ ಮಾತನಾಡಿ ಮಧು ಬಂಗಾರಪ್ಪನವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಕಾಂಗ್ರೆಸ್ ಮುಖಂಡರು ನಾವು ಜನಪ್ರತಿನಿಧಿಗಳೂ ಎಂಬುದನ್ನು ಪರಿಗಣಿಸದೇ ತಮ್ಮ ಮನ ಬಂದAತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ನಮಗೆ ಏನು ಗೌರವ ಉಳಿಯುತ್ತದೆ. ತಮ್ಮ ವಾರ್ಡುಗಳಲ್ಲಿ ಹಲವಾರು ಸಮಸ್ಯೆಗಳಿದ್ದರೂ ಈ ಬಗ್ಗೆ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೇ ತಾರತಮ್ಯ ಮಾಡಲಾಗುತ್ತಿದೆ. ಕೂಡಲೇ ಈ ನಡೆಯನ್ನು ಮುಖಂಡರು ನಿಲ್ಲಿಸದೇ ಇದ್ದಲ್ಲಿ ತಾವು ಸಹ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದರು. ದತ್ತಾತ್ರೇಯ ಶೇಟ್ ಉಪಸ್ಥಿತರಿದ್ದರು.

ವರದಿ : ಸಂದೀಪ ಯು.ಎಲ್.,ವೆಸ್ಟರ್ನ್ ಘಾಟ್ ನ್ಯೂಸ್, ಸೊರಬ

Leave a Reply

Your email address will not be published. Required fields are marked *

Scan the code