ಚಿಕ್ಕಮಗಳೂರುನ್ಯೂಸ್

ಪುನೀತ್ ಹೆಸರು ಎಂದಿಗೂ ಅಮರ

ಪುನೀತ್ ಹೆಸರು ಎಂದಿಗೂ ಅಮರ


(CHIKKAMAGALURU):ಕನ್ನಡ ನಾಡಿನ ಮಣ್ಣಿನಲ್ಲಿ ನಟ ಪುನೀತ್ ರಾಜ್‌ಕುಮಾರ್ ಹೆಸರು ಎಂದಿಗೂ ಅಮರವಾಗಿ ಇರಲಿದೆ ಎಂದು ಎನ್.ಆರ್.ಪುರ ತಾಲೂಕು ಚುಸಾಪ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದ ಕೊಪ್ಪ ರಸ್ತೆಯ ಶುಭವೀರ ಸರ್ವೀಸ್ ಸ್ಟೇಷನ್‌ನಲ್ಲಿ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಮಂಗಳವಾರ ಆಯೋಜಿಸಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಅವರು ಮಾತನಾಡಿದರು.


ಕನ್ನಡ ಚಿತ್ರರಂಗದ ಇತಿಹಾಸ ಮಾತ್ರವಲ್ಲದೇ ರಾಜ್ಯದ ಇತಿಹಾಸದಲ್ಲಿಯೇ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪುನೀತ್ ಅವರು ವಿಶೇಷ ಪ್ರತಿಭೆಯಾಗಿದ್ದಾರೆ. ಅವರು ಕೇವಲ ನಟರಾಗದೇ ಸಮಾಜಮುಖಿ ಕಾರ್ಯಗಳ ಮೂಲಕ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಕುಟುಂಬದ ಸೇವಾ ಮನೋಭಾವನೆಯನ್ನು ಮುಂದುವರೆಸಿದ್ದಾರೆ.
ಈ ಮೂಲಕ ತಮ್ಮ ಮೇರು ವ್ಯಕ್ತಿತ್ವವನ್ನು ಬೆಳೆಸಿಕೊಂಡು ಪ್ರತಿಯೊಬ್ಬ ಮನದಲ್ಲೂ ಸದಾ ಹಚ್ಚ ಹಸುರಾಗಿ ಉಳಿದಿದ್ದಾರೆ ಎಂದರು.
ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ತಮ್ಮ ಕಿರಿಯ ವಯಸ್ಸಿನಲ್ಲಿ ಮಾಡಿದ ಸಾಧನೆಗಳು ಸಾವಿರಾರು. ಅವರ ಜೀವನ ನಮಗೆಲ್ಲ ಮಾದರಿಯಾಗಿದ್ದು, ಅವರು ನಡೆಸಿದ ಸಾಮಾಜಿಕ ಕಾರ್ಯಗಳನ್ನು ನಾವುಗಳೆಲ್ಲ ಮುಂದುವರೆಸಬೇಕಿದೆ. ಅವರ ಜನ್ಮದಿನ, ಪುಣ್ಯಸ್ಮರಣೆಯಲ್ಲಿ ದೀನ ದಲಿತರು, ಬಡವರು, ಸಾಮಾನ್ಯರಿಗಾಗುವ ಉಪಯೋಗಕಾರಿ ಕೆಲಸಗಳನ್ನು ನಾವು ಮಾಡಬೇಕಿದೆ ಎಂದರು.


ಮುಖ್ಯಶಿಕ್ಷಕ ಸುರೇಂದ್ರ ಮಾತನಾಡಿ, ಮಾಸ್ಟರ್ ಲೋಹಿತ್ ಎಂಬ ಹೆಸರಿನಿಂದ ಬಾಲನಟನಾಗಿ ಪ್ರಸಿದ್ಧನಾಗಿದ್ದ ಪುನೀತ್, ಚಲನಚಿತ್ರ ರಂಗದಲ್ಲಿ ಮಾಡಿದ ಸಾಧನೆಗಿಂತ ಸಮಾಜದಲ್ಲಿ ತನ್ನದೇ ಆದ ಸೇವಾ ಕಾರ್ಯಕ್ರಮಗಳನ್ನು ಮಾಡಿ ಗಮನಸೆಳೆದಿದ್ದಾರೆ. ಪುನೀತ್ ಒಬ್ಬ ಅದ್ಭುತವಾದ ವ್ಯಕ್ತಿ, ಶಕ್ತಿಯಾಗಿದ್ದು, ಅವರ ಜೀವನ ಎಲ್ಲರಿಗೂ ಕೂಡ ಅನುಕರಣೀಯವಾಗಿದೆ. ಇಂತಹ ಮಾದರಿ ವ್ಯಕ್ತಿಗಳ ಆದರ್ಶಗಳನ್ನು ನಾವು ಸಹ ಅಳವಡಿಸಿಕೊಳ್ಳಬೇಕಿದೆ ಎಂದರು.
ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಜೇಸಿಐ ಅಧ್ಯಕ್ಷ ಎನ್.ಶಶಿಧರ್, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜ್‌ಭಟ್, ಪ್ರೌಢಶಾಲಾ ಶಿಕ್ಷಕರಾದ ಸಂಘದ ಅಧ್ಯಕ್ಷ ಕೆ.ಎಂ.ರಾಘವೇAದ್ರ, ಉಪನ್ಯಾಸಕ ಸೋಮೇಶ್‌ಗೌಡ, ಪ್ರಮುಖರಾದ ಪ್ರಕಾಶ್ ಮುದುಗುಣಿ, ಕೆ.ಪ್ರಸಾದ್, ಸತೀಶ್ ಕಾಮತ್, ರಾಜೇಶ್ ಬನ್ನೂರು, ರಿಚರ್ಡ್ ಮಥಾಯಿಸ್, ಸನತ್ ಶೆಟ್ಟಿ, ಹುಸೇನ್, ಚಂದ್ರಶೇಖರ್ ಬಾಬ್ಲಿ, ಸಾರ್ಥಕ್, ಮಿಷಾ, ಮಿಶಿಕಾ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code