ಜಿಲ್ಲೆನ್ಯೂಸ್

ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ

ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ

ಬಂಗಾರಪೇಟೆ :12ನೇ ಶತಮಾನದ ಬಸವಣ್ಣನವರ ಸಮಕಾಲಿನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ,ಇವರು ಭಾರತೀಯ ಯೋಧ ಎಂಬ ಹೆಸರು ಪಡೆದವರು ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.

ಬಂಗಾರಪೇಟೆ:ಪಟ್ಟಣದ ಎಸಿ ಅಬ್ದುಲ್ ಘಪೂರ್ ಬಡಾವಣೆ ಬಳಿ ಇರುವ ಪುರಸಭೆಯಸಾರ್ವಜನಿಕರ ಉದ್ಯಾನವನದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಟ್ಟಡ ಹಾಗೂ ಶ್ರೀಮಡಿವಾಳ ಮಾಚಿದೇವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೈಲಿಗೆಯನ್ನು ಮಡಿ ಮಾಡುವಂತಹ ವೃತ್ತಿಯಲ್ಲಿ ಜನಿಸಿದ ತಳ ಸಮುದಾಯದ ಒಬ್ಬ ವ್ಯಕ್ತಿ 12ನೇ ಶತಮಾನದ ಸಮಾಜದಲ್ಲಿದ್ದ ಕೆಲವು ಕೆಟ್ಟ ಮನಸ್ಥಿತಿಗಳ ಮನಸ್ಸುಗಳನ್ನು ತೊಳೆಯುವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ ಎಂದು ಹೇಳಿದರು.

ಈ ಸಮಾಜವನ್ನು ಸರಿ ದಾರಿಯಲ್ಲಿ ತರಬೇಕೆಂಬ ಆಶಯದಂತೆ ಅಂದು ಎಲ್ಲಾ ಸಮುದಾಯದವನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕೆಂದು ಬಸವಣ್ಣನವರ ಆಶಯದಂತೆ ಮಾಚಿದೇವರು ಸಹ ಶ್ರಮಪಟ್ಟಂತವರು. ಈಗಿನ ನಮ್ಮ ಸಮಾಜದಲ್ಲಿ ನಾವೆಲ್ಲರೂ ಉತ್ತಮ ಬಟ್ಟೆಯನ್ನು ಹಾಕಿಕೊಂಡು ಬರುತ್ತೇವೆ ಎಂದರೆ ಅದಕ್ಕೆ ಮೂಲ ಕಾರಣಕರ್ತರು ಮಡಿವಾಳ ಸಮಾಜದವರು ಎಂದು ಹೇಳಿದರು.

ಈ ಸಮಾಜದ ಎಲ್ಲರೂ ವರ್ಷಕ್ಕೊಮ್ಮೆ ಮಾಚಿದೇವರನ್ನು ನೆನೆಯಬೇಕು ಎಂದರು, ಮಡಿವಾಳ ಜಯಂತಿಯನ್ನು ಆಚರಣೆ ಮಾಡಬೇಕೆಂಬ ಆಶಯದೊಂದಿಗೆ ಈಗಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರುಜಯಂತಿಯನ್ನು ಆಚರಿಸಲು ಅವಕಾಶ ಮಾಡಿಕೊಟ್ಟರು, ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು,ದಲಿತ ಸಮುದಾಯಗಳೆಂದರೆ ಪಂಚಪ್ರಾಣ ಎಂದರು. ದೇವರಾಜ್ ಅರಸು ರವರ ನಂತರ ಹಿಂದುಳಿದ ಸಮಾಜದ ಬಗ್ಗೆ ಹಾಗೂ ಬಡವರು,ದಲಿತರ ಬಗ್ಗೆ ಕನಿಕರ ಹೊಂದಿರುವವರು ನಮ್ಮ ಸಿದ್ದರಾಮಯ್ಯನವರು ಮಾತ್ರ ಎಂದು ಹೇಳಿದರು.

ಸಿ.ಎಂ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಬಡವರಿಗಾಗಿ 5 ಗ್ಯಾರೆಂಟಿ ಯೋಜನೆಗಳನ್ನು ನೀಡಿದ್ದಾರೆ. ಇದರಿಂದ ಬಹಳಷ್ಟು ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲು ಸಹಾಯವಾಗಿದೆ ಎಂದರು. ಈಗ ನೀವು ನಿರ್ಮಿಸಿರುವ ಸಂಘದ ಕಟ್ಟಡದ ಮೇಲೆ ಮತ್ತೊಂದು ಕಟ್ಟಡ ನಿರ್ಮಾಣ ಮಾಡಲು ನನ್ನ ಶಾಸಕರ ಅನುದಾನದಿಂದ 5 ಲಕ್ಷ ರೂ ನೀಡುತ್ತೇನೆ ಎಂದು ಭರವಸೆ ನೀಡಿದರು. ಹಾಗೂ ಶಾಸಕರ ಟ್ರಸ್ಟ್ ವತಿಯಿಂದ ಮಡಿವಾಳ ಸಮುದಾಯದ 25 ಜನಕ್ಕೆ ಇಸ್ತ್ರಿ ಪೆಟ್ಟಿಗೆ ನೀಡುತ್ತೇನೆ ಎಂದು ಹೇಳಿದರು.

ಮಡಿವಾಳ ಸಂಘದ ಅಧ್ಯಕ್ಷರಾದ ಗೋವಿಂದಪ್ಪ ಮಾತನಾಡಿ,
ಮಡಿವಾಳದವರು ತಳ ಸಮುದಾಯದ ಒಂದು ವರ್ಗವಾಗಿದೆ. ಈ ವರ್ಗದವರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಮತ್ತು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ನಿರ್ಮಿಸಿ ಕೊಡಿ ಎಂದು ತಿಳಿಸಿದರು ಮತ್ತು ನಮ್ಮ ಸಮುದಾಯವನ್ನು ಎಸ್.ಸಿ. ಸಮುದಾಯಕ್ಕೆ ಸೇರಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬೇಕೆಂದರು,ಹಾಗೂ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ,ಬಿಇಓ ಸುಕನ್ಯ ಪುರಸಭೆ ಸದಸ್ಯರಾದ ವೆಂಕಟೇಶ್,ಗೋವಿಂದ,ಶಫಿ, ಭಾಗ್ಯಮ್ಮ ಹಾಗೂ ಮಡಿವಾಳ ಸಂಘದ ರಾಜ್ಯಾಧ್ಯಕ್ಷರಾದ ನಂಜಪ್ಪ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ಜಿಲ್ಲಾಧ್ಯಕ್ಷ ವೆಂಕಟಾಚಲಪತಿ, ಕಾರ್ಯದರ್ಶಿ ರಂಗನಾಥ್, ತಾಲೂಕುಅಧ್ಯಕ್ಷ ಗೋವಿಂದಪ್ಪ, ಉಪಾಧ್ಯಕ್ಷ ಬೇಕರಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕೆಇಬಿ ವೆಂಕಟೇಶ್, ಖಜಾಂಚಿ ಡೈರಿ ವೆಂಕಟೇಶ್, ನಿಕಟ ಪೂರ್ವ ಅಧ್ಯಕ್ಷ ಸಿದ್ದನಹಳ್ಳಿ ವೆಂಕಟೇಶಪ್ಪ, ನಿರ್ದೇಶಕರಾದ ತ್ಯಾಗರಾಜ್, ಮುರಳಿ, ರಘುರಾಮ್, ನಾಗೇಶ್, ಮುನಿರಾಜು, ಕೆ. ನಾರಾಯಣಪ್ಪ, ಶ್ರೀನಿವಾಸ್, ಅಗ್ನಿ ಮಂಜು, ರಾಜಪ್ಪ, ಮಂಜುನಾಥ್, ಬಿ.ಜಿ.ಸತೀಶ್ ಕುಮಾರ್, ಮಡಿವಾಳ ನೌಕರರ ಬಳಗದ ಶಿಕ್ಷಕ ವೃಂದದವರಾದ ಶ್ಯಾಮ್ ಮೂರ್ತಿ, ನಂಜುಂಡಪ್ಪ, ಕೃಷ್ಣಪ್ಪ, ವೆಂಕಟರಾಮಪ್ಪ, ರಾಮಾಂಜಿ, ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಬಿ. ನಾರಾಯಣಸ್ವಾಮಿ, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ತಾಲ್ಲೂಕು ಅಧ್ಯಕ್ಷ ರಾಜಪ್ಪ, ಸಮುದಾಯದ ಮುಖಂಡರಾದ ರಂಗನಾಥ್, ನಿವೃತ್ತ ಲೋಕಾಯುಕ್ತ ಕೃಷ್ಣಪ್ಪ, ವೆಂಕಟಪತಿ, ನೆರನಹಳ್ಳಿ ಗ್ರಾ.ಪಂ. ಸದಸ್ಯ ರಮೇಶ್ ಮತ್ತು ಸಮುದಾಯದ ಜನರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code