ಹಳೆ ಬಸ್ ನಿಲ್ದಾಣ ಸೋರುತ್ತಿದ್ದು ಇದನ್ನ ಸರಿ ಪಡಿಸದೆ ಬೇಕಾಬಿಟ್ಟಿ ಉತ್ತರ ಕೊಡುವ ಅಧಿಕಾರಿಗಳು.
(SHIVAMOGA): ಸಾಗರ ನಗರದ ಹಳೆ ಬಸ್ ನಿಲ್ದಾಣ ಸೋರುತ್ತಿದ್ದು ಇದನ್ನ ಸರಿ ಪಡಿಸದೆ ಇದ್ದರೆ ಎಲ್ಲಾ ಪಿಲ್ಲರ್ ಗಳು ನೆಲಕ್ಕೆ. ಇಲ್ಲಿನ ಹಳೆ ಬಸ್ ನಿಲ್ದಾಣ ಸಾಗರ ನಗರ ಹೃದಯ ಭಾಗದಲ್ಲಿದೆ ಇದು ಹಲವು ವರ್ಷಗಳ ಕಾಲ ಪ್ರಯಾಣಿಕರಿಗೆ ತಂಗುದಾಣವಾಗಿದ್ದು ಇಗಲು ಕೂಡಾ ಇಲ್ಲಿಯ ವ್ಯಾಪಾರ ವಹಿವಾಟು ಈಗಲೂ ಇದೆ ನಗರಸಭೆಯ ಅಧಿಕಾರಿಗಳನ್ನು ಈ ಕಟ್ಟಡ ಸರಿ ಪಡಿಸಲು ಕೇಳಿದರೆ ಅದನ್ನ ಡೆಮೋಲಿಸ್ ಮಾಡುವ ಮೂಲಕ ಅಲ್ಲಿ ಹೊಸದಾಗಿ ಕಟ್ಟಡ ಮಾಡುವ ಸಲುವಾಗಿ ಅದನ್ನ ಹಾಗೆ ಬಿಡಲಾಗಿದೆ.
ಎಂದು ಬೇಕಾಬಿಟ್ಟಿ ಹಾರಿಕೆ ಉತ್ತರ ಕೊಡುವ ಅಧಿಕಾರಿಗಳು ಇಲ್ಲಿಯ ಪವಿತ್ರ ಹೋಟೆಲ್ ಕಳೆದ 25 ವರ್ಷದಿಂದ ಇದ್ದು ಇನ್ನು 6 ವರ್ಷಗಳ ಕಾಲ ಟೆಂಡರ್ ಇದೆ ಇದರಲ್ಲಿ ಇನ್ನು ಹಲವು ಅಂಗಡಿಗಳು ಇದ್ದು ವ್ಯಾಪಾರಕ್ಕೆ ತೊಂದರೆ ಆಗುವುದಲ್ಲದೆ ಯಾರಿಗಾದರೂ ಎನಾದರು ತೊಂದರೆ ಆಗುತ್ತೆ ಅನ್ನೂ ಭಯದಲ್ಲಿ ವ್ಯಾಪಾರ ಮಾಡುವ ಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ಇದೇ ತರ ನೀರು ಬೀಳುತ್ತಿದ್ದರೆ ಅಲ್ಲಿ ವ್ಯಾಪಾರ ಹೇಗೆ ಎಂಬುದು ವ್ಯಾಪಾರಸ್ಥರ ಅಳಲು. ಸರ್ಕಾರದ ಕಟ್ಟಡ ಸಂರಕ್ಷಣೆ ಮಾಡುವಲ್ಲಿ ಅಧಿಕಾರಿಗಳ ಬೇಜವಬ್ದಾರಿ ತೋರಿಸುವ ಸಲುವಾಗಿಯೇ ಸಾಗರ ನಗರದಲ್ಲಿ ಹಲವು ಸರ್ಕಾರಿ ಕಟ್ಟಡಗಳು ಇಗ ಅವಶೇಷಗಳಾಗಿದೆ.ಈಗಲಾದರೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇದನ್ನು ಸರಿ ಪಡಿಸುವಲ್ಲಿ ಗಮನ ಹರಿಸಬೇಕಾಗಿದೆ.
ವರದಿ: ರಾಘವೇಂದ್ರ ತಾಳಗುಪ್ಪ