ನ್ಯೂಸ್ಶಿವಮೊಗ್ಗ

ಕನ್ನಡ ಸಂಸ್ಕೃತಿ ಬೆಳವಣಿಗೆಗೆ ಪರಿಷತ್ತಿನ ಕೊಡುಗೆ ಅಪಾರ: ಡಾ.ಅನ್ನಪೂರ್ಣ

ಕನ್ನಡ ಸಂಸ್ಕೃತಿ ಬೆಳವಣಿಗೆಗೆ ಪರಿಷತ್ತಿನ ಕೊಡುಗೆ ಅಪಾರ: ಡಾ.ಅನ್ನಪೂರ್ಣ

(SHIVAMOGA): ಸಾಗರ: ಕನ್ನಡ ಸಾಹಿತ್ಯ, ನೆಲ-ಜಲ ಸಂಸ್ಕೃತಿಯ ಬೆಳವಣಿಗೆಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾದದು ಎಂದು ಲೇಖಕಿ ಹಾಗೂ ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ ಹೇಳಿದರು.
ಅವರು ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವರು ಕರ್ನಾಟಕ ಜಾನಪದ ಪರಿಷತ್ತು ಇವರ ಸಹಯೋಗದಿಂದ ಆಯೋಜಿಸಿದ್ದ ಕಸಾಪ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿ ಮಾತನಾಡಿ. ಕನ್ನಡ ಸಾಹಿತ್ಯ ಪರಿಷತ್ತು ಇಷ್ಟೊಂದು ಸುದೀರ್ಘವಾಗಿ ನಡೆದು ಬಂದಿದೆ ಎಂದರೆ ಅದರ ಹಿಂದಿನ ಪರಿಶ್ರಮ ಸಾಕಷ್ಟಿದೆ. ಹಾಗೂ ಅದರ ಹಿಂದೆ ಅನೇಕರು ದುಡಿದಿದ್ದಾರೆ, ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತವಾಗಿಸುವಲ್ಲಿ ಪರಿಷತ್ತಿನ ಕಾರ್ಯ ಸಾಕಷ್ಟಿದೆ. ಅಂದು  ಕೇವಲ ಸಣ್ಣ ಕೊಠಡಿಯೊಂದರಲ್ಲಿ ಬೆರಳೆಣಿಕೆಯಷ್ಟು ಜನರಿಂದ ಆರಂಭವಾದ ಸಂಸ್ಥೆ ಇಂದು ಜನ ಸಾಮಾನ್ಯರ ಸಂಸ್ಥೆಯಾಗಿ ಬೆಳೆದಿದೆ. ಅಲ್ಲದೆ ಅನೇಕ ಸಾಹಿತಿ, ಕಲಾವಿದರನ್ನು ಬೆಳೆಸಿದೆ ನಾಡಿನ ನೆಲ-ಜಲ ಸಂಸ್ಕೃತಿಗಾಗಿ ಅಪಾರವಾದ ಕಾರ್ಯವನ್ನು ಮಾಡುತ್ತ ಬಂದಿದೆ. ಇಂದು ಪರಿಷತ್ತು ಜಗತ್ತಿನಾದ್ಯಂತ ಬೆಳೆಯಲು ಕಾರಣ ಅನೇಕರ ಫಲಶ್ರುತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಪರಿಷತ್ತು ಬೆಳೆದಂತೆಲ್ಲ ಜಾತಿಯ ಸಂಕೋಲೆಯೊಳಗೆ ಸಿಲುಕುತ್ತಿರುವುದು ಬೇಸರದ ಸಂಗತಿಯಾಗಿದೆ.ಪರಿಷತ್ತಿಗೆ ರಾಜಕೀಯ ಪ್ರವೇಶವಾಗುತ್ತಿರುವುದು ಪರಿಷತ್ತಿನ ಬೆಳವಣಿಗೆಗೆ ಮಾರಕವಾಗುತ್ತದೆ. ಪರಿಷತ್ತು ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಬೆಳೆಯಬೇಕಾಗಿದೆ. ಪರಿಷತ್ತಿನ ದ್ಯೆಯೋದ್ದೇಶಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ.

ಕನ್ನಡಕ್ಕೆ ಎಂದಿಗೂ ಜಾತಿ ಎನ್ನುವುದೇ ಇಲ್ಲ. ಕನ್ನಡವೊಂದೆ ಜಾತಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಅನೇಕರ ಕೊಡುಗೆ ಇದೆ. ಸಂಸ್ಥೆಗಾಗಿ ದುಡಿದವರನ್ನು ಎಂದಿಗೂ ಮರೆಯಬಾರದು. ರಾಜಾಶ್ರಯದಿಂದ ಆರಂಭವಾದ ಪರಿಷತ್ತು ಇಂದು ಜನಾಶ್ರಯದಿಂದಾಗಿ ಜನ ಸಾಮಾನ್ಯರ ಪರಿಷತ್ತು ಆಗುತ್ತಿದೆ. ಪರಿಷತ್ತು ಮತ್ತಷ್ಟು ಬೆಳೆಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆನಂದಪರ ಕಸಾಪ ಅಧ್ಯಕ್ಷ ಬಿ.ಡಿ.ರವಿಕುಮಾರ್, ಕಜಾಪ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ,ಪರಿಷತ್ತಿನ ಕಾರ್ಯದರ್ಶಿಗಳಾದ ಜಿ.ನಾಗೇಶ್, ನಾರಾಯಣ ಮೂರ್ತಿ ಕಾನಗೋಡು,ಕೋಶಾಧ್ಯಕ್ಷ ಲೋಕೇಶ್ ಕುಮಾರ್, ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಉಮೇಶ್ ಹಿರೇನೆಲ್ಲೂರು ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಜಾನಪದ ಪರಿಷತ್ತಿನ ಕಲಾತಂಡ ಪ್ರಾರ್ಥಿಸಿ ಎಸ್.ಬಸವರಾಜ್ ಸ್ವಾಗತಿಸಿ ನಾರಾಯಣ ಮೂರ್ತಿ ವಂದಿಸಿದರು,

ಗಮನ ಸೆಳೆದ ಗಾಯನ: ಇದೇ ಸಂದರ್ಭದಲ್ಲಿ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಜಾನಪದ ಪರಿಷತ್ತಿನ ಬಳಗದ ಕಲಿಕಾರ್ತಿಗಳು ಹಾಗೂ ಕಲಾ ತಂಡದ ಸದಸ್ಯರು ವಿವಿಧ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ಹಾಗೂ ಚುನಾವಣಾ ಮತದಾರರ ಜಾಗೃತಿ ಗೀತೆಯನ್ನು ಸಹ ಹಾಡಲಾಯಿತು. ನಾರಾಯಣಪ್ಪ ಕಾಗೋಡು ಸಂಗೀತ ನೀಡಿದರು ರಾಜು ಜನ್ನೆಹಕ್ಲು ತಬಲ ಸಾಥ್ ನೀಡಿದ್ದು ವಿಶೇಷವಾಗಿತ್ತು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code