ನ್ಯೂಸ್ಶಿವಮೊಗ್ಗ

ಪುಸ್ತಕ ಓದುವ ಅಭ್ಯಾಸದಿಂದ ತಿಳುವಳಿಕೆ ಮತ್ತು ಮನಸಿಗೆ ನೆಮ್ಮದಿ ಸಿಗುವುದು

ಪುಸ್ತಕ ಓದುವ ಅಭ್ಯಾಸದಿಂದ ತಿಳುವಳಿಕೆ ಮತ್ತು ಮನಸಿಗೆ ನೆಮ್ಮದಿ ಸಿಗುವುದು

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ವಲಯದ ಬೆಳಮಕ್ಕಿ ಕಾರ್ಯಕ್ಷೇತ್ರದ ಮಂಜುಷ ಜ್ಞಾನ ವಿಕಾಸ ಕೇಂದ್ರದಲ್ಲಿ ಪುಸ್ತಕದ ಓದು ವಿಮರ್ಶೆ ಎಂಬ ವಿನೋತನ ಕಾರ್ಯಕ್ರಮ ಮಾಡಲಾಯಿತು, ಪುಸ್ತಕ ಓದುವುದರಿಂದ ಆಗುವಂತಹ ಅನುಕೂಲಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಯಿತು.


ಪುಸ್ತಕ ಓದುವ ಅಭ್ಯಾಸದಿಂದ ತಿಳುವಳಿಕೆ ಮತ್ತು ಮನಸಿಗೆ ನೆಮ್ಮದಿ ಸಿಗುವುದರ ಜೊತೆಗೆ ಮತ್ತೊಬರ ಕಷ್ಟಕ್ಕೆ ನೇರವಾಗುವಂತಹ ಯೋಚನಾ ಜೀವಿ ಆಗಿ ಬದುಕಬಹುದು ಎನ್ನುವುದರ ಬಗ್ಗೆ ಜ್ಞಾನವಿಕಾಸ ಸಮನ್ವಯ ಅಧಿಕಾರಿಯವರು ತಿಳಿಸಿದರು. ಕಾರ್ಯಕ್ರಮದಲ್ಲಿ ತುಂಬಾ ಉತ್ತಮ ವಾಗಿ ಪುಸ್ತಕ ಓದಿದವರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು ಮತ್ತು ಒಕ್ಕೂಟದ ಅಧ್ಯಕ್ಷರಾದ ಪುಷ್ಪ ಮತ್ತು ಸೇವಾಪ್ರತಿನಿಧಿ ವಂದನ ಮೂರ್ತಿ ಯವರು ಭಾಗವಹಿಸಿದ್ದರು. ನಿರೂಪಣೆಯನ್ನು ಉಷಾ ಅವರು ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code