ತಹಶೀಲ್ದಾರರಿಗೆ ಧಿಕ್ಕಾರ ಕೂಗುತ್ತಾ ಧಿಡೀರನೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ ಸಾರ್ವಜನಿಕರು.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹೇರೂರು ಗ್ರಾಮ ಪಂಚಾಯಿತಿ ಮುಂಭಾಗ ದಿಢೀರನೆ ಗ್ರಾಮ ಪಂಚಾಯಿತಿಯಿಂದ ಹೊರಬಂದ ಹೇರೂರು ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ದಿನಾಂಕ 13.09.2024 ರಂದು ಬೆಳಿಗ್ಗೆ 10.30 ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀ ಅಶ್ವಥ್ ಹೆಚ್ ಸಿ ಇವರ ನೇತೃತ್ವದಲ್ಲಿ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಒತ್ತುವರಿಗೇ ಮತ್ತು ಕಸ್ತೂರಿರಂಗನ್ ವಿಚಾರವಾಗಿ ಸಾರ್ವಜನಿಕರೊಂದಿಗೆ ಮುಕ್ತ ಸಮಾಲೋಚನೆಗಾಗಿ ವಿಶೇಷ ಗ್ರಾಮ ಸಭೆಯನ್ನು ಏರ್ಪಡಿಸಲಾಗಿತ್ತು .
ಅರಣ್ಯ ಇಲಾಖೆ, ಕಂದಾಯ ಇಲಾಖೆ ಇವರಿಗೆಲ್ಲರಿಗೂ ಮನವಿ ಮಾಡಿಕೊಂಡಿದ್ದು ಇವರು ಯಾರು ಬರದ ಕಾರಣ ಸಭೆಗೆ ಬಂದಿದ್ದ ಸಾರ್ವಜನಿಕರು ಸಂಕೇತಿಕವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಹಾಗೂ ಗ್ರಾಮಸ್ಥರು ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯ ಮನವಿಯನ್ನು ತಿರಸ್ಕರಿಸಿದ ತಹಶೀಲ್ದಾರರಿಗೆ ಧಿಕ್ಕಾರ ಕೂಗುತ್ತಾ ಕೆಲಕಾಲ ರಸ್ತೆ ತಡೆಯಲಾಯಿತು ವಾಹನ ಸವಾರರು ಕೆಲವೊತ್ತು ನಿಂತಲ್ಲೇ ನಿಂತಿದ್ದರು.
ಬಾಳೆಹೊನ್ನೂರು ಪೊಲೀಸ್ ಠಾಣೆಯ ಅಧಿಕಾರಿ ಪಿಎಸ್ಐ ರವೀಶ್ ರವರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರಿಗೆ ಮನವೊಲಿಸಿ, ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವೊಲಿಸಲಾಯಿತು. ಆದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಯಿತು.