ಕೋಲಾರನ್ಯೂಸ್

ಶಿಕ್ಷಣ ಹಕ್ಕು ಕಡ್ಡಾಯವಾಗಿ ಜಾರಿ ಯಾಗುವುದರೊಂದಿಗೆ ಕನ್ನಡ ಶಾಲೆಗಳ ಉಳಿಸುವ ಕಾರ್ಯ ಆಗಬೇಕಾಗಿದೆ.

ಶಿಕ್ಷಣ ಹಕ್ಕು ಕಡ್ಡಾಯವಾಗಿ ಜಾರಿ ಯಾಗುವುದರೊಂದಿಗೆ ಕನ್ನಡ ಶಾಲೆಗಳ ಉಳಿಸುವ ಕಾರ್ಯ ಆಗಬೇಕಾಗಿದೆ.

(KOLARA): ಬಂಗಾರಪೇಟೆ : ಶಿಕ್ಷಣ ಹಕ್ಕು ಕಡ್ಡಾಯವಾಗಿ ಜಾರಿ ಯಾಗುವುದರೊಂದಿಗೆ ಕನ್ನಡ ಶಾಲೆಗಳ ಉಳಿಸುವ ಕಾರ್ಯ ಆಗಬೇಕಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಅಶ್ವಥ್ ಹೇಳಿದರು.

ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯ ಅಂಗವಾಗಿ ಪಟ್ಟಣದ ಕುವೆಂಪು ವೃತ್ತದ ರಾಷ್ಟçಕವಿ ಕುವೆಂಪುರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಾ,ಕುವೆಂಪುರವರು  ಕನ್ನಡ ನಾಡು ನುಡಿ ಜಲ ಉಳಿಸುವುದರೊಂದಿಗೆ ವಿಶ್ವಮಾನವ ಸಂದೇಶವನ್ನು ಸಾರಿದ್ದಾರೆ. ಅವರ ಸಾಹಿತ್ಯ ಸುಧೆ ಸಾವಿರಾರು ವರ್ಷಗಳ ಕಾಲ ಕನ್ನಡಿಗರಿಗೆ ಸ್ಪೂರ್ತಿಯ ಸೆಲೆಯಾಗಿದೆ.ಪ್ರಸ್ತುತ ಕರ್ನಾಟಕದಲ್ಲಿ ಹಂತ ಹಂತವಾಗಿ ಕನ್ನಡ ಶಾಲೆಗಳು ಮುಚ್ಚುವಂತಹ ಸಂಖ್ಯೆ ಹೆಚ್ಚಳವಾಗುತ್ತಿರುವುದು ಬಹಳ ಆಘಾತ ತಂದಿದೆ ಎಂದರು.

2012-13ರಲ್ಲಿ 44,911 ಕನ್ನಡ ಶಾಲೆಗಳು ಇದ್ದವು ಪ್ರಸ್ತುತ 41,911 ಶಾಲೆಗಳು ಇವೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿರುವುದು ಇದಕ್ಕೆ ಹಲವಾರು ಕಾರಣಗಳಿದ್ದು ಒಂದೆಡೆ ಶಿಕ್ಷಕರ ಕೊರತೆ ಸುಮಾರು ರಾಜ್ಯದಲ್ಲಿ 44,000 ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ, ಮೂಲಸೌಕರ್ಯಗಳಾದ ಗ್ರಂಥಾಲಯ, ಶೌಚಾಲಯ, ಸುಸಜ್ಜಿತ ಕಟ್ಟಡಗಳ ಕೊರತೆಯಿಂದ ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಕಾಣುತ್ತಿದೆ ಎಂದು ಹೇಳಿದರು.

ಘನ ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದರೆ ತಪ್ಪಾಗಲಾರದು.ಸರಾಸರಿ ಪ್ರತಿ ವರ್ಷ 250 ಶಾಲೆಗಳು ಮುಚ್ಚುತ್ತಿವೆ. ಕನ್ನಡ ಶಾಲೆಗಳ ಸಬಲೀಕರಣಕ್ಕೆ ಸರ್ಕಾರಗಳು ಮೊದಲ ಆದ್ಯತೆಯನ್ನು ನೀಡಬೇಕಾಗಿ ಈ ಮೂಲಕ ಒತ್ತಾಯಿಸುತ್ತಿದ್ದೇನೆ. ಕುವೆಂಪು ಕಂಡಂತಹ ಕನ್ನಡದ ಚಿಂತನೆ ಉಳಿಸುವ ಬಾಧ್ಯತೆ ನಮ್ಮದಾಗಿದೆ ಎಂದರು.

ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ  ಎಲ್.ರಾಜಪ್ಪ ಮಾತನಾಡಿ ಆಡುಮಟ್ಟದ ಸೊಪ್ಪಿಲ್ಲ ಕುವೆಂಪುರವರು ಏರದ ಮಲೆ ಇಲ್ಲ ಎಂಬಂತೆ ಕನ್ನಡದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕುವೆಂಪುರವರು ತಮ್ಮ ಸಾಹಿತ್ಯದ ಧಾರೆ ಎರೆದಿದ್ದಾರೆ ಎಂದರೆ ತಪ್ಪಾಗಲಾರದು. ಮಲೆನಾಡಿನ ಸೌಂದರ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದಂತವರು ಕುವೆಂಪುರವರು. 1904ರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಜನಿಸಿದಂತಹ ಕುವೆಂಪುರವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದೊಂದಿಗೆ ಒಡನಾಟವನ್ನು ಬೆಳೆಸಿಕೊಳ್ಳುವುದರೊಂದಿಗೆ ಉತ್ತಮ ಗುರುಗಳ ಮಾರ್ಗದರ್ಶನದಿಂದಾಗಿ ಸಾಹಿತ್ಯದ ನಾಟಕ, ಕಾದಂಬರಿ, ಕವನ, ವಿಮರ್ಶೆ ಹೀಗೆ ಎಲ್ಲ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯನ್ನು ಚಾಪನ್ನು ಮೂಡಿಸುವುದರೊಂದಿಗೆ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ರಾಮಕೃಷ್ಣಪ್ಪ, ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಮಧುಸೂಧನ್, ಶಿವಕುಮಾರ್ ಹಾಗೂ ಅನಿಕೇತನ ಬಳಗದ ಅಧ್ಯಕ್ಷ ರಾಮಪ್ರಸಾದ್, ಮೈ.ಸತೀಶ್ ಕುಮಾರ್, ಬಡ್ತಿ ಮುಖ್ಯ ಶಿಕ್ಷಕರ ಜಿಲ್ಲಾ ಸಂಘದ ಉಪಾಧ್ಯಕ್ಷ ಮುನಿ ನಾರಾಯಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ಯಾಮಮೂರ್ತಿ,ಉಪಾಧ್ಯಕ್ಷ ನಾರಾಯಣಸ್ವಾಮಿ,ನಾಗರಾಜ್, ಸಮನ್ವಯ ಸಮಿತಿಯ ನಾಗರಾಜ್, ಕ.ರ.ವೇ. ರಾಮ್ ಪ್ರಸಾದ್, ಹಿರಿಯ ವಕೀಲರಾದ ಜಯಪ್ರಕಾಶ್, ಅಕ್ಕನ ಬಳಗದ  ಕುಮುದಿನಿ . ಸಾಹಿತಿ ರಘುಪತಿ, ಗಂಗಾಧರ ಗೋಟ್ಯಾಳ್, ವಿಜಯಕುಮಾರ್, ಶಿಕ್ಷಕರಾದ ಗಜೇಂದ್ರ, ಸುರೇಶ್, ಲಕ್ಷ್ಮಿಕಾಂತ್, ಆನಂದ, ವಿಜಯಕುಮಾರ್, ಗರ‍್ರಪ್ಪ ಮತ್ತಿತರರು ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code