ನ್ಯೂಸ್ಶಿವಮೊಗ್ಗ

ರಾಷ್ಟ್ರದ ಅಭಿವೃದ್ಧಿಗೆ ಕಾರ್ಮಿಕರ ಪಾತ್ರ ಮಹತ್ತರ, ದೇಶದ ಅಭಿವೃದ್ಧಿಗೆ ಕಾರ್ಮಿಕರು ಭದ್ರಬುನಾದಿ – ಡಿ.ಎಸ್. ಶಂಕರ್‌ಶೇಟ್

ರಾಷ್ಟ್ರದ ಅಭಿವೃದ್ಧಿಗೆ ಕಾರ್ಮಿಕರ ಪಾತ್ರ ಮಹತ್ತರ, ದೇಶದ ಅಭಿವೃದ್ಧಿಗೆ ಕಾರ್ಮಿಕರು ಭದ್ರಬುನಾದಿ – ಡಿ.ಎಸ್. ಶಂಕರ್‌ಶೇಟ್

(SHIVAMOGA): ಸೊರಬ: ರಾಷ್ಟ್ರದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ತರವಾಗಿದ್ದು, ಕಾರ್ಮಿಕರು ಮತ್ತು ಮಾಲೀಕರು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಸಮಾಜ ಸೇವಕ ಡಿ.ಎಸ್ ಶಂಕರ್ ಶೇಟ್ ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆ ರಾಜೀವ್‌ನಗರದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಓಂ ಪಿಕಲ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮತ್ತು ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರ ಪರಿಶ್ರಮದಿಂದಲೇ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಪ್ರತಿಯೊಂದು ದೇಶದ ಆರ್ಥಿಕತೆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ರೀತಿಯ ಅಭಿವೃದ್ಧಿಯನ್ನು ನಾವು ಕಾಣಬೇಕಾದಲ್ಲಿ ಅದು ಕಾರ್ಮಿಕರು ನಿರ್ವಹಿಸುವ ಕಾರ್ಯದಲ್ಲಿರುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಕಾರ್ಮಿಕ ಸಮೂಹಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಲಾಗುತ್ತಿದೆ.ಕಾರ್ಮಿಕರು ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿದಾಗ ಮಾತ್ರ ಮಾಲೀಕರು ಉನ್ನತ ಸ್ಥಾನಕ್ಕೆ ಏರಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಪ್ರಾರಂಭವಾದ ನೆನಪಿಗಾಗಿ ಪ್ರತಿ ವರ್ಷ ಮೇ 1 ರಂದು ಜಗತ್ತಿನಾದ್ಯಂತ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಕಾರ್ಮಿಕರೆಲ್ಲರೂ ಒಂದಾಗಿ ಎಂಬುದು ವಿಶ್ವ ಕಾರ್ಮಿಕ ದಿನಾಚರಣೆಯ ಧ್ಯೇಯ ವಾಕ್ಯವಾಗಿದೆ. ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮಾಲೀಕರು ಸ್ಪಂದಿಸಬೇಕು. ಮಾಲೀಕರು ಕಾರ್ಮಿಕರ ಮೇಲೆ ನಂಬಿಕೆ ವಿಶ್ವಾಸ ಹೊಂದಿರುತ್ತಾರೆ. ಅವರು ನಡುವಿನ ಸಂಬಂಧ ವಿಶ್ವಾಸದಿಂದ ಕೂಡಿರಬೇಕು ಎಂದರು.

ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೇಶವಮೂರ್ತಿ ಪೇಟಕರ್ ಮಾತನಾಡಿ, ಸಮಾಜದ ನಾನಾ ಸ್ತರಗಳಲ್ಲಿ ಹಂಚಿ ಹೋಗಿರುವ ಕಾರ್ಮಿಕರು ಸಂಘಟಿತರಾದಲ್ಲಿ ತಮ್ಮ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಶ್ರಮಜೀವಿ ವರ್ಗಕ್ಕೆ ಸೇರಿರುವ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಅಂಥ ಸೌಲಭ್ಯಗಳ ಅರಿವನ್ನು ಪ್ರತಿಯೊಬ್ಬ ಕಾರ್ಮಿಕರು ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಓಂ ಪಿಕಲ್ಸ್ ಮಾಲೀಕ ಗಣೇಶ್ ಮಾತನಾಡಿ, ತಾಲೂಕಿನಲ್ಲಿ ಅತೀ ಹೆಚ್ಚು ಕಾರ್ಮಿಕರಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಮಿಕರಿಗೆ ಸರ್ಕಾರದಿಂದ ಇರುವ ಸವಲತ್ತುಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಿ ಸೌಲಭ್ಯಗಳನ್ನು ಕೊಡಿಸಿಕೊಡಲು ಮುಂದಾಗಬೇಕು. ಸಂಘಟನೆಯಿಂದ ಮಾತ್ರ ಸವಲತ್ತುಗಳನ್ನು ಪಡೆಯಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕಾರ್ಮಿಕರೆಲ್ಲರೂ ಸಂಘಟಿತರಾಗಬೇಕು ಎಂದರು.


ರೇಷ್ಮಾ ಡಿಸೋಜ ಮಾತನಾಡಿ, ಕಾರ್ಮಿಕರು ಸದಾಕಾಲ ಯಾವುದೇ ರೀತಿಯ ವೈಯುಕ್ತಿಕ ಬದುಕನ್ನು ಲೆಕ್ಕಿಸದೇ ತಮ್ಮ ಕಾರ್ಯದಲ್ಲಿ ನಿರತರಾಗುತ್ತಾರೆ. ಇಂದು ಪುರುಷ, ಮಹಿಳೆ ಎನ್ನದೇ ಎಲ್ಲರೂ

ಲಕ್ಷ್ಮಣ್ ಸಾಗರ್, ಗಣಪತಿ ಓಟೂರು, ಶ್ರೀಧರ್ ಮೂರ್ತಿ ನಡಹಳ್ಳಿ, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಮಂಜುನಾಥ್, ರಾಘವೇಂದ್ರ.ಎಸ್, ಮತ್ತಿತರರು ಇದ್ದರು. ಕಾರ್ಮಿಕರಾದ ರೇಣುಕಾ ಪುಷ್ಪಾವತಿ, ಕಲಾವತಿ, ಗುಪ್ತ, ವಿಜಯ್ ಮಂಜು ಅವರನ್ನು ಸನ್ಮಾನಿಸಲಾಯಿತು.


ವರದಿ: ಸಂದೀಪ ಯು.ಎಲ್., ವೆಸ್ಟರ್ನ್ ಘಾಟ್ ನ್ಯೂಸ್, ಸೊರಬ

Leave a Reply

Your email address will not be published. Required fields are marked *

Scan the code