ಮೊದಲೆ ಹವಾಮಾನ ವೈಪರೀತ್ಯದಿಂದ ಕಂಗೆಟ್ಟ ರೈತರಿಗೆ ಯೋಜನೆಗಳು ಪದೆ ಪದೆ ನಿದ್ದೆಗೇಡಿಸುತ್ತಿದೆ.
(CHIKKAMAGALURU): ಈ ದೇಶಕ್ಕೆ ಅನ್ನ ಕೊಟ್ಟು ಹಸಿರಿನ ಜೊತೆಗೆ ಒಂದು ನಂಟನ್ನು ಬೆಳಸಿಕೊಂಡು ಬಂದಿರುವ ರೈತರಿಗೆ ಅದು ಮಲೆನಾಡಿನ ರೈತರಿಗೆ ಬಂದಿರುವ ಸಂಕಷ್ಟದ ಬಗ್ಗೆ ಬೇಸರವಾಗುತ್ತಿದೆ.
ಮಲೆನಾಡಿನ ಮೇಲೆ ಹೇರಲಾಗಿರುವ ಯೋಜನೆಗಳು ಸಮಾರ್ಪಕವೆ ಇದು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಜನವಸತಿ ಕೃಷಿ ಚಟುವಟಿಕೆಗಳ ಮಾಹಿತಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಉಂಟು ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮಲೆನಾಡಿನ ರೈತರ ಮಕ್ಕಳು ಕೃಷಿಕಡೆ ಮುಖ ಮಾಡುವುದು ಬಿಟ್ಟು ಪಟ್ಟಣ ಸೇರಿಕೊಳ್ಳುವುದು ಅನಿವಾರ್ಯ ವಾಗುತ್ತದೆ. ಮೊದಲೆ ಹವಾಮಾನ ವೈಪರೀತ್ಯದಿಂದ ಕಂಗೆಟ್ಟ ರೈತರಿಗೆ ಈ ಯೋಜನೆಗಳು ಪದೆ ಪದೆ ನಿದ್ದೆಗೆಡುಸುತ್ತಿದೆ.
ಅಲ್ವ ಸ್ವಲ್ಪ ಜಾಗದಲ್ಲಿ ಕೃಷಿ ಬದುಕನ್ನು ಕಟ್ಟಿಕೊಂಡಿರುವ ರೈತರನ್ನು ಒಕ್ಕಲಿಬ್ಬಿಸಿ ಅವನ ಜೀವನವನ್ನೆ ಬೀದಿಪಾಲು ಮಾಡುವ ಅಸರ್ಮಪಕ ಯೋಜನೆಗಳು ಈ ಕೂಡಲೆ ಕೈ ಬಿಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಬದುಕು ಕಳೆದುಕೊಂಡ ರೈತರು ಬೇರೆ ಬೇರೆ ಯೋಚನೆಗಳ ಕಡೆ ತೆರಳುವ ಸಾಧ್ಯತೆ ಇದೆ.
ಮಲೆನಾಡಿನ ಭಾಗದಿಂದ ಆಯ್ಕೆಆದ ಸಂಸದರು. ಕ್ಷೇತ್ರದ ದಿಂದ ಆಯ್ಕೆ ಆದ ಶಾಸಕರು ಹಾಗೂ ಸಂಬಂಧಿಸಿದ ಇಲಾಖೆಯವರು ಕೂತು ಯೋಜನೆಗಳು ಪರಿಶೀಲನೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತ ಸಂಘಟನೆಯವರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಅಷ್ಟೇ ಅಲ್ಲ ರೈತರಿಗೆ ಬಂದಿರುವ ಬಹಳ ದೊಡ್ಡ ಕಂಟಕವನ್ನು ಈ ಕೂಡಲೆ ಬಗೆಹರಿಸಿ.
ಕಾರ್ತಿಕ್ ಕಾರ್ ಗದ್ದೆ.
ನಾಗರಿಕ ರೈತ ಹಿತ ರಕ್ಷಣೆ ವೇದಿಕೆ ಶೃಂಗೇರಿ ಕ್ಷೇತ್ರ.