ಜಿಲ್ಲೆನ್ಯೂಸ್

ಕಾರ್ತಿಕ್ ಸಾಹುಕಾರ್ ರವರ ಕನಸಿನ ಕೂಸಾದ ತಾಲ್ಲೂಕು ಯುವಜನ ಸಂಘದ ಸಮಾಜ ಸೇವಾ ಕಾರ್ಯ ಶ್ಲಾಘನೀಯ

ಕಾರ್ತಿಕ್ ಸಾಹುಕಾರ್ ರವರ ಕನಸಿನ ಕೂಸಾದ ತಾಲ್ಲೂಕು ಯುವಜನ ಸಂಘದ ಸಮಾಜ ಸೇವಾ ಕಾರ್ಯ ಶ್ಲಾಘನೀಯ

(SHIVAMOGA): ಸೊರಬ: ತಾಲ್ಲೂಕು ಯುವಜನ ಸಂಘ 30 ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತನ್ನ ತೊಡಗಿಸಿಕೊಂಡು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದು ನಟ ನಾಗೇಶ್ವರ ವಿಜಾಪುರ್ ಹೇಳಿದರು.

ತಾಲೂಕಿನ ಆನವಟ್ಟಿ-ಕೋಟಿಪುರದ ಎವರಾನ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಆವರಣದಲ್ಲಿ ತಾಲ್ಲೂಕು ಯುವಜನ ಸಂಘದ 30ನೇ ವಷÀðದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೂವತ್ತು ವರ್ಷಗಳ ಕಾಲ ಚಿಕ್ಕ ಸಾಧನೆ ಏನಲ್ಲ. ಹಾಗೇ ಈ ವರ್ಷದ ಪರಿಕಲ್ಪನೆಯು ಸಸಿಗಳ ವಿತರಣೆಯಾಗಿದ್ದು ಅರಣ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಬೃಹದಾಕಾರವಾಗಿ ಹೆಜ್ಜೆ ನೀಡಲು ತೀರ್ಮಾನಿಸಿದ್ದಾರೆ. ಇದು ಅತ್ಯಂತ ಉತ್ತಮವಾದ ಬೆಳವಣಿಗೆ. ರೋಟರಿ ಸಿಟಿ ಸೆಂಟರ್ ಬೆಂಗಳೂರಿನಿoದಲೂ ಸಹ ತಾಲ್ಲೂಕ್ ಯುವಜನ ಸಂಘದ ಹಲವಾರು ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡಿದ್ದೇವೆ. ಮುಂದೆಯೂ ಸಹ ಇದೇ ರೀತಿಯ ಸಹಕಾರವನ್ನು ನೀಡಲಾಗುವುದು ಎಂಧರು.

ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರವಾಹಿಯ ನಾಯಕ ನಟ ತಾಂಡವ್ ಸುದರ್ಶನ್ ಮಾತನಾಡಿ ಕರ್ನಾಟಕದ ಹಲವಾರು ಭಾಗಗಳಲ್ಲಿ ಉತ್ತಮವಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಿರುವ ತಾಲ್ಲೂಕು ಯುವಜನ ಸಂಘ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಕಾರ್ತಿಕ್ ಸಾಹುಕಾರ್ ಮಾತನಾಡಿ, ಕೇವಲ ಎಂಟು ಜನರಿಂದ ಪ್ರಾರಂಭವಾದ ಸಂಘ ಇಂದು ಸಾವಿರಾರು ಸದಸ್ಯರನ್ನು ಹೊಂದಿದ್ದು, ಬಹಳಷ್ಟು ಹಳ್ಳಿಗಳಲ್ಲಿ ಶಾಖೆಯನ್ನು ಹೊಂದಿದೆ. ಪ್ರತಿಯೊಬ್ಬ ಸದಸ್ಯರು ಸಹ ತಮ್ಮನ್ನು ತಾವು ತೊಡಗಿಸಿಕೊಂಡು ಯುವಜನ ಸಂಘದ ಬೆಳವಣಿಗೆ ಕಾರಣಿಕರ್ತರಾಗಿದ್ದಾರೆ. ಪ್ರಾರಂಭದಲ್ಲಿ ಹಲವಾರು ಅಡೆತಡೆಗಳು ಬಂದರೂ ಸಹ ಅದನ್ನೆಲ್ಲ ಎದುರಿಸಿ ಇಂದು ಒಂದು ಶಿಲೆಯಾಗಿ ನಿಂತಿದೆ. ಯುವಜನ ಸಂಘ ಸಮುದ್ರದ ರೀತಿಯಲ್ಲಿ ನಿರಂತರವಾಗಿ ಹರಿಯುತ್ತಿದೆ. ಯುವಜನ ಸಂಘದಿ0ದ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದು ಅದರಲ್ಲಿ ಮುಖ್ಯವಾಗಿ ಕಂಪ್ಯೂಟರ್ ವಿತರಣೆ, ಆಂಬುಲೆನ್ಸ್ ಸರ್ವಿಸ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ, ಉಚಿತ ಸಸ್ಯಗಳ ವಿತರಣೆ, ನೋಟ್ ಪುಸ್ತಕಗಳ ವಿತರಣೆ, ಕುಡಿಯುವ ನೀರಿಗೆ ಅಳವಡಿಕೆ, ಟೈಲರಿಂಗ್ ಮಿಷನ್‌ಗಳ ಉಚಿತ ವಿತರಣೆ, ತೋಟಗಾರಿಕಾ ಸಸ್ಯಗಳ ವಿತರಣೆ ಈ ರೀತಿ ಹಲವಾರು ಕಾರ್ಯಕ್ರಮಗಳನ್ನು ಯುವಜನ ಸಂಘ ಮಾಡಿಕೊಂಡು ಬಂದಿದೆ. ಮುಂದೆಯೂ ಸಹ ಇದೇ ರೀತಿ ಮುಂದುವರಿಯುತ್ತದೆ ಎಂದರು. ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಎಚ್.ಸಿ ಮಾತನಾಡಿ ಕಾರ್ತಿಕ್ ಸಾಹುಕಾರ್ ಅವರ ಕನಸಿನ ಕೂಸಾದ ಈ ಸಂಘವನ್ನು ನಾವೆಲ್ಲರೂ ಸೇರಿ ಬೆಳೆಸಿಕೊಂಡು ಬರುತ್ತಿದ್ದೇವೆ. ಸಾರ್ವಜನಿಕರ ಸಹಕಾರ ಕೂಡ ತಮಗೆಲ್ಲರಿಗೂ ಪ್ರತಿ ವರ್ಷವು ದೊರಕುತ್ತಿದೆ. ಪ್ರತಿ ವರ್ಷವು ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂಬುದು ನಮ್ಮ ಹೆಮ್ಮೆ ಎಂದರು. ಬಸವನಗೌಡ್ರು ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಿತ್ರನಟಿ ಸಂಗೀತ ಭಟ್, ತಾಪಂ ಇಒ ಪ್ರದೀಪ್ ಕುಮಾರ್, ಮಲ್ಲಿಕಾರ್ಜುನ್ ದ್ವಾರಳ್ಳಿ, ಜನಪದ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಖಲಂದರಸಾಬ್, ರುದ್ರಗೌಡ ಸಿ.ಪಾಟೀಲ್, ಸತೀಶ್ ಹೊಸಳ್ಳಿ, ಅಜಿತ್ ಕುಮಾರ್ ಟಿ.ಪಿ, ಶಂಕರ್ ಶೇಟ್, ಸಿ.ಪಿ. ಈರೇಶ್‌ಗೌಡ, ನಾಗರಾಜ್ ಗುತ್ತಿ, ರವಿ, ಶಶಿಧರ್ ಸಕ್ರಿ, ಸ್ನೇಹ ಪ್ರಭ, ಚರಿತ ಕಾರ್ತಿಕ್, ಸುಷ್ಮ ವಿಜಾಪುರ್, ಉಮೇಶ್ ಉಡುಗಣಿ, ರಾಮಚಂದ್ರ, ಶಿವಪ್ಪ ವಕೀಲ ದ್ವಾರಹಳ್ಳಿ, ಮಂಜುನಾಥ್, ರಾಮನಾಯಕ್, ಪ್ರಕಾಶ್ ಕೋಟಿಪುರ, ಕೇಶವ ನಾಯಕ್, ರಮೇಶ್ ಆಗಸನಹಳ್ಳಿ, ಮಹಾಂತೇಶ್ ಕಳ್ಳಿಕೋನಿ, ಸಲೀಂ ಭಾಷಾ ಮತ್ತಿತರರಿದ್ದರು. ಜ್ಯೂನಿಯರ್ ಅಂಬರೀಶ್ ಹಾಗೂ ಜ್ಯೂನಿಯರ್ ವಿಷ್ನುವರ್ಧನ್ ಅವರಿಂದ ಮನೋರಂಜನ ಕಾರ್ಯಕ್ರಮ ಎವರಾನ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಮಕ್ಕಳಿಂದ ನೃತ್ಯ ಪ್ರದರ್ಶನ, ಕೋಟಿಪುರ ಶಾಲಾ ಮಕ್ಕಳಿಂದ, ಕಲಾಕಾರ್ ನೃತ್ಯ ತಂಡದಿ0ದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಹುರಳಿಕೊಪ್ಪ ನಿರೂಪಿಸಿ, ಶಿವಕುಮಾರ್ ಎನ್.ಜಿ ಸ್ವಾಗತಿಸಿದರು.

ವರದಿ :ಸಂದೀಪ ಯು.ಎಲ್ ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ

Leave a Reply

Your email address will not be published. Required fields are marked *

Scan the code