ನ್ಯೂಸ್ಶಿವಮೊಗ್ಗ

ಸಮಾಜ ಸೇವೆ ಮಾಡುವ ಮನೋಭಾವ ತಮಗೆ ರೂಢಿಗತವಾಗಿ ಬಂದಿದೆ – ರಾಜು ಹಿರಿಯಾವಲಿ.

ಸಮಾಜ ಸೇವೆ ಮಾಡುವ ಮನೋಭಾವ ತಮಗೆ ರೂಢಿಗತವಾಗಿ ಬಂದಿದೆ – ರಾಜು ಹಿರಿಯಾವಲಿ.

(SHIVAMOGA): ಸೊರಬ: ಸಮಾಜ ಸೇವೆ ಮಾಡುವ ಮನೋಭಾವ ತಮಗೆ ರೂಢಿಗತವಾಗಿ ಬಂದಿದ್ದು, ಅದರಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಹಂತ-ಹ0ತವಾಗಿ 50 ವಾಟರ್ ಫಿಲ್ಟರ್ ನೀಡುವ ಉದ್ದೇಶ ಹೊಂದಿರುವುದಾಗಿ ಗಣಾಧೀಶ್ವರ ಡ್ರೈವಿಂಗ್ ಸ್ಕೂಲ್ ವ್ಯವಸ್ಥಾಪಕ ಹಾಗೂ ಮಲೆನಾಡು ಸಿರಿ ಬಳಗದ ರಾಜು ಹಿರಿಯಾವಲಿ ತಿಳಿಸಿದರು.

ತಾಲೂಕಿನ ಜೇಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಹಾಗೂ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದು ಡೆಂಘಿ, ಮಲೇರಿಯಾ, ಕಾಲರದಂತಹ ಕಾಯಿಲೆಗಳು ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಅವರ ಆರೋಗ್ಯದ ದೃಷ್ಠಿಯಿಂದ ವಾಟರ್ ಫಿಲ್ಟರ್ ನೀಡುವ ಗುರಿ ಹೊಂದಲಾಗಿದೆ. ಶಾಲಾ ಮಕ್ಕಳ ಆರೋಗ್ಯ ದೃಷ್ಠಿಯಿಂದ ಶಾಲಾ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಹೊಣೆ ಮಾತ್ರವಲ್ಲದೇ ಆಯಾ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಗ್ರಾಮದ ಸಂಘ-ಸAಸ್ಥೆಗಳ ಜವಾಬ್ದಾರಿಯು ಆಗಿದೆ. ಆಕಸ್ಮಿಕ ಘಟನೆಗಳಿಗೆ ತುರ್ತು ಸೇವೆ ಸಲ್ಲಿಸುವ ಮನೋಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ಉತ್ತಮ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನು ಶಿಕ್ಷಕರು ವಹಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಶಿಕ್ಷಕ ಬಸವರಾಜ ಬಿ. ಮೂಡೇರ್ ಮಾತನಾಡಿ, ಮಕ್ಕಳು ಶುಚಿಯಾಗಿದ್ದು, ಬಿಸಿ ಆಹಾರವನ್ನು ಉಪಯೋಗಿಸಬೇಕು. ಶಾಲಾ ಮಕ್ಕಳಿಗೆ ನೀರು ಕುಡಿಯಲು ಫಿಲ್ಟರ್ ಕೊಡುಗೆಯಾಗಿ ನೀಡುತ್ತಿರುವ ರಾಜು ಹಿರಿಯಾವಲಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಹಿರಿಯ ಪತ್ರಕರ್ತ ಯು.ಎನ್.ಲಕ್ಷ್ಮೀಕಾಂತ ಮಾತನಾಡಿ, ಕಳೆದ ಒಂದು ದಶಕದಿಂದ ರಾಜು ಹಿರಿಯಾವಲಿ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕಳೆದ 2 ವರ್ಷಗಳಿಂದ ತಮ್ಮದೇ ಸೇವಾ ಸಂಸ್ಥೆ ಕಟ್ಟಿಕೊಂಡು ತಮ್ಮ ದುಡಿಮೆಯ ಆದಾಯದ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕರು ದಾನಿಗಳು ನೀಡಿದಂತಹ ಪರಿಕರಗಳನ್ನು ವ್ಯವಸ್ಥಿತವಾಗಿಟ್ಟುಕೊಂಡು ಶಾಲಾ ಮಕ್ಕಳಿಗೆ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಗಣಪತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಗೋಪಾಲಪ್ಪ, ಮುಖ್ಯಶಿಕ್ಷಕ ಸುರೇಶ್ ಕೆ.ಆರ್, ಮಲೆನಾಡು ಸಿರಿ ಬಳಗದ ನಿರ್ದೇಶಕ ಬಕ್ಕೇಶ್.ಬಿ, ಅಂಗವಾಡಿ ಕಾರ್ಯಕರ್ತೆ ಸುಧಾ ಮತ್ತಿತರರಿದ್ದರು.


ವರದಿ: ಸಂದೀಪ ಯು.ಎಲ್ ಸೊರಬ

Leave a Reply

Your email address will not be published. Required fields are marked *

Scan the code