ಜಿಲ್ಲೆನ್ಯೂಸ್

ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ.

ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ.

(KOLARA): ಬಂಗಾರಪೇಟೆ:ಸಂವಿಧಾನವು ಸಮಾನತೆ ಭ್ರಾತೃತ್ವ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೇ ಆದ ಪಾತ್ರವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಶಿವಾರೆಡ್ಡಿ ಹೇಳಿದರು.

ತಾಲೂಕಿನ ಬಲಮಂದೆ,ತೊಪ್ಪನಹಳ್ಳಿ ಹಾಗೂ ದೋಣಿಮಡುಗು ಗ್ರಾಮ ಪಂಚಾಯಿತಿಗಳಿಗೆ ಸೋಮವಾರ “ಸಂವಿಧಾನ ಜಾಗೃತಿ ಜಾಥ ರಥ”ಯಾತ್ರೆ ಆಗಮಿಸುತ್ತಿದ್ದಂತೆ ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಗುರು ಹಿರಿಯರು, ವಿವಿಧ ಸಂಘಟನೆಯ ಅಧ್ಯಕ್ಷರು, ಹಾಗೂ ಸಾರ್ವಜನಿಕರು ಕೂಡಿ ಸಡಗರ ಸಂಭ್ರಮದಿಂದ ಜಾಥಕ್ಕೆ ಸ್ವಾಗತ ಕೋರಿದರು.ಶಾಲಾ ಮಕ್ಕಳು ವಿವಿಧ ಬಗೆಯ ವೇಷ ಭೂಷಣ ಧರಿಸಿ ಜಾಥಾ ಮೆರವಣಿಗೆಗೆ ಮೆರಗು ತಂದು ಕೊಟ್ಟರು. ಮಹಿಳೆಯರು ಕುಂಭಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.



ನಂತರ ಕಾರ್ಯಕ್ರಮಕ್ಕೆ ಶಿವಾರೆಡ್ಡಿ ಚಾಲನೆ ನೀಡಿ ಮಾತನಾಡಿ, ಭಾರತವು ಪ್ರಜಾಪ್ರಭುತ್ವ ಗಣತಂತ್ರ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಇಂತಹ ಬೃಹತ್ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಅದರ ಅಡಿಯಲ್ಲಿ ತರ್ಕಬದ್ದ ಚಿಂತನೆಗಳ ಮೂಲಕ ನಮ್ಮ ಹಕ್ಕುಗಳನ್ನು ಒದಗಿಸಿ ಕೊಟ್ಟಿದ್ದಾರೆ. ಸಂವಿಧಾನ ಪ್ರಜಾಪ್ರಭುತ್ವದ ಪ್ರೇರಕ ಶಕ್ತಿಯಾಗಿ ನೆಲೆನಿಂತಿದೆ , ಸಂವಿಧಾನ ಒಂದು ವರ್ಗಕ್ಕೆ ಸೀಮಿತವಲ್ಲ ಸರ್ವ ಜನಾಂಗದ ಏಳಿಗೆಗಾಗಿ ರಚಿತವಾದ ಕಾನೂನು ಎಂದು ಹೇಳಿದರು.



ದಲಿತ ಮುಖಂಡ ವೆಂಕಟೇಶ್ ಮಾತನಾಡಿ, ಡಾ‌ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಿಂದೂ ಕೋಡ್ ಬಿಲ್ಲ್ ಜಾರಿಗೆ ತಂದು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಮುಖ್ಯವಾಹಿನಿ ಕರೆತದಂದರು, ಸಂವಿಧಾನ ಒಂದು ವರ್ಗದ ಆಸ್ತಿಯಲ್ಲ 140 ಕೋಟಿ ಭಾರತೀಯರ ಆಲೋಚನೆ ಮತ್ತು ಆಶಯ, ನಿರಂಕುಶ ಸರ್ವಾಧಿಕಾರಿ ಆಡಳಿತ ಅಂತ್ಯಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದು ನವ ಭಾರತ ನಿರ್ಮಾಣಕ್ಕೆ ಕಾಯಕಲ್ಪ ಹಾಕಿದ್ದಾರೆ. ಅಂಬೇಡ್ಕರ್ ರವರನ್ನು ಅಪ್ಪಿಕೊಂಡು ಒಪ್ಪಿಕೊಂಡು ಜೀವಿಸಿದಾಗ ಮಾತ್ರ ಯಶಸ್ಸು ಲಭ್ಯವಾಗುತ್ತದೆ ಎಂದರು.



ಈ ಸಂದರ್ಭದಲ್ಲಿ ಬಲಮಂದೆ ಅಧ್ಯಕ್ಷರಾದ ಸರಸ್ವತಿ ರಾಮ ಶೆಟ್ಟಿ,ಉಪಾಧ್ಯಕ್ಷರಾದ ಚಂದ್ರಕಲಾ,ಮಾಜಿ ಅಧ್ಯಕ್ಷರು ರಾಮೇಗೌಡ, ಶ್ರೀನಿವಾಸ್ ನಾಯ್ಡು, ಗೀತಮ್ಮ ನಾರಾಯಣಸ್ವಾಮಿ, ವರದರಾಜು ಮುಖಂಡರಾದ ಮಂಜುನಾಥ್, ಕಾರ್ಯದರ್ಶಿ ರವಿಕುಮಾರ್, ಕೇದಾರನಾಥ್,
ತೊಪ್ಪನಹಳ್ಳಿ ಅಧ್ಯಕ್ಷರು ಪ್ರಭಾಕರ್ ರೆಡ್ಡಿ, ಉಪಾಧ್ಯಕ್ಷರು ಲಾವಣ್ಯ ಹಂಸಾನಂದ,ಮಾಜಿ ಅಧ್ಯಕ್ಷ ನಾಗವೇಣಿ ಲಕ್ಷ್ಮೀನಾರಾಯಣ,ಸದಸ್ಯರು ಶ್ರೀನಿವಾಸ್, ಮುನಿಯಪ್ಪ, ಚಂದ್ರೇಗೌಡ, ಡಿಎಸ್ಎಸ್ ಶ್ರೀನಿವಾಸ್,ದೋಣಿಮಡುಗು ಅಧ್ಯಕ್ಷರು ಎಸ್. ಕೆ.ಮಂಜುಳ ಜಯಣ್ಣ,ಉಪಾಧ್ಯಕ್ಷರು ನಾಗರತ್ನಮ್ಮ ಗೋಪಾಲಪ್ಪ, ಸದಸ್ಯರು ನಾರಾಯಣಸ್ವಾಮಿ, ಸಂತೋಷ್, ವೆಂಕಟಪ್ಪ, ನಾಗಲಮುದ್ದಮ್ಮ ಕೃಷ್ಣಮೂರ್ತಿ, ಚಂಗಲ ರಾಯರೆಡ್ಡಿ , ಕೃಷ್ಣಪ್ಪ, ಪಿ ಡಿ ಓ ವಸಂತ್ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code