ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಆಗಮಿಸಿದ ತೀರ್ಥಂಕರರ ಮೂರ್ತಿ
(HASSANA): ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಆಗಮಿಸಿದ ತೀರ್ಥಂಕರರ ಮೂರ್ತಿಯನ್ನು ಚನ್ನರಾಯಪಟ್ಟಣದ ಜೈನ ಸಮುದಾಯದವರು ಅದ್ದೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಂಡರು. ನಂತರ ಚನ್ನರಾಯಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.
ನ್ಯಾಯಾಲಯದ ಆವರಣದ ಮುಂಭಾಗ ಪೂಜೆ ನೆರವೇರಿಸಿ ಬಿ ಎಂ ರಸ್ತೆ ಶ್ರೀಕಂಠ ವೃತ್ತ 40 ಅಡಿ ಆಂಜನೇಯ ದೇವಸ್ಥಾನ, ಕೆ ಆರ್ ವೃತ್ತ, ಬಾಗೂರು ರಸ್ತೆಯಿಂದ ಅರಳೆಪೇಟೆ ಮೂಲಕ ರೇಣುಕಾಂಬ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಜೈನ ಸಮುದಾಯದ ಮುಖಂಡರು ಮಹಿಳಾ ಭಕ್ತರು ಉಪಸ್ಥಿತರಿದ್ದರು.
ವರದಿ :ಶಾಮಸುಂದರ್ ಕೆ ಅಣ್ಣೇನಹಳ್ಳಿ