ಕಳ್ಳ ಮಳ್ಳರಿಂದ ದೇವಸ್ಥಾನ ಉಳಿಸಬೇಕಾಗಿದೆ ….
(SHIVAMAOGA): ಮಾರಿಕಾಂಬ ವ್ಯವಸ್ಥಾಪಕ ಸಮಿತಿಯವರು ಗಣಪತಿ ಕೆರೆ ಪಕ್ಕದಲ್ಲಿನ ಜಾಗದಲ್ಲಿ ರಸ್ತೆ ಮಾಡಲು ಏಕೆ ಹೊರಟಿದ್ದರು? ಉತ್ತರಿಸಬೇಕಾಗಿರೊದು ಇವರು ಎಂದ ಅವರು ಎಲ್ಲದಕ್ಕು ನ್ಯಾಯಾಲಯದ ಹೆಸರು ಹೇಳಿ ಎಲ್ಲರನ್ನು ಬಾಯಿ ಮುಚ್ಚಿಸುವ ಕೆಲಸ ಮಾಡ್ತಾ ಇದಾರೆ.
ಮಾರಿಕಾಂಬೆಯ ಚಂಡಿಕಾಹೋಮ ಮತ್ತು ಬ್ರಹ್ಮಕಲಶೋತ್ಸವ ನಡೆಸಬೇಕಾದರೆ ಪೂರ್ವಭಾವಿ ಸಭೆ ಏಕೆ ಕರೆಯಲಿಲ್ಲ ಇದೆಲ್ಲಾ ಅವರು ದುಡ್ಡು ಹೊಡೆಯಲು ಮಾಡಿದ ಪೂಜೆ ಅಷ್ಟೆ ಇದರಿಂದ ಅವರಿಗೆ ಅವರ ಕುಟುಂಬಕ್ಕೆ ಒಳ್ಳೆಯದಾಗಿರೊದು ಎಂದು ಕಿಡಿಕಾರಿದರು.
ಸಾಗರ ಶ್ರೀಮಾರಿಕಾಂಬ ದೇವಸ್ಥಾನಗಳ ಆಸ್ತಿ ಸಾರ್ವಜನಿಕ ದೇಣಿಗೆಯಿಂದ ಬಂದದ್ದೇ ವಿನಃ ಈಗಿರುವ ವ್ಯವಸ್ಥಾಪಕ ಸಮಿತಿಯ ಅಪ್ಪನ ಆಸ್ತಿ ಅಲ್ಲ, ಒಂದು ತಿಂಗಳೊಳಗೆ ಸಾರ್ವಜನಿಕ ಲೆಕ್ಕಪತ್ರ ನೀಡಿ, ಈಗಿರುವ ಸದಸ್ಯರ ನಡುವೆಯೇ ಚುನಾವಣೆ ನಡೆಯಬೇಕು. ಇಲ್ಲದಿದ್ದಲ್ಲಿ ಕಚೇರಿ ಎದುರು ಅಹೋರಾತ್ರಿ ಧರಣಿ ಮಾಡುವುದಾಗಿ ಎಚ್ಚರಿಸಿದರು.
ಕಳೆದ 15 ವರ್ಷ ದಿಂದ ಅಧ್ಯಕ್ಷರಾಗಿರುವ ನಾಗೇಂದ್ರ ಅವರು ರಿಯಲ್ ಎಸ್ಟೇಟ್ ದಂಧೆಯನ್ನು ಮಾರಿಕಾಂಬೆಯ ಹಣದಲ್ಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು..
ಸಾಗರದ ಎಂಎಲ್’ಎ ಅವರನ್ನು ಕರೆಯದೇ ಏಕೆ ತರಾತುರಿಯಲ್ಲಿ ಬ್ರಹ್ಮಕಲಶೋತ್ಸವ ಮಾಡಲಾಯಿತು. ಎಂಎಲ್’ಎ ಗೋಪಾಲಕೃಷ್ಣ ಬೇಳೂರು ಬಳಿ ನಾವು ವ್ಯವಸ್ಥಾಪಕ ಸಮಿತಿಯ ವಿರುದ್ದ ದೂರು ನೀಡಿದರೆ ಅವರು ದೇವಸ್ಥಾನದ ವಿಚಾರದಲ್ಲಿ ನಾನು ಮಧ್ಯ ಬರುವುದಿಲ್ಲ ಎಂದಿದ್ದಾರೆ.ಹಿಂದಿನ ಜಾತ್ರಾ ಸಮಿತಿಯಲ್ಲಿ ನಾವುಗಳು ಇರಲು ಕಾರಣ ಏನೆಂದರೆ ಅಂದಿನ ಶಾಸಕರು, ಮಾಜಿ ಸಚಿವರು, ವಕೀಲರುಗಳು ಮಧ್ಯಸ್ಥಿಕೆ ವಹಿಸಿದ್ದರು. ಅದೊಂದು ಕಾರಣದಿಂದ ನಾವು ಅಂದರೆ ಮಾರಿಕಾಂಬಾ ಹಿತರಕ್ಷಣಾ ಸಮಿತಿಯ ಸದಸ್ಯರು ಜಾತ್ರೆಯಲ್ಲಿ ಎಲ್ಲಾ ಸೇರಿ ಸಹಕರಿಸಿದ್ದೆವು ಎಂದರು.
ವಾರ್ಷಿಕ ಮಹಾಸಭೆ ಕರೆದು ನಂತರ ನ್ಯಾಯಾಲಯದ ಆದೇಶವಿದೆ ಎಂದು ಸುಳ್ಳು ಹೇಳಿ ಅದನ್ನು ರದ್ದು ಮಾಡಿದ್ದಾರೆ. ಇದರ ಹಿಂದೆ ಗಿರಿಭಟ್ಟರ ಕೈವಾಡವಿದೆ. ಜನರನ್ನು ಜಾಗೃತಗೊಳಿಸಲು ಮಾರಿಕಾಂಬ ವ್ಯವಸ್ಥಾಪಕ ಸಮಿತಿಯ ಭ್ರಷ್ಟಾಚಾರದ ಪುಸ್ತಕ ಮುದ್ರಿಸಿ ಮನೆಮನೆಗೆ ಹಂಚಲಾಗುವುದು ಈಗಿರುವ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರು ಈ ಹಿಂದೆ ಉಪಾಧ್ಯಕ್ಷರಾಗಿದ್ದು, ಅವರು ಅಂದು ಭ್ರಷ್ಟಾಚಾರ ವಿರೋದಿಸಿ ಇಂದು ಅವರೇ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಶ್ರೀಮಾರಿಕಾಂಬ ದೇವಸ್ಥಾನಗಳು ಮುಜರಾಯಿಗೆ ಹೋಗಲು ಹಿತರಕ್ಷಣಾ ಸಮಿತಿ ಬಿಡುವುದಿಲ್ಲ. ಇದು ಎಂಟು ಸಮುದಾಯಗಳಿಗೆ ಸೇರಿದ ದೇವಸ್ಥಾನ ಈ ಸಂದರ್ಭದಲ್ಲಿ ರಾಮಣ್ಣ, ಕೊಟ್ಟಪ್ಪ, ಟೀಪುಡಿ ಮಂಜು, ಚಂದ್ರಶೇಖರ, ಈಶ್ವರ, ಎಮ್ ಡಿ ಆನಂದ. ಟಿ.ರಾಮಪ್ಪ. ಅನಂದ ಬಾಳೆಕೊಪ್ಪ. ನಿತ್ಯಾನಂದ ಶೆಟ್ಟಿ. ಧರ್ಮ ರಾಜ್.bಗುರುಬಸವನ ಗವಡ. ಮಂಜುನಾಥ. ಸದಾನಂದ.ರಮೇಶ್ ಹಾಗೂ ಇನ್ನಿತರರು.
ವರದಿ: ರಾಘವೇಂದ್ರ ತಾಳಗುಪ್ಪ