ಕಾಫಿನಾಡು ಹಬ್ಬಕ್ಕೆ ಸಜ್ಜಾದ ಮಲೆನಾಡ ಮಹಿಳೆಯರೂ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಗ್ರಾಮದಲ್ಲಿ ಕಾಫಿನಾಡ ಹಬ್ಬ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಭೈರವಿ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದು, ದಿನಾಂಕ: 08-05-2024 ಬುಧವಾರ ಬೆಳಿಗ್ಗೆ 8-00ರಿಂದ ರಾತ್ರಿ 8-00 ಗಂಟೆಯವರೆಗೆ ಆಯೋಜಿಸಲಾಗಿರುವ ಕಾರ್ಯ ಕ್ರಮದಲ್ಲಿ ಮಲೆನಾಡಿನ ವಿಶೇಷ ತಿಂಡಿ-ತಿನಿಸುಗಳು, ಆಹಾರ ವೈವಿಧ್ಯಗಳು, ಗೃಹೋಪಯೋಗಿ ವಸ್ತುಗಳು, ಸೀರೆಗಳು, ಕುರ್ತಿಸ್ ಮತ್ತು ಎಲ್ಲಾ ತರಹದ ಸಿದ್ದಉಡುಪುಗಳು, ಬೆಡ್ ಶೀಟ್ ಗಳು, ಹೋಮ್ ಮೇಡ್ ಪೌಡರ್ಗಳು ಹಾಗೂ ಹೂವಿನ ಗಿಡಗಳು ಮತ್ತು ಹೂಕುಂಡಗಳು, ಬೆಳ್ಳಿ ಆಭರಣಗಳು, ಭತ್ತದ ತೋರಣ ಇತ್ಯಾದಿ ವಿವಿಧ ವಸ್ತುಗಳು ಈ ಕಾಫಿನಾಡು ಹಬ್ಬದಲ್ಲಿ ದೊರೆಯುತ್ತೀವೆ.
ಹಾಗು ವಿವಿಧ ಬಗೆಯ ಆಹಾರಗಳಾದ ರೊಟ್ಟಿ, ಕಡುಬು, ಸೇವಿಗೆ, ಇಡ್ಲಿ, ನಾಟಿಕೋಳಿ ಸಾರು, ಚಿಕನ್ ಪ್ರೈ, ಮೀನು ಊಟ. ಪೋರ್ಕ್, ಕರ್ಮೀನ್ ಚಣ್ಣ, ಸೀಗಡಿ ಚಟ್ಟಿ, ಕಸ ಕಟ್ಟು ಹಾಗೂ ಇನ್ನಿತರ ಶುಚಿ-ರುಚಿಯಾದ ಖಾದ್ಯಗಳು ಮಿತ ದರದಲ್ಲಿ ಮರಾಟ ಮಾಡಲಾಗುತ್ತದೆ. ಈಗಾಗಲೆ ಅತ್ಯಾಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲು ತಯಾರಿ ನಡೆಯುತ್ತಿದೆ.