ಆಶಾ ಹಾಗೂ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ
(VIJAYANAGARA): ಹಗರಬೊಮ್ಮನಹಳ್ಳಿಯ ಆಶಾ ಕಾರ್ಯಕರ್ತೆಯರು ಸಮಾಜವನ್ನು ರೋಗಮುಕ್ತವಾಗಿಸಲು ಶ್ರಮಿಸುತ್ತಿದ್ದು ನೈರ್ಮಲ್ಯ, ಶೌಚಾಲಯ ನಿರ್ಮಾಣ ಸೇರಿದಂತೆ ಸರಕಾರದ ವಿವಿಧ ಕಾರ್ಯಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ವಾಲ್ಮೀಕಿ ಸಮುದಾಯದ ಮುಖಂಡರಾದ ಕುಬೇರಪ್ಪ ಹೇಳಿದರು.
ಹಂಪಾಪಟ್ಟಣ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಯುವ ಮುಖಂಡರಾದ ಸಿಗೆನಹಳ್ಳಿ ಬಸವರಾಜ ರವರ 36 ನೇ ಹುಟ್ಟು ಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗಿ ಕುಡಿದು ತಿಂದು ಮಜಾ ಮಾಡುವಂತಹ ಕಾಲದಲ್ಲಿ, ಸೀಗೇನಹಳ್ಳಿ ಬಸವರಾಜ್ ರವರು ಹಮ್ಮಿಕೊಂಡಿರುವ ಮಹತ್ತರ ಕಾರ್ಯಕ್ರಮ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ, ಯುವಕರಾದ ಸೀಗೇನಹಳ್ಳಿ ಚಂದ್ರಪ್ಪ, ಗುಳೆಪ್ಪನವರ, ಕೊಟ್ರೇಶ,ಗೌತಮ್, ಟಿ, ಕೊಟ್ರೇಶ, ಕೆ ಎಸ್, ಹುಲಗಪ್ಪ, ಟಿ ಸೋಮಶೇಖರ್, ಮೈಬು, ಮಂಜುನಾಥ, ಟೈಲರ್ ಹನುಮಂತ, ಸೇರಿದಂತೆ ಇತರರು ಇದ್ದರು.
ವರದಿ: ಸುನಿಲ್ ಕುಮಾರ್ ಎಂ NSD