ಇಂತಹ ಕಾರ್ಯಕ್ರಮ ರೂಪಿಸಿದ ತಾಲ್ಲೂಕು ವಿಜ್ಞಾನ ಕೇಂದ್ರದ ಕಾರ್ಯ ಶ್ಲಾಘನೀಯ
(CHIKKAMAGALURU): ಶೃಂಗೇರಿ ತಾಲ್ಲೂಕು ವಿಜ್ಞಾನ ಕೇಂದ್ರದಿಂದ ಗಂಡಗಟ್ಟ ಶಾಲೆಯಲ್ಲಿ ಗಣಿತ ವಿಜ್ಞಾನ ವಸ್ತು ಪ್ರದರ್ಶನ, ಮಕ್ಕಳಿಗೆ ವಿವಿಧ ವಿಜ್ಞಾನ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಬೆಳಿಗ್ಗೆ ವಸ್ತುಪ್ರದರ್ಶನವನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯರಾಮ ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಕಾರಿ.
ಇಂತಹ ಕಾರ್ಯಕ್ರಮ ರೂಪಿಸಿದ ತಾಲ್ಲೂಕು ವಿಜ್ಞಾನ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಶಿಕ್ಷಕಿ ವಿಜಯಾ ಮಾತನಾಡಿ ಈ ರೀತಿ ಪ್ರಯೋಗ ಪ್ರದರ್ಶನ ಎಲ್ಲಾ ಶಾಲೆಗಳಲ್ಲೂ ನಡೆದರೆ ಒಳ್ಳೆಯದು ಎಂದರು. ತಾಲ್ಲೂಕು ವಿಜ್ಞಾನ ಕೇಂದ್ರದ ಅಧ್ಯಕ್ಷ ಶಿವಶಂಕರ್, ಖಜಾಂಚಿ ದೀಪಾ ಒಂದುವರೆ ಗಂಟೆಗೂ ಹೆಚ್ಚುಕಾಲ ತೋರಿಸಿದ ಪ್ರಯೋಗಗಳು ಮಕ್ಕಳನ್ನು ಹಾಗೂ ಪೋಷಕರನ್ನು ರಂಜಿಸಿ ವಿಜ್ಞಾನ ಒಂದು ರಂಜನೆ ಮನರಂಜನೆ ಶೀರ್ಷಿಕೆಯ ಕಾರ್ಯಕ್ರಮಕ್ಕೆ ಅರ್ಥ ಕೊಟ್ಟಿತು. ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ ಬಹುಮಾನ ವಿತರಿಸಿದರು. ಸಂಘಟನೆಯ ಕಾರ್ಯದರ್ಶಿ ಸುಜಾತಾ ಕಾರ್ಯಕ್ರಮ ಸಂಯೋಜಿಸಿ ಶಿಕ್ಷಕಿಯರಾದ ಲತಾ, ಚೈತ್ರಾ ಕಾರ್ಯಕ್ರಮ ನಿರ್ವಹಿಸಿದ್ದರು. ಪ್ರಧಾನಕಾರ್ಯದರ್ಶಿ ಸಂತೋಷ ಶೆಟ್ಟಿ ಎಲ್ಲರಿಗೂ ವಂದಿಸಿದರು.