ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಿದಲ್ಲಿ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ
(SHIVAMOGA): ಅತಿಶಯ ಶ್ರೀ ಸಿದ್ದಗಿರಿ ಕ್ಷೇತ್ರ ವಡನ್ ಬೈಲ್ ನಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮದ ನಿಮಿತ್ತ ಮಂಡಲ ಪೂಜಾ ಮಹೋತ್ಸವ
ಜೋಗ: ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಿದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಸೋಂದಾ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಸ್ವಾಮೀಜಿ ಹೇಳಿದರು. ಅಶರು ಇಲ್ಲಿಗೆ ಸಮೀಪದ ವಡನ್ ಬೈಲ್ ನಲ್ಲಿ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಮಂಡಲ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶಿರ್ವಚನ ನೀಡಿ ಜೈನ ಧರ್ಮ ಅಹಿಂಸೆ ಸತ್ಯ ಶಾಂತಿ ಸಹಬಾಳ್ವೆ ಹಾಗೂ ಸಹೋದರತೆಗೆ ಅತಿ ಮಹತ್ವವನ್ನು ನೀಡಿದ ಧರ್ಮವಾಗಿದೆ ಇಂಥ ಧರ್ಮದ ತತ್ವ ಸಿದ್ಧಾಂತಗಳನ್ನು ಆಚರಣೆ ಮಾಡುವುದರಿಂದ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗಳು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತದೆ.
ಜೈನ ಧರ್ಮ ಜಗತ್ತಿಗೆ ಸಾಕಷ್ಟು ಕೊಡುಗೆಯನ್ನು ನೀಡಿದೆ ಅದರಲ್ಲೂ ವಿಶೇಷವಾಗಿ 24 ಜನ ತೀರ್ಥಂಕರರ ಜೀವನ ಸಾಧನೆ ಹಾಗೂ ಅವರು ನಡೆದು ಬಂದ ದಾರಿ ಅದೆಲ್ಲವೂ ಸಹ ಜಗತ್ತಿನ ಸಕಲ ಜೀವಿಗಳಿಗೂ ಮಾರ್ಗದರ್ಶನವಾಗಿದೆ ಇವರ ತತ್ವ ಆದರ್ಶಗಳನ್ನು ಮನುಷ್ಯರಾದ ನಾವುಗಳು ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಗೊಳಿಸುವ ಮೂಲಕ ಸಹೋದರತೆಯಿಂದ ಬಾಳಬೇಕಾದಂತ ಅವಶ್ಯಕತೆ ಇಂದಿನ ಸಂದರ್ಭವಾಗಿದೆ. ಪ್ರಕೃತಿಯ ತಾಣದಲ್ಲಿರುವ ವಡನಬೈಲ್ ಕ್ಷೇತ್ರದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಪಂಚಕಲ್ಯಾಣ ಮಹತ್ವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ನಿಮಿತವಾಗಿ 48 ದಿನಗಳ ನಂತರ ಅದಕ್ಕೆ ಮಂಡಲ ಪೂಜಾ ಮಹೋತ್ಸವನ್ನು ಆಚರಿಸುವ ಧಾರ್ಮಿಕ ಕಾರ್ಯಗಳು ಇಂದು ನಡೆದದ್ದು ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸುವ ಕಾರ್ಯ ಇದಾಗಿದೆ.
ಇಂತಹ ಕಾರ್ಯದಲ್ಲಿ ತೊಡಗಿದ ಹಾಗೂ ಆಚಾರ ವಿಚಾರಗಳನ್ನು ಪಾಲಿಸುವ ಎಲ್ಲ ಜೀವಿಗಳಿಗೂ ಒಳ್ಳೆಯದು ಆಗಲಿ ಎನ್ನುವ ಸಂದೇಶ ಆಗಿದೆ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಬಾಳ್ವೆಯಿಂದ ಬದುಕುವಂತಾಗಲಿ ಎಂದವರು ತಿಳಿಸಿದರು. ಈ ಸಂದರ್ಭದಲ್ಲಿ ವಡನ್ ಬೈಲ್ ಕ್ಷೇತ್ರದ ಧರ್ಮದರ್ಶಿಗಳಾದ ಎಚ್.ಎಮ್. ವೀರರಾಜಯ್ಯ ಜೈನ್ ಹಾಗೂ ಗಿಡ್ಡಯ್ಯ ಜೈನ್, ದರ್ಶನ ಜೈನ್, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಾಗವಹಿಸಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ