ಚಿಕ್ಕಮಗಳೂರುರಾಜಕೀಯ

ಪಂಚಾಯಿತಿಯಲ್ಲಿ ಇಟ್ಟಿದ್ದ ಮೊಬೈಲ್ ಅನ್ನು ತೆಗೆದು ಸುಳ್ಳು ಸಂದೇಶ ಹಬ್ಬಿಸಿದ್ದಾರೆ.

ಪಂಚಾಯಿತಿಯಲ್ಲಿ ಇಟ್ಟಿದ್ದ ಮೊಬೈಲ್ ಅನ್ನು ತೆಗೆದು ಸುಳ್ಳು ಸಂದೇಶ ಹಬ್ಬಿಸಿದ್ದಾರೆ.

(CHIKKAMAGALURU): ಶೃಂಗೇರಿ ಶಾಸಕರ ಕಾರ್ಯವೈಖರಿಗೆ ಬೇಸತ್ತು ನರಸಿಂಹರಾಜಪುರ ಮಂಡಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಟರಾಜ್ ಗೇರ್ ಬೈಲ್ ರಾಜೀನಾಮೆ ನೀಡುವುದಾಗಿ ವಾಟ್ಸಪ್ಪ್ ನಲ್ಲಿ ಬರೆದುಕೊಂಡಿದ್ದಾರು.

ಶಾಸಕರ ಕಾರ್ಯ ವೈಕರಿಗೆ ಬೇಸಿತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ ಎಷ್ಟು ದಿನ ನನ್ನ ಜೊತೆ ಇದ್ದು ಸಹಕರಿಸಿದ್ದ ಎಲ್ಲಾ ಕಾರ್ಯಕರ್ತ ಮಿತ್ರರಿಗೂ ಧನ್ಯವಾದಗಳು ಎಂದು ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರು. ಈ ಸಂದೇಶವು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿತ್ತು.

ಗೇರುಬೈಲ್ ನಟರಾಜ್ ಅವರು ಈ ಸಂದೇಶಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ನನ್ನ ಮೊಬೈಲ್ ಅನ್ನು ಆಡುವಳ್ಳಿ ಗ್ರಾಮ ಪಂಚಾಯಿತಿ ತಡೆಗೋಡೆ ಮೇಲೆ ಇಟ್ಟು ಮರೆತು ಹೋಗಿದ್ದೆ ಈ ಸಂದರ್ಭದಲ್ಲಿ ಯಾರೋ ಸುಳ್ಳು ಸಂದೇಶ ಟೈಪ್ ಮಾಡಿ ನನ್ನ ವಾಟ್ಸಪ್ ಸ್ಟೇಟಸ್ ಗೆ ಹಾಕಿದ್ದಾರೆ. ನನಗೆ ಮೊಬೈಲ್ ನಲ್ಲಿ ಕರೆ ಸ್ವೀಕರಿಸಲು ಮತ್ತು ಕರೆ ಮಾಡಲು ಮಾತ್ರ ಬರುವುದು ಎಂದು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ಕೊಡುವುದಾಗಿ ತಿಳಿಸಿದ್ದು ಶಾಸಕರ ಕಾರ್ಯ ವೈಕರಿಗೆ ನನ್ನದು ಯಾವುದೇ ಅಸಮಾಧಾನ ವ್ಯಕ್ತವಾಗಿರುವುದಿಲ್ಲ ಎಂದು ತಿಳಿಸಿದ್ದು ಈ ಸಂದೇಶವು ಸುಳ್ಳು ಸಂದೇಶವಾಗಿದೆ ಎಂದು ಗೇರುಬೈಲ ನಟರಾಜು ಅವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

Scan the code