ಕ್ರೈಂ ನ್ಯೂಸ್ಚಿಕ್ಕಮಗಳೂರು

ಮುಂಗಾರು ಪೂರ್ವಮಳೆಗೆ ಇದಿಗ ಮೂರನೆ ಬಲಿ..!

ಮುಂಗಾರು ಪೂರ್ವಮಳೆಗೆ ಇದಿಗ ಮೂರನೆ ಬಲಿ..!

(CHIKKAMAGALURU): ಚಿಕ್ಕಮಗಳೂರು ಕಾಫಿನಾಡಿನ ಮಹಾಮಳೆಗೆ ಮೂರನೇ ಬಲಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಮರ ಬಿದ್ದು ಮಹಿಳೆ  ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊಪ್ಪದಿಂದ ಕಟ್ಟಿಮನೆ ಗ್ರಾಮದ ತಾಯಿ ಮನೆಗೆ ಬಂದಿದ್ದ ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆಯಲ್ಲಿ ಭಾರೀ ಗಾಳಿ-ಮಳೆಗೆ ಮಹಿಳೆ ಮೇಲೆ ಮರ ಬಿದ್ದು ಮಹಿಳೆ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮೃತ ದುರ್ದೈವಿಯನ್ನು ಕೊಪ್ಪ ಮೂಲದ ಸವಿತಾ (48) ಎಂದು ಗುರುತಿಸಲಾಗಿದೆ.
ಇದೆ ವೇಳೆಯಲ್ಲಿ ಕಾರಿನ ಮೇಲೆಯು ಏಕಕಾಲಕ್ಕೆ ಮರ ಬಿದ್ದ ಘಟನೆ ನಡೆದಿದೆ. ಕಾರಿನ ಮೇಲೆ ಮಾರ ಬಿದ್ದು ಕಾರಿನಲ್ಲಿದ್ದ ಮೂವರಿಗೂ ಗಂಭೀರ ಗಾಯವಾಗಿದ್ದು, ಕಾರಿನ ಮೇಲೆ ಬೃಹತ್ ಮರ ಬಿದ್ದುದರಿಂದಾ ಕಾರು ಸಂಪೂರ್ಣ ಜಖಂ ಆಗಿದೆ.
ಗಾಯಾಳುಗಳನ್ನು ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಡಲಾಗಿದೆ. ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುಂಗಾರು ಪೂರ್ವ  ಬಿರುಗಾಳಿ ಮಳೆಗೆ ಮೂರನೇ ಬಲಿ, ಕಳೆದ ಒಂದು ತಿಂಗಳ  ಅಂತರದಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ರು.

Leave a Reply

Your email address will not be published. Required fields are marked *

Scan the code