ಮೂರು ದಿನಗಳ ಭಾರಿ ಮಳೆ ಸಾಧ್ಯತೆ. ಮಳೆಯಿಂದ ಕೊಳೆ ರೋಗಕ್ಕೆ ತುತ್ತಾದ ಕಾಫಿ.
(CHIKKAMAGALURU): ಚಿಕ್ಕಮಗಳೂರು ಜಿಲ್ಲಾದ್ಯಂತ ಹಾಗೂ ಶಿವಮೊಗ್ಗ, ಹಾಸನ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆ, ಮಳೆಯಿಂದ ಉಂಟಾಗುತ್ತಿರುವ ಅವಾಂತರ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಚಿಕ್ಕಮಂಗಳೂರು ಪ್ರವಾಸಕ್ಕೆ ನಿರ್ಬಂಧಿಸಲಾಗಿದೆ.
ಮಳೆಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಫಸಲಿಗೆ ಬಂದು ನಿಂತಿರುವ ಕಾಫಿ, ಕಾಳು, ಮೆಣಸು ಅಡಿಕೆ ಎಲ್ಲವೂ ಮಳೆಗೆ ಕೊಳೆ ರೋಗ ಹಿಡಿದು ನೆಲಕಚ್ಚುತ್ತಿವೆ. ಕಾಫಿ , ಕಾಳು ಮೆಣಸು, ಅಡಿಕೆ ನಂಬಿಕೊಂಡಿರುವ ರೈತರಿಗೆ ಮಳೆಯು ದೊಡ್ಡ ಅವಾಂತರವೇ ಸೃಷ್ಟಿಸುತ್ತಿದೆ. ಮಲೆನಾಡು ಹಾಗೂ ಕಾಫಿ ನಾಡಿನಲ್ಲಿ ಗುಡುಗು ಸಿಡಿಲು ಸೇರಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಾಫಿಯು ಕೊಳೆ ರೋಗ ಬಂದು ಉದುರುತ್ತಿವೆ.
ಉತ್ತಮ ಬೆಲೆ ಇದ್ದರೂ ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಗಿಡದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದ ಕಾಫಿ ಕಾಯಿಗಳು ರಬಸದ ಮಳೆಗೆ ನೆಲಕ್ಕೆ ಉದುರುತ್ತಿವೆ. ಸರ್ಕಾರ ಹಾಗೂ ಕಾಫಿ ಮಂಡಳಿ ಬೆಳಗಾರರ ನೆರವಿಗೆ ಬಂದು ನಷ್ಟವಾಗಿರುವ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು, ರೈತರು ಹಾಗೂ ಬೆಳಗಾರರ ಒಕ್ಕೂಟ ನಿರ್ದೇಶಕ ಅಶೋಕ್ ರೂಪನಹಳ್ಳಿ ಆಗ್ರಹಿಸಿದ್ದಾರೆ.