ರಸ್ತೆ ಬದಿಯಲ್ಲಿ ಪ್ರವಾಸಿಗರ ಹಾವಳಿ. ಮರಕ್ಕೆ ಗುದ್ದಿದ ಟಿಪ್ಪರ್.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಸಂಸೆ ಗ್ರಾಮ ವ್ಯಾಪ್ತಿಗೆ ಬರುವ ವಾಹನಗಳಿಂದ ಸಾರ್ವಜನಿಕರಿಗೆ ಹಾಗೂ ಇತರೆ ದಿನ ನಿತ್ಯ ಸಂಚರಿಸುವ ವಾಹನ ಸವಾರರಿಗೆ ಪ್ರಾಣ ಭಯದಿಂದ ಸಂಚರಿಸುವಂತಾಗಿದೆ.
ಮಲೆನಾಡಿಗೆ ಬರುವ ಪ್ರವಾಸಿಗರು ರಸ್ತೆ ಬದಿಯಲ್ಲೇ ಗಾಡಿ ಗಳನ್ನು ಪಾರ್ಕಿಂಗ್ ಮಾಡಿ, ದಿನನಿತ್ಯ ಓಡಾಡುವ ವಾಹನಕ್ಕೆ ಅಡ್ಡಿ ಮಾಡಿದ್ದು ಈ ದಿನ ಟಿಪ್ಪರ್ ಗಾಡಿಯು ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಹಿಂದೆಯು ಇಂತ ಅಪಘಾತಗಳು ಸಂಭವಿಸಿದ್ದು ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಪಘಾತಗಳು ಇನ್ನಷ್ಟು ಹೆಚ್ಚು ಸಂಭವಿಸುತ್ತಿದೆ.
ಇನ್ನಾದರು ಸಂಸೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸರ್ವ ಸದಸ್ಯರು ಹಾಗು ಗ್ರಾ. ಪಂ ಅಭಿವೃದ್ಧಿ ಅಧಿಕಾರಿಗಳು. ಕುದುರಮುಖ ಪೋಲಿಸ್ ಠಾಣಾಧಿಕಾರಿಗಳು. ಇತ್ತ ಗಮನ ಹರಿಸಿ ಪ್ರವಾಸಿಗರು ವಾಹನ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಿದ್ದಾರೆ.