ನ್ಯೂಸ್ಶಿವಮೊಗ್ಗ

ಸಾಗರಕ್ಕೆ ಆದಷ್ಟು ಬೇಗ ಟ್ರಾಫಿಕ್ ಪೋಲಿಸ್ ಸ್ಟೇಷನ್. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್.

ಸಾಗರಕ್ಕೆ ಆದಷ್ಟು ಬೇಗ ಟ್ರಾಫಿಕ್ ಪೋಲಿಸ್ ಸ್ಟೇಷನ್. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್.

(SHIVAMOGA): ಸಾಗರ ಪಟ್ಟಣವು ದಿನೆ ದಿನೆ ಬೆಳೆಯುತ್ತಿರುವ ಪಟ್ಟಣ ಅದಕ್ಕಾಗಿ ಸಾರ್ವಜನಿಕ ಒತ್ತಾಯದ ಮೇರೆಗೆ ಸಾಗರದಲ್ಲಿ ಆದಷ್ಟು ಬೇಗ ಟ್ರಾಫಿಕ್ ಪೋಲಿಸ್ ಠಾಣೆಯು ಮಂಜೂರು ಆಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಸಾಗರ ಶಾರದಾಂಬಾ ಸಭಾ ಭವನದಲ್ಲಿ ಜನಸ್ಪಂದನ ಮತ್ತು ನೊಂದವರ ಸಭೆಯಲ್ಲಿ ಮಾತಾನಾಡಿದರು.
ಸಾರ್ವಜನಿಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಸಾರ್ವಜನಿಕರಿಂದ ಅನೇಕ ಪ್ರಶ್ನೆಗಳನ್ನು ಎಸ್.ಪಿ.ಅವರಿಗೆ ಮನವರಿಕೆ ಮಾಡಲಾಯಿತು. ಅದರಲ್ಲಿ ಬಹು ಮುಖ್ಯವಾಗಿ ಸಾಗರದಲ್ಲಿ ಓ.ಸಿ, ಗಾಂಜಾ ಪಡ್ಡೆ ಹುಡುಗರ ಬೈಕ್ ಚಾಲನೆ ‌ಇಂಟೀರಿಯರ್ ಸ್ಥಳದಲ್ಲಿ ಕುಡುಕರ ಹಾವಳಿ ಶಾಲಾ ವಾಹನಗಳಲ್ಲಿ ಅತೀ ಹೆಚ್ಚು ಮಕ್ಕಳನ್ನು ಕರೆದು ಕೊಂಡು ಹೊಗುವುದರ ಬಗ್ಗೆ ಚರ್ಚಿಸಲಾಯಿತು ಇದಕ್ಕೆ ಸ್ಪಂದಿಸಿದ ಎಸ್.ಪಿ‌.ಅವರು ಇವೆಲ್ಲದರ ಕಡೆಗೆ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದರು. ನಂತರದಲ್ಲಿ ಸಾಗರದ ಪೋಲಿಸ್ ಇಲಾಖೆಯು ಅತ್ಯಂತ ಪ್ರಮಾಣಕ ಕೆಲಸ ಮಾಡ್ತಾ ಬಂದಿದ್ದು ಇತ್ತೀಚೆಗೆ ಅಡಿಕೆ ಕಳ್ಳತನ ಇರಬಹುದು ಅಥವಾ ಬೇರೆ ಕಳ್ಳತನ ಇರಬಹುದು ಎಲ್ಲವನ್ನು ಕಂಡು ಹಿಡಿದು ತಕ್ಷಣವೇ ಅಪರಾಧಿಗಳನ್ನು ಹಿಡಿದು ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಅದೇ ರೀತಿಯಲ್ಲಿಯೂ ಪತ್ರಕರ್ತರ ಮೇಲೆ ಹಲ್ಲೆ ಹಾಗೂ ಅನಾಥರ ರಕ್ಷಣೆಗು ಪೋಲಿಸ್ ಇಲಾಖೆ ಸಿದ್ಧ ವಿದೆ ಎಂದರು. ಈಗಾಗಲೆ ಸಾಗರದ ಡಿ.ವ್ಯೆ.ಎಸ್.ಪಿ‌ ಅವರು ಪುಡಿ ಗುಂಡಾಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಾಗರ ಉಪವಿಭಾಗದ ಡಿ.ವ್ಯೆ.ಎಸ್.ಪಿ.ಗೋಪಾಲಕೃಷ್ಣ ನಾಯ್ಕ, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ, ನಾಗರಾಜ್, ಯಲ್ಲಪ್ಪ, ಸಂತೋಷ ಬಾಗೊಜಿ‌ , ಸಿದ್ಧರಾಮಪ್ಪ, ಹೊಳೆ ಬಸಪ್ಪ, ಯುವರಾಜ್ ಇನ್ನಿತರ ಪೋಲಿಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code