LatestNews & Updatesದಕ್ಷಿಣಕನ್ನಡ

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಚಿಕಿತ್ಸೆ ವೆಚ್ಚಕ್ಕಾಗಿ ಧನ ಸಹಾಯ

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಚಿಕಿತ್ಸೆ ವೆಚ್ಚಕ್ಕಾಗಿ ಧನ ಸಹಾಯ

( ಪುತ್ತೂರು: ಸೆಪ್ಟೆಂಬರ್ – 01 ) :27/08/2023ನೇ ರವಿವಾರ ಪುತ್ತೂರಿನ ಪ್ರಜ್ಞಾ ಆಶ್ರಮ ಬೀರಮಲೆ ಇಲ್ಲಿ ನಡೆದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) ಸಂಸ್ಥೆಯ 7ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ 2023 ಆಗುಸ್ಟ್(84ನೇ) ತಿಂಗಳ 2 ಮಾಸಿಕ ಸೇವಾ ಯೋಜನೆಯಲ್ಲಿ ತಲಾ 20,000 ರೂಪಾಯಿಯಂತೆ ಜಿಲ್ಲೆಯ ಇಬ್ಬರು ಅಶಕ್ತರ ಚಿಕಿತ್ಸೆ ವೆಚ್ಚಕ್ಕಾಗಿ ಧನ ಸಹಾಯವನ್ನು ಅತಿಥಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಮತ್ತು ಈಶ್ವರ್ ಮಲ್ಪೆ ಇವರಿಗೆ 2023-2024 ರ ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸೇವಾ ಸಂಸ್ಥೆಗಲಿಗೆ ಗೌರವಾರ್ಪಣೆ ಕಾರ್ಯಕ್ರಮ ಅನ್ನದಾನ ಸೇವೆ ನಡೆಯಿತು ಈ ಸಂಧರ್ಭದಲ್ಲಿ ಅರ್ಜುನ್ ಭಂಡಾರ್ಕರ್.ಈಶ್ವರ್ ಮಲ್ಪೆ.

ಟ್ರಸ್ಟ್ ನ ಅಧ್ಯಕ್ಷರಾದ ವಸಂತ್ ಪೂಜಾರಿ ಮುದಿಮರ ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Scan the code