ಗುಡುಗು ಸಿಡಿಲಿನಿಂದ ಎರಡು ಹಸುಗಳು ಸಾವು
(KOLARA): ಬಂಗಾರಪೇಟೆ: ಗುಡುಗು ಸಿಡಿಲಿನ ಆಘಾತಕ್ಕೆ ಸಿಲುಕಿ 2 ಹಸುಗಳು ಮೃತಪಟ್ಟ ಘಟನೆ ನಡೆದಿದೆ. ಪಟ್ಟಣದ ದೇಶಿಹಳ್ಳಿಯ ರವಿಕಿರಣ್ ಎಂಬವರ ಹೊಲದಲ್ಲಿ ಕಟ್ಟಿ ಹಾಕಲಾಗಿದ್ದ ಎರಡು ಹಸುಗಳು ಗುಡುಗು ಸಿಡಿಲಿನ ಆರ್ಭಟಕ್ಕೆ ಸ್ಥಳದಲ್ಲೇ ಬಲಿಯಾಗಿದೆ.
ಸುಮಾರು 1 ಲಕ್ಷಕ್ಕೂ ಹೆಚ್ಚು ನಷ್ಟವನ್ನು ಅಂದಾಜಿಸಲಾಗಿದೆ. ರವಿಕಿರಣ್ ಕುಟುಂಬದವರು ಕೆಲವು ವರುಷಗಳಿಂದ ಹೈನುಗಾರಿಕೆಯನ್ನು ಕಸುಬನ್ನಾಗಿಸಿಕೊಂಡು ಹಾಲು ಮಾರಿ ಜೀವನ ನಡೆಸುತ್ತಿದ್ದು ಹಸುಗಳ ಸಾವಿನಿಂದ ಕಂಗಾಲಾಗಿದ್ದಾರೆ. ಪಶು ವೈದ್ಯಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.